<p><strong>ಮೈಸೂರು:</strong> ಮುಂಗಾರು ಪೂರ್ವ ಮಳೆಗಳಾದ ‘ಭರಣಿ, ಅಶ್ವಿನಿ’ಸಕಾಲಕ್ಕೆ ಸುರಿಯದಿದ್ದರಿಂದ ಜಿಲ್ಲೆಯಲ್ಲಿ ತಂಬಾಕು ನಾಟಿಗೆ ಹಿನ್ನಡೆಯಾಗಿತ್ತು. ಜೂನ್ ಮೊದಲ ವಾರಕ್ಕೆ ಕೊನೆಗೊಳ್ಳಬೇಕಿದ್ದ ನಾಟಿಯ ಕೆಲಸ ಮುಂಗಾರಿನಲ್ಲಿ ಚುರುಕುಗೊಂಡಿದ್ದು, ಈ ವಾರದಲ್ಲಿ ಪೂರ್ಣಗೊಳ್ಳಲಿದೆ.</p>.<p>ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲ್ಲೂಕಿನ 60 ಸಾವಿರಕ್ಕೂ ಹೆಚ್ಚು ಕೃಷಿಕ ಕುಟುಂಬಗಳ ಪ್ರಧಾನ ವಾಣಿಜ್ಯ ಬೆಳೆ ತಂಬಾಕು. ಪೂರ್ವ ಮುಂಗಾರು ವರ್ಷಧಾರೆ ಸಕಾಲಕ್ಕೆ ಸುರಿಯದಿದ್ದರಿಂದ, ಈ ಬಾರಿ ಬಹುತೇಕ ಬೆಳೆಗಾರರಿಗೆ ಮಳೆಯಾಶ್ರಿತ ಬೆಳೆಯಾದ ತಂಬಾಕಿನ ನಾಟಿಗೆ ಅವಕಾಶವೇ ಸಿಕ್ಕಿರಲಿಲ್ಲ.</p>.<p>ಮುಂಗಾರಿನ ಸಿಂಚನದೊಂದಿಗೆ ನಾಟಿಯೂ ಚುರುಕುಗೊಂಡಿದೆ. ಭರಣಿ, ಅಶ್ವಿನಿ ಮಳೆಗೆ ನಾಟಿ ಮಾಡಿ<br />ದರೆ ಮಾತ್ರ ಬಂಪರ್ ಇಳುವರಿ ಬರಲಿದೆ. ನಂತರ ನಾಟಿ ಮಾಡಿದರೆ ಉತ್ಕೃಷ್ಟ ದರ್ಜೆಯ ತಂಬಾಕು ಉತ್ಪನ್ನ ಸಿಗಲ್ಲ. ಇಳುವರಿಯೂ ಅರ್ಧದಷ್ಟು ಕುಸಿಯ<br />ಲಿದೆ. ಇದು ಗೊತ್ತಿದ್ದರೂ ಬ್ಯಾಂಕ್ನಿಂದ ಸಾಲ ಪಡೆದು, ಅಗತ್ಯ ಸಿದ್ಧತೆಗಳನ್ನು ನಡೆಸಿಕೊಂಡಿದ್ದ ತಪ್ಪಿಗೆ ಇದೀಗ ನಾಟಿ ನಡೆದಿದೆ ಎನ್ನುತ್ತಾರೆ ಬೆಟ್ಟದಪುರದ ತಂಬಾಕು ಬೆಳೆಗಾರ ಆರ್.ವೆಂಕಟೇಶ್.</p>.<p>‘ಒಂಬತ್ತು ಎಕರೆಯಲ್ಲಿ ತಂಬಾಕು ಸಸಿ ನಾಟಿ ಮಾಡಿರುವೆ. ಈ ವೇಳೆಗಾಗಲೇ ಗಿಡಗಳಿಗೆ ಒಂದು ಸುತ್ತು ಗೊಬ್ಬರ ನೀಡಬೇಕಿತ್ತು. ಸಸಿ ಬೆಳವಣಿಗೆಯ ಹಂತದಲ್ಲಿರಬೇಕಿತ್ತು. ಮಳೆಯ ಅಭಾವದಿಂದ ಇದು ಸಾಧ್ಯವಾಗಿಲ್ಲ. ಇದೀಗ ಎರಡು ದಿನದಿಂದ ಸುರಿಯುತ್ತಿರುವ ಸೋನೆ ಮಳೆಯೂ ಸಾಕಾಗಲ್ಲ. ಈ ವರ್ಷ ಮಳೆ ಸಾಕಷ್ಟು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಹೇಗೆ ನಡೆಸುತ್ತೆ? ಎಂಬುದೇ ಆತಂಕ ಸೃಷ್ಟಿಸಿದೆ’ ಎಂದರು.</p>.<p>‘ಹಿಂದಿನ ವರ್ಷದ ಹರಾಜಿನ ಕೊನೆಯ ದಿನಗಳಲ್ಲಿ ಖರೀದಿದಾರರು ಉದ್ದೇಶ ಪೂರ್ವಕವಾಗಿ ಒಂದು ಕೆ.ಜಿ. ತಂಬಾ<br />ಕನ್ನು ₹ 230ರ ದರದವರೆಗೂ ಖರೀದಿಸಿದರು. ಇದು ಕೇವಲ ಶೇ 1ರಷ್ಟು ಸೊಪ್ಪಿಗೆ ಮಾತ್ರ. ಉಳಿದ ಸೊಪ್ಪು ಕಾಸಿಗೆ ಕಡೆಯಾಗಿ ಮಾರಾಟವಾಗಿತ್ತು. ಸಾಕಷ್ಟು ಬೆಳೆಗಾರರು ನಷ್ಟವನ್ನು ಅನುಭವಿಸಿದರು.’</p>.<p>‘ಆದರೂ ಕೊನೆ ದಿನಗಳಲ್ಲಿ ಹೆಚ್ಚಿನ ಬೆಲೆ ಬಂದಿದ್ದನ್ನು ಗಮನಿಸಿದ ಅಸಂಖ್ಯಾತ ಬೆಳೆಗಾರರು ಈ ವರ್ಷ ಉತ್ತಮ ಧಾರಣೆ ಸಿಗಬ<br />ಹುದು ಎಂಬ ನಿರೀಕ್ಷೆಯಿಂದ ತಮ್ಮ ಜಮೀನಿನಲ್ಲಿ ಹೆಚ್ಚಿನ ನಾಟಿ ಮಾಡಿದ್ದಾರೆ. ಕೃಷಿಕರ ಉತ್ಸಾಹಕ್ಕೆ ತಂಬಾಕು ಮಂಡಳಿಯೂ ಸಾಥ್ ನೀಡಿದೆ. ಹೆಚ್ಚು ತಂಬಾಕು ಉತ್ಪಾ<br />ದಿಸಲು ಪರವಾನಗಿ ನೀಡಿದೆ’ ಎಂದು ವೆಂಕಟೇಶ್ ಮಾಹಿತಿ ನೀಡಿದರು.</p>.<p class="Briefhead">ಮಳೆ ಕೊರತೆ: ತಡವಾದ ನಾಟಿ</p>.<p>‘ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ 38ರಷ್ಟು ಮಳೆ ಕಡಿಮೆ ಸುರಿದಿದೆ. ಇದರಿಂದ ತಂಬಾಕು ನಾಟಿಗೆ ಹಿನ್ನಡೆಯಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದರು.</p>.<p>‘ಏಪ್ರಿಲ್ ಅಂತ್ಯದಿಂದ ಜೂನ್ ಮೊದಲ ವಾರದೊಳಗೆ ತಂಬಾಕಿನ ಸಸಿ ನಾಟಿ ಕಾರ್ಯ ಪ್ರತಿ ವರ್ಷವೂ ನಡೆಯುತ್ತಿತ್ತು. ಆದರೆ ಈ ಬಾರಿ ಎರಡು ವಾರ ವಿಳಂಬವಾಗಿದೆ. ನಿಗದಿ ಪಡಿಸಿದ ಗುರಿಯನ್ನು ಜೂನ್ ಮೂರನೇ ವಾರದಲ್ಲಿ ಪೂರ್ಣಗೊಳಿಸಲಿದ್ದೇವೆ’ ಎಂಬ ವಿಶ್ವಾಸವನ್ನು ಅವರು ‘ಪ್ರಜಾವಾಣಿ’ ಬಳಿ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮುಂಗಾರು ಪೂರ್ವ ಮಳೆಗಳಾದ ‘ಭರಣಿ, ಅಶ್ವಿನಿ’ಸಕಾಲಕ್ಕೆ ಸುರಿಯದಿದ್ದರಿಂದ ಜಿಲ್ಲೆಯಲ್ಲಿ ತಂಬಾಕು ನಾಟಿಗೆ ಹಿನ್ನಡೆಯಾಗಿತ್ತು. ಜೂನ್ ಮೊದಲ ವಾರಕ್ಕೆ ಕೊನೆಗೊಳ್ಳಬೇಕಿದ್ದ ನಾಟಿಯ ಕೆಲಸ ಮುಂಗಾರಿನಲ್ಲಿ ಚುರುಕುಗೊಂಡಿದ್ದು, ಈ ವಾರದಲ್ಲಿ ಪೂರ್ಣಗೊಳ್ಳಲಿದೆ.</p>.<p>ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲ್ಲೂಕಿನ 60 ಸಾವಿರಕ್ಕೂ ಹೆಚ್ಚು ಕೃಷಿಕ ಕುಟುಂಬಗಳ ಪ್ರಧಾನ ವಾಣಿಜ್ಯ ಬೆಳೆ ತಂಬಾಕು. ಪೂರ್ವ ಮುಂಗಾರು ವರ್ಷಧಾರೆ ಸಕಾಲಕ್ಕೆ ಸುರಿಯದಿದ್ದರಿಂದ, ಈ ಬಾರಿ ಬಹುತೇಕ ಬೆಳೆಗಾರರಿಗೆ ಮಳೆಯಾಶ್ರಿತ ಬೆಳೆಯಾದ ತಂಬಾಕಿನ ನಾಟಿಗೆ ಅವಕಾಶವೇ ಸಿಕ್ಕಿರಲಿಲ್ಲ.</p>.<p>ಮುಂಗಾರಿನ ಸಿಂಚನದೊಂದಿಗೆ ನಾಟಿಯೂ ಚುರುಕುಗೊಂಡಿದೆ. ಭರಣಿ, ಅಶ್ವಿನಿ ಮಳೆಗೆ ನಾಟಿ ಮಾಡಿ<br />ದರೆ ಮಾತ್ರ ಬಂಪರ್ ಇಳುವರಿ ಬರಲಿದೆ. ನಂತರ ನಾಟಿ ಮಾಡಿದರೆ ಉತ್ಕೃಷ್ಟ ದರ್ಜೆಯ ತಂಬಾಕು ಉತ್ಪನ್ನ ಸಿಗಲ್ಲ. ಇಳುವರಿಯೂ ಅರ್ಧದಷ್ಟು ಕುಸಿಯ<br />ಲಿದೆ. ಇದು ಗೊತ್ತಿದ್ದರೂ ಬ್ಯಾಂಕ್ನಿಂದ ಸಾಲ ಪಡೆದು, ಅಗತ್ಯ ಸಿದ್ಧತೆಗಳನ್ನು ನಡೆಸಿಕೊಂಡಿದ್ದ ತಪ್ಪಿಗೆ ಇದೀಗ ನಾಟಿ ನಡೆದಿದೆ ಎನ್ನುತ್ತಾರೆ ಬೆಟ್ಟದಪುರದ ತಂಬಾಕು ಬೆಳೆಗಾರ ಆರ್.ವೆಂಕಟೇಶ್.</p>.<p>‘ಒಂಬತ್ತು ಎಕರೆಯಲ್ಲಿ ತಂಬಾಕು ಸಸಿ ನಾಟಿ ಮಾಡಿರುವೆ. ಈ ವೇಳೆಗಾಗಲೇ ಗಿಡಗಳಿಗೆ ಒಂದು ಸುತ್ತು ಗೊಬ್ಬರ ನೀಡಬೇಕಿತ್ತು. ಸಸಿ ಬೆಳವಣಿಗೆಯ ಹಂತದಲ್ಲಿರಬೇಕಿತ್ತು. ಮಳೆಯ ಅಭಾವದಿಂದ ಇದು ಸಾಧ್ಯವಾಗಿಲ್ಲ. ಇದೀಗ ಎರಡು ದಿನದಿಂದ ಸುರಿಯುತ್ತಿರುವ ಸೋನೆ ಮಳೆಯೂ ಸಾಕಾಗಲ್ಲ. ಈ ವರ್ಷ ಮಳೆ ಸಾಕಷ್ಟು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಹೇಗೆ ನಡೆಸುತ್ತೆ? ಎಂಬುದೇ ಆತಂಕ ಸೃಷ್ಟಿಸಿದೆ’ ಎಂದರು.</p>.<p>‘ಹಿಂದಿನ ವರ್ಷದ ಹರಾಜಿನ ಕೊನೆಯ ದಿನಗಳಲ್ಲಿ ಖರೀದಿದಾರರು ಉದ್ದೇಶ ಪೂರ್ವಕವಾಗಿ ಒಂದು ಕೆ.ಜಿ. ತಂಬಾ<br />ಕನ್ನು ₹ 230ರ ದರದವರೆಗೂ ಖರೀದಿಸಿದರು. ಇದು ಕೇವಲ ಶೇ 1ರಷ್ಟು ಸೊಪ್ಪಿಗೆ ಮಾತ್ರ. ಉಳಿದ ಸೊಪ್ಪು ಕಾಸಿಗೆ ಕಡೆಯಾಗಿ ಮಾರಾಟವಾಗಿತ್ತು. ಸಾಕಷ್ಟು ಬೆಳೆಗಾರರು ನಷ್ಟವನ್ನು ಅನುಭವಿಸಿದರು.’</p>.<p>‘ಆದರೂ ಕೊನೆ ದಿನಗಳಲ್ಲಿ ಹೆಚ್ಚಿನ ಬೆಲೆ ಬಂದಿದ್ದನ್ನು ಗಮನಿಸಿದ ಅಸಂಖ್ಯಾತ ಬೆಳೆಗಾರರು ಈ ವರ್ಷ ಉತ್ತಮ ಧಾರಣೆ ಸಿಗಬ<br />ಹುದು ಎಂಬ ನಿರೀಕ್ಷೆಯಿಂದ ತಮ್ಮ ಜಮೀನಿನಲ್ಲಿ ಹೆಚ್ಚಿನ ನಾಟಿ ಮಾಡಿದ್ದಾರೆ. ಕೃಷಿಕರ ಉತ್ಸಾಹಕ್ಕೆ ತಂಬಾಕು ಮಂಡಳಿಯೂ ಸಾಥ್ ನೀಡಿದೆ. ಹೆಚ್ಚು ತಂಬಾಕು ಉತ್ಪಾ<br />ದಿಸಲು ಪರವಾನಗಿ ನೀಡಿದೆ’ ಎಂದು ವೆಂಕಟೇಶ್ ಮಾಹಿತಿ ನೀಡಿದರು.</p>.<p class="Briefhead">ಮಳೆ ಕೊರತೆ: ತಡವಾದ ನಾಟಿ</p>.<p>‘ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ 38ರಷ್ಟು ಮಳೆ ಕಡಿಮೆ ಸುರಿದಿದೆ. ಇದರಿಂದ ತಂಬಾಕು ನಾಟಿಗೆ ಹಿನ್ನಡೆಯಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದರು.</p>.<p>‘ಏಪ್ರಿಲ್ ಅಂತ್ಯದಿಂದ ಜೂನ್ ಮೊದಲ ವಾರದೊಳಗೆ ತಂಬಾಕಿನ ಸಸಿ ನಾಟಿ ಕಾರ್ಯ ಪ್ರತಿ ವರ್ಷವೂ ನಡೆಯುತ್ತಿತ್ತು. ಆದರೆ ಈ ಬಾರಿ ಎರಡು ವಾರ ವಿಳಂಬವಾಗಿದೆ. ನಿಗದಿ ಪಡಿಸಿದ ಗುರಿಯನ್ನು ಜೂನ್ ಮೂರನೇ ವಾರದಲ್ಲಿ ಪೂರ್ಣಗೊಳಿಸಲಿದ್ದೇವೆ’ ಎಂಬ ವಿಶ್ವಾಸವನ್ನು ಅವರು ‘ಪ್ರಜಾವಾಣಿ’ ಬಳಿ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>