<p><strong>ಮೈಸೂರು</strong>: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಂಗಪ್ರೇಮಿಗಳಿಗೆ ರಸದೌತಣ ಉಣಬಡಿಸಲಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಶನಿವಾರ ಸಂಜೆ ಇಲ್ಲಿ ‘ವೃಕ್ಷಮಾತೆ’ ತುಳಸೀಗೌಡ ಚಾಲನೆ ನೀಡಿದರು.<br /><br />ಒಂಬತ್ತು ದಿನಗಳ ಉತ್ಸವ ನಡೆಯಲಿದ್ದು, ಮೈಸೂರು ರಂಗಾಯಣದಲ್ಲಿ ಕಲಾ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ನಿತ್ಯ ನಾಟಕ, ಚಲನಚಿತ್ರೋತ್ಸವ, ಸಂಗೀತ ಮೇಲೈಸಲಿವೆ. ವಿವಿಧ ಭಾಷೆಗಳ ನಾಟಕಗಳು, ರಾಜ್ಯ ಹಾಗೂ ಹೊರರಾಜ್ಯದ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದೆ.</p>.<p>‘ತಾಯಿ’ ವಿಷಯ ಪ್ರಧಾನವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಎಲ್ಲ ಸಿದ್ಧತೆಗಳನ್ನೂ ‘ತಾಯಿ’ ಪರಿಕಲ್ಪನೆಯಲ್ಲೇ ಮಾಡಲಾಗಿದೆ. ‘ಜಮೀನು–ಜಲ–ಜಂಗಲ್–ಜಾನುವಾರು–ಜನ’ ಪಂಚಸೂತ್ರದಡಿ ತಾಯಿ ಮತ್ತು ತಾಯ್ತನ ನೋಡುವ ಪ್ರಯತ್ನ ನಡೆದಿದೆ.</p>.<p>ಆಹಾರ ಮಳಿಗೆ ಸೇರಿದಂತೆ ಒಟ್ಟು 80 ಮಳಿಗೆ ಹಾಕಲಾಗಿದೆ. ಗುಡಿಕೈಗಾರಿಕೆ, ಕುಂಬಾರಿಕೆ ಮತ್ತು ನೇಕಾರಿಕೆ ಬಗ್ಗೆ ಮಾಹಿತಿ ಒದಗಿಸುವ ಐದು ಪ್ರಾತ್ಯಕ್ಷಿಕೆ ಮಳಿಗೆಗಳನ್ನು ತೆರೆಯಲಾಗಿದೆ.</p>.<p>ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಟಿ ಮಾಳವಿಕಾ ಅವಿನಾಶ್, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕಾರ್ಯಕ್ರಮದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಂಗಪ್ರೇಮಿಗಳಿಗೆ ರಸದೌತಣ ಉಣಬಡಿಸಲಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಶನಿವಾರ ಸಂಜೆ ಇಲ್ಲಿ ‘ವೃಕ್ಷಮಾತೆ’ ತುಳಸೀಗೌಡ ಚಾಲನೆ ನೀಡಿದರು.<br /><br />ಒಂಬತ್ತು ದಿನಗಳ ಉತ್ಸವ ನಡೆಯಲಿದ್ದು, ಮೈಸೂರು ರಂಗಾಯಣದಲ್ಲಿ ಕಲಾ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ನಿತ್ಯ ನಾಟಕ, ಚಲನಚಿತ್ರೋತ್ಸವ, ಸಂಗೀತ ಮೇಲೈಸಲಿವೆ. ವಿವಿಧ ಭಾಷೆಗಳ ನಾಟಕಗಳು, ರಾಜ್ಯ ಹಾಗೂ ಹೊರರಾಜ್ಯದ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದೆ.</p>.<p>‘ತಾಯಿ’ ವಿಷಯ ಪ್ರಧಾನವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಎಲ್ಲ ಸಿದ್ಧತೆಗಳನ್ನೂ ‘ತಾಯಿ’ ಪರಿಕಲ್ಪನೆಯಲ್ಲೇ ಮಾಡಲಾಗಿದೆ. ‘ಜಮೀನು–ಜಲ–ಜಂಗಲ್–ಜಾನುವಾರು–ಜನ’ ಪಂಚಸೂತ್ರದಡಿ ತಾಯಿ ಮತ್ತು ತಾಯ್ತನ ನೋಡುವ ಪ್ರಯತ್ನ ನಡೆದಿದೆ.</p>.<p>ಆಹಾರ ಮಳಿಗೆ ಸೇರಿದಂತೆ ಒಟ್ಟು 80 ಮಳಿಗೆ ಹಾಕಲಾಗಿದೆ. ಗುಡಿಕೈಗಾರಿಕೆ, ಕುಂಬಾರಿಕೆ ಮತ್ತು ನೇಕಾರಿಕೆ ಬಗ್ಗೆ ಮಾಹಿತಿ ಒದಗಿಸುವ ಐದು ಪ್ರಾತ್ಯಕ್ಷಿಕೆ ಮಳಿಗೆಗಳನ್ನು ತೆರೆಯಲಾಗಿದೆ.</p>.<p>ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಟಿ ಮಾಳವಿಕಾ ಅವಿನಾಶ್, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕಾರ್ಯಕ್ರಮದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>