ಈಚೆಗಷ್ಟೇ ಸರ್ಕಾರವು ಚಾಮರಾಜನಗರದ ಪ್ರದೀಪ್ ಕುಮಾರ್ ದೀಕ್ಷಿತ್, ಮಂಡ್ಯದ ಪ್ರೊ.ದೊಡ್ಡಾಚಾರಿ (ಸಾಮಾನ್ಯ), ಈ.ಸಿ.ನಿಂಗರಾಜ ಗೌಡ (ಹಿಂದುಳಿದ ವರ್ಗ), ಮೈಸೂರಿನ ಸಿಂಧು ಸುರೇಶ್ (ಮಹಿಳೆ), ಹಾಸನದ ಡಾ.ದಾಮೋದರ (ಪರಶಿಷ್ಟ ಪಂಗಡ), ಬೆಂಗಳೂರಿನ ಡಾ.ಸೈಯದ್ ಕಾಝಾ ಮೊಹಿದ್ದೀನ್ (ಅಲ್ಪಸಂಖ್ಯಾತ) ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಇವರ ಪೈಕಿ ಸಿಂಧು ಸುರೇಶ್ ಅವರು 2002ರಲ್ಲಿ ಪ್ರೊ.ಜೆ.ಶಶಿಧರ ಪ್ರಸಾದ್ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು ಎನ್ನುವುದು ವಿವಾದಕ್ಕೆ ಕಾರಣವಾಗಿದೆ.