<p>ತರಕಾರಿಗಳು; ನ.1; ನ.8 (₹ ಗಳಲ್ಲಿ)</p>.<p>ಟೊಮೆಟೊ; 26; 34</p>.<p>ಕ್ಯಾರೆಟ್; 35; 50</p>.<p>ನುಗ್ಗೆಕಾಯಿ; 60; 100</p>.<p>ಹಸಿಮೆಣಸಿನಕಾಯಿ; 15; 23</p>.<p>ಹಸಿಶುಂಠಿ; 40; 50</p>.<p>ಈರುಳ್ಳಿ; 31; 35</p>.<p>ಬದನೆ; 22; 30</p>.<p>ಸಿಹಿಗುಂಬಳ; 05; 06</p>.<p>ಆಲುಗೆಡ್ಡೆ; 22; 25</p>.<p>ಬೀನ್ಸ್; 25; 23</p>.<p>ಹೂಕೋಸು; 30; 24</p>.<p>ದಪ್ಪಮೆಣಸಿನಕಾಯಿ; 85; 85</p>.<p>ಎಲೆಕೋಸು; 08; 08</p>.<p>ಬೆಂಡೆಕಾಯಿ; 20; 20</p>.<p>***</p>.<p>ಮೈಸೂರು: ಕಾರ್ತಿಕ ಮಾಸದ ಬರುವಿಕೆಯೊಂದಿಗೆ ತರಕಾರಿಗಳಿಗೂ ಬೇಡಿಕ ಹೆಚ್ಚಿದ ಪರಿಣಾಮ ದರವೂ ದುಬಾರಿಯಾಗಿದೆ. ಟೊಮೆಟೊ, ಕ್ಯಾರೆಟ್, ನುಗ್ಗೆಕಾಯಿ, ಹಸಿಮೆಣಸಿನಕಾಯಿ, ಹಸಿಶುಂಠಿ, ಈರುಳ್ಳಿ, ಬದನೆ, ಸಿಹಿಗುಂಬಳ, ಆಲುಗೆಡ್ಡೆಯ ಬೆಲೆಗಳು ಏರಿಕೆಯಾಗಿ, ಗ್ರಾಹಕರು ಹೈರಣಾಗಿದ್ದಾರೆ. ಉಳಿದ ತರಕಾರಿಗಳ ಧಾರಣೆಗಳೂ ಏರಿಕೆ ಸ್ಥಿತಿಯಲ್ಲೇ ಇವೆ.</p>.<p>ಕಾರ್ತಿಕ ಮಾಸದಲ್ಲಿ ಮದುವೆ, ಗೃಹಪ್ರವೇಶ, ನಾಮಕರಣದಂಥ ಶುಭಕಾರ್ಯಗಳು ಹೆಚ್ಚಾಗಿವೆ. ನಿತ್ಯವೂ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿದೆ.</p>.<p>‘ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಕೇರಳದಲ್ಲಿ ಹೋಟೆಲ್ ಉದ್ಯಮ ಚೇತರಿಸಿಕೊಂಡಿದೆ. ಇಲ್ಲಿನ ಎಪಿಎಂಸಿಯಿಂದ ಬಹುತೇಕ ತರಕಾರಿಗಳನ್ನು ಕೇರಳದಿಂದ ಬಂದ ವ್ಯಾಪಾರಿಗಳೇ ಖರೀದಿಸುತ್ತಿದ್ದಾರೆ. ಆ ಕಾರಣದಿಂದಲೂ ಬೆಲೆಗಳು ದುಬಾರಿಯಾಗುತ್ತಿವೆ’ ಎಂದು ಎಪಿಎಂಸಿಯ ವರ್ತಕ ಕೃಷ್ಣರಾಜು ತಿಳಿಸಿದರು.</p>.<p>ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಲೂ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ.</p>.<p>ಶುಭ ಸಮಾರಂಭಗಳನ್ನು ಆಯೋಜಿಸುವವರ ಪರಿಸ್ಥಿತಿ ಶೋಚನೀಯವಾಗಿದೆ. ತರಕಾರಿ ಬೆಲೆಗಳ ಏರುಗತಿ ಕಂಡು ಮಾರುಕಟ್ಟೆಗಳನ್ನು ಬಿಟ್ಟು ಸಂತೆಯಲ್ಲಿ ಖರೀದಿಸುವತ್ತ ಬಹಳಷ್ಟು ಮಂದಿ ಯೋಚಿಸುವಂತಾಗಿದೆ. ಎಲ್ಲೇ ಹೋದರೂ ಅಗ್ಗದ ಧಾರಣೆ ಮರೀಚಿಕೆ ಎನಿಸಿದೆ.</p>.<p>ನುಗ್ಗೆಕಾಯಿಯ ಸಗಟು ಧಾರಣೆ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದೇ ವಾರದಲ್ಲಿ ಕೆ.ಜಿಗೆ ₹ 60ರಿಂದ ₹ 100ಕ್ಕೆ ಹೆಚ್ಚಿದ್ದರೆ, ಕ್ಯಾರೆಟ್ ₹ 35ರಿಂದ ₹ 50ಕ್ಕೆ ದುಬಾರಿಯಾಗಿದೆ. ಟೊಮೆಟೊ ₹ 26ರಿಂದ ₹ 34ಕ್ಕೆ ಏರಿಕೆ ಕಂಡಿದೆ. ಹಾಪ್ಕಾಮ್ಸ್ನಲ್ಲಿ ನುಗ್ಗೆ ₹ 130, ಕ್ಯಾರೆಟ್ ₹ 80, ಟೊಮೆಟೊ ₹ 65ಕ್ಕೆ ಮಾರಾಟವಾಗಿದೆ.</p>.<p>ಒಂದು ವಾರದಿಂದಲೂ ಮಳೆ ಬಿಡುವು ನೀಡದೇ ಇರುವುದರಿಂದ ಸೊಪ್ಪಿನ ಧಾರಣೆಯಲ್ಲೂ ಇಳಿಕೆಯಾಗಿಲ್ಲ. ಒಂದು ಕಟ್ಟಿಗೆ ₹ 5ರಿಂದ ₹ 10ರವರೆಗೂ ಬೆಲೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತರಕಾರಿಗಳು; ನ.1; ನ.8 (₹ ಗಳಲ್ಲಿ)</p>.<p>ಟೊಮೆಟೊ; 26; 34</p>.<p>ಕ್ಯಾರೆಟ್; 35; 50</p>.<p>ನುಗ್ಗೆಕಾಯಿ; 60; 100</p>.<p>ಹಸಿಮೆಣಸಿನಕಾಯಿ; 15; 23</p>.<p>ಹಸಿಶುಂಠಿ; 40; 50</p>.<p>ಈರುಳ್ಳಿ; 31; 35</p>.<p>ಬದನೆ; 22; 30</p>.<p>ಸಿಹಿಗುಂಬಳ; 05; 06</p>.<p>ಆಲುಗೆಡ್ಡೆ; 22; 25</p>.<p>ಬೀನ್ಸ್; 25; 23</p>.<p>ಹೂಕೋಸು; 30; 24</p>.<p>ದಪ್ಪಮೆಣಸಿನಕಾಯಿ; 85; 85</p>.<p>ಎಲೆಕೋಸು; 08; 08</p>.<p>ಬೆಂಡೆಕಾಯಿ; 20; 20</p>.<p>***</p>.<p>ಮೈಸೂರು: ಕಾರ್ತಿಕ ಮಾಸದ ಬರುವಿಕೆಯೊಂದಿಗೆ ತರಕಾರಿಗಳಿಗೂ ಬೇಡಿಕ ಹೆಚ್ಚಿದ ಪರಿಣಾಮ ದರವೂ ದುಬಾರಿಯಾಗಿದೆ. ಟೊಮೆಟೊ, ಕ್ಯಾರೆಟ್, ನುಗ್ಗೆಕಾಯಿ, ಹಸಿಮೆಣಸಿನಕಾಯಿ, ಹಸಿಶುಂಠಿ, ಈರುಳ್ಳಿ, ಬದನೆ, ಸಿಹಿಗುಂಬಳ, ಆಲುಗೆಡ್ಡೆಯ ಬೆಲೆಗಳು ಏರಿಕೆಯಾಗಿ, ಗ್ರಾಹಕರು ಹೈರಣಾಗಿದ್ದಾರೆ. ಉಳಿದ ತರಕಾರಿಗಳ ಧಾರಣೆಗಳೂ ಏರಿಕೆ ಸ್ಥಿತಿಯಲ್ಲೇ ಇವೆ.</p>.<p>ಕಾರ್ತಿಕ ಮಾಸದಲ್ಲಿ ಮದುವೆ, ಗೃಹಪ್ರವೇಶ, ನಾಮಕರಣದಂಥ ಶುಭಕಾರ್ಯಗಳು ಹೆಚ್ಚಾಗಿವೆ. ನಿತ್ಯವೂ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿದೆ.</p>.<p>‘ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಕೇರಳದಲ್ಲಿ ಹೋಟೆಲ್ ಉದ್ಯಮ ಚೇತರಿಸಿಕೊಂಡಿದೆ. ಇಲ್ಲಿನ ಎಪಿಎಂಸಿಯಿಂದ ಬಹುತೇಕ ತರಕಾರಿಗಳನ್ನು ಕೇರಳದಿಂದ ಬಂದ ವ್ಯಾಪಾರಿಗಳೇ ಖರೀದಿಸುತ್ತಿದ್ದಾರೆ. ಆ ಕಾರಣದಿಂದಲೂ ಬೆಲೆಗಳು ದುಬಾರಿಯಾಗುತ್ತಿವೆ’ ಎಂದು ಎಪಿಎಂಸಿಯ ವರ್ತಕ ಕೃಷ್ಣರಾಜು ತಿಳಿಸಿದರು.</p>.<p>ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಲೂ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ.</p>.<p>ಶುಭ ಸಮಾರಂಭಗಳನ್ನು ಆಯೋಜಿಸುವವರ ಪರಿಸ್ಥಿತಿ ಶೋಚನೀಯವಾಗಿದೆ. ತರಕಾರಿ ಬೆಲೆಗಳ ಏರುಗತಿ ಕಂಡು ಮಾರುಕಟ್ಟೆಗಳನ್ನು ಬಿಟ್ಟು ಸಂತೆಯಲ್ಲಿ ಖರೀದಿಸುವತ್ತ ಬಹಳಷ್ಟು ಮಂದಿ ಯೋಚಿಸುವಂತಾಗಿದೆ. ಎಲ್ಲೇ ಹೋದರೂ ಅಗ್ಗದ ಧಾರಣೆ ಮರೀಚಿಕೆ ಎನಿಸಿದೆ.</p>.<p>ನುಗ್ಗೆಕಾಯಿಯ ಸಗಟು ಧಾರಣೆ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದೇ ವಾರದಲ್ಲಿ ಕೆ.ಜಿಗೆ ₹ 60ರಿಂದ ₹ 100ಕ್ಕೆ ಹೆಚ್ಚಿದ್ದರೆ, ಕ್ಯಾರೆಟ್ ₹ 35ರಿಂದ ₹ 50ಕ್ಕೆ ದುಬಾರಿಯಾಗಿದೆ. ಟೊಮೆಟೊ ₹ 26ರಿಂದ ₹ 34ಕ್ಕೆ ಏರಿಕೆ ಕಂಡಿದೆ. ಹಾಪ್ಕಾಮ್ಸ್ನಲ್ಲಿ ನುಗ್ಗೆ ₹ 130, ಕ್ಯಾರೆಟ್ ₹ 80, ಟೊಮೆಟೊ ₹ 65ಕ್ಕೆ ಮಾರಾಟವಾಗಿದೆ.</p>.<p>ಒಂದು ವಾರದಿಂದಲೂ ಮಳೆ ಬಿಡುವು ನೀಡದೇ ಇರುವುದರಿಂದ ಸೊಪ್ಪಿನ ಧಾರಣೆಯಲ್ಲೂ ಇಳಿಕೆಯಾಗಿಲ್ಲ. ಒಂದು ಕಟ್ಟಿಗೆ ₹ 5ರಿಂದ ₹ 10ರವರೆಗೂ ಬೆಲೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>