ಅಖಿಲ ಭಾರತ ಏಕತಾ ಪರಿಷತ್ನ ಅಧ್ಯಕ್ಷ, ಗಾಂಧಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ವಿ.ರಾಜಗೋಪಾಲ್ ಮಾತನಾಡಿ ‘ರಾಜ್ಯದಲ್ಲಿ ಆರಂಭವಾಗಿರುವ ಧ್ಚಜ ಚಳವಳಿಯನ್ನು ಉತ್ತರ ಭಾರತಕ್ಕೆ ಕೊಂಡೊಯ್ಯುತ್ತೇನೆ. ಗಾಂಧೀಜಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಚರಕ ಚಲಾಯಿಸುವ ಮೂಲಕ ಖಾದಿಗೆ ಒತ್ತು ನೀಡಿದರೆ, ಕೋಟ್ಯಂತರ ರೈತರಿಗೆ ನೆರವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ತಿಳಿಸಿದ್ದರು. ಈಗ ರಾಷ್ಟ್ರಧ್ವಜದಿಂದಲೇ ಖಾದಿ ಕೈಬಿಟ್ಟಿರುವುದು ದುರಂತ’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.