ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯ ಪ್ರಾಣಿ ಛಾಯಾಗ್ರಹಣ ಸ್ಪರ್ಧೆ

Last Updated 14 ಸೆಪ್ಟೆಂಬರ್ 2020, 16:35 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಅ.1ರಿಂದ 7ರವರೆಗೂ ವನ್ಯಪ್ರಾಣಿ ಸಪ್ತಾಹ ಆಯೋಜಿಸಿದೆ.

ಈ ಸಪ್ತಾಹದ ಅಂಗವಾಗಿ ವನ್ಯಪ್ರಾಣಿ ಛಾಯಾಗ್ರಹಣ ಸ್ಪರ್ಧೆ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ.

ವನ್ಯಜೀವಿ ಪ್ರವರ್ಗ, ಮೃಗಾಲಯ ಪ್ರವರ್ಗದಡಿ ಸ್ಪರ್ಧೆ ನಡೆಯಲಿದ್ದು, ಪ್ರತಿ ಪ್ರವರ್ಗಕ್ಕೂ ಪ‍್ರವೇಶ ಶುಲ್ಕ ₹ 100 ನಿಗದಿ ಪಡಿಸಲಾಗಿದೆ.

ಸೆ.22ರವರೆಗೂ ಪ್ರವೇಶ ಸ್ವೀಕರಿಸಲು ಅವಕಾಶವಿದೆ. 26ರಂದು ಬಹುಮಾನಿತರನ್ನು ಆಯ್ಕೆ ಮಾಡಲಾಗುವುದು. ಅ.1ರಿಂದ 7ರವರೆಗೂ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.

ಮಾಹಿತಿಗಾಗಿ 0821–2440752/9686668099 ಸಂಪರ್ಕಿಸಿ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT