ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಸಂಸ್ಥಾಪಕ ಅಧ್ಯಕ್ಷ ಧ್ರುವ ಪಾಟೀಲ ಮಾತನಾಡಿ, ‘ಈ ಬಾರಿಯ ಕೆಪಿಎಲ್ನಲ್ಲಿ ಮೈಸೂರು ವಾರಿಯರ್ಸ್ನ ಪ್ರತಿ ಸಿಕ್ಸರ್ಗೆ ಪ್ರತಿಯಾಗಿ ನಮ್ಮ ಸಂಸ್ಥೆಯು ಆರು ಸಸಿಗಳನ್ನು ನೆಡಲಿದೆ. ವಿಜಯಪುರ ಜಿಲ್ಲೆಯ ಮಮದಾಪುರ ಬಳಿ ಈ ಸಸಿಗಳನ್ನು ನೆಡಲಾಗುವುದು. ಇದರಿಂದ ಪರಿಸರ ರಕ್ಷಣೆ ಆಗಲಿದ್ದು, ಯುವಜನರು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.