‘ಮದ್ದೂರಿನ ಪ್ರೌಢಶಾಲೆ ಬಳಿಯಿಂದ ಜಾಲಿ ಸ್ಯಾಂಡ್ಬರ್ಗ್ ಅವರನ್ನು ಆಶ್ರಮಕ್ಕೆ ಸೇರಿಸಲಾಗಿದೆ ಎಂಬ ಮಾಹಿತಿ ಆಧರಿಸಿ ತೆರಳಿದಾಗ ಅಲ್ಲಿ ಆಕೆಯನ್ನು ಜಾನು ಎಂದು ಕರೆಯುತ್ತಿದ್ದುದಾಗಿ ತಿಳಿದು ಬಂತು. ಆಕೆಯ ತಾಯಿ ವಸಂತಾ ಎರಡು ವಿವಾಹವಾಗಿದ್ದು, ಮೈಸೂರಿನ ಮೊದಲ ಪತಿಯೊಂದಿಗೆ ಇದ್ದಾಗ ಜಾನು ಜನಿಸಿದ್ದಳು. ಪತಿಯ ಆತ್ಮಹತ್ಯೆ ಬಳಿಕ ಮಹಿಳೆಯು ಚನ್ನಪಟ್ಟಣದವರೊಬ್ಬರನ್ನು ಮದುವೆಯಾಗಿದ್ದರು. ಆಗ ಜಾನು ಪಕ್ಕದ ಮನೆಯ ಜಯಮ್ಮ ಎಂಬುವವರ ಮಡಿಲು ಸೇರಿದ್ದರು. ಯಾವುದೋ ಕಾರಣಕ್ಕೆ ವಸಂತಮ್ಮನೂ ಆತ್ಮಹತ್ಯೆ ಮಾಡಿಕೊಂಡರು. ಈ ಸಮಯದಲ್ಲಿ ಜಾನು ಅವರನ್ನು ಜಯಮ್ಮ ಬೆಂಗಳೂರಿನ ಸಂಸ್ಥೆಗೆ ಸೇರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ವಕೀಲೆ ಅಂಜಲಿ ಪವಾರ್ ತಿಳಿಸಿದರು.