<p><strong>ಮೈಸೂರು:</strong> ‘ಕೃಷಿ ಸಾಲಮನ್ನಾದಿಂದ ಊರಿನ 10 ಜನರಿಗೆ ಲಾಭವಾದರೆ, ಗ್ಯಾರಂಟಿ ಯೋಜನೆ ಸೌಲಭ್ಯ 98 ಮನೆಗಳಿಗೆ ತಲುಪುತ್ತಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು.</p>.<p>‘ರೈತ ದಸರಾ’ ಉದ್ಘಾಟಿಸಿದ ಅವರು, ‘ಹಾದಿ ತಪ್ಪಿಸುವವರ ಮಾತು ಕೇಳದೇ ತಾಳ್ಮೆಯಿಂದ ಆಲೋಚಿಸಬೇಕು. ರೈತರ ಅಭಿವೃದ್ಧಿಯೇ ಪಂಚ ಗ್ಯಾರಂಟಿಯ ಉದ್ದೇಶ’ ಎಂದರು.</p>.<p>‘ಎಲ್ಲ ಕೃಷಿ ಸಾಲಗಳು ಬೆಂಬಲ ಯೋಗ್ಯವಾಗಿರುತ್ತದೆಯೇ? ಹಿಂದಿನ ಸರ್ಕಾರಗಳು ಕೃಷಿಸಾಲ ಮನ್ನಾಕ್ಕೆ ₹5 ರಿಂದ ₹12 ಸಾವಿರ ಕೋಟಿ ವ್ಯಯಿಸಿರಬಹುದು. ನಾವು ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ ₹3 ಲಕ್ಷ ಕೋಟಿ ವ್ಯಯಿಸುತ್ತಿದ್ದೇವೆ’ ಎಂದು ಹೇಳಿದರು.</p>.<p>‘ಕೃಷಿ ಭಾಗ್ಯ ಯೋಜನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಪೆನ್ಡ್ರೈವ್ ತೋರುವವರು, ಅಭಿವೃದ್ಧಿ ಮಾಡದೇ ಹಿಂದುತ್ವ ಹೆಸರಿನಲ್ಲಿ ವಿಭಜಿಸುವವರು ಬೇಕೆ? ಸದಾ ರೈತರ ಕುರಿತು ಆಲೋಚಿಸುವ ನಾವು ಬೇಕೆ? ತೀರ್ಮಾನ ನಿಮ್ಮದು’ ಎಂದರು.</p>.<p>‘ಇಡೀ ರಾಷ್ಟ್ರದಲ್ಲಿ ರಸಗೊಬ್ಬರದ ಕೊರತೆಗೆ ಕಾರಣವಾದ ಕೇಂದ್ರ ಸರ್ಕಾರವನ್ನು ಟೀಕಿಸದೆ, ರೈತರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿಕಟ್ಟಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಕೃಷಿ ಸಾಲಮನ್ನಾದಿಂದ ಊರಿನ 10 ಜನರಿಗೆ ಲಾಭವಾದರೆ, ಗ್ಯಾರಂಟಿ ಯೋಜನೆ ಸೌಲಭ್ಯ 98 ಮನೆಗಳಿಗೆ ತಲುಪುತ್ತಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು.</p>.<p>‘ರೈತ ದಸರಾ’ ಉದ್ಘಾಟಿಸಿದ ಅವರು, ‘ಹಾದಿ ತಪ್ಪಿಸುವವರ ಮಾತು ಕೇಳದೇ ತಾಳ್ಮೆಯಿಂದ ಆಲೋಚಿಸಬೇಕು. ರೈತರ ಅಭಿವೃದ್ಧಿಯೇ ಪಂಚ ಗ್ಯಾರಂಟಿಯ ಉದ್ದೇಶ’ ಎಂದರು.</p>.<p>‘ಎಲ್ಲ ಕೃಷಿ ಸಾಲಗಳು ಬೆಂಬಲ ಯೋಗ್ಯವಾಗಿರುತ್ತದೆಯೇ? ಹಿಂದಿನ ಸರ್ಕಾರಗಳು ಕೃಷಿಸಾಲ ಮನ್ನಾಕ್ಕೆ ₹5 ರಿಂದ ₹12 ಸಾವಿರ ಕೋಟಿ ವ್ಯಯಿಸಿರಬಹುದು. ನಾವು ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ ₹3 ಲಕ್ಷ ಕೋಟಿ ವ್ಯಯಿಸುತ್ತಿದ್ದೇವೆ’ ಎಂದು ಹೇಳಿದರು.</p>.<p>‘ಕೃಷಿ ಭಾಗ್ಯ ಯೋಜನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಪೆನ್ಡ್ರೈವ್ ತೋರುವವರು, ಅಭಿವೃದ್ಧಿ ಮಾಡದೇ ಹಿಂದುತ್ವ ಹೆಸರಿನಲ್ಲಿ ವಿಭಜಿಸುವವರು ಬೇಕೆ? ಸದಾ ರೈತರ ಕುರಿತು ಆಲೋಚಿಸುವ ನಾವು ಬೇಕೆ? ತೀರ್ಮಾನ ನಿಮ್ಮದು’ ಎಂದರು.</p>.<p>‘ಇಡೀ ರಾಷ್ಟ್ರದಲ್ಲಿ ರಸಗೊಬ್ಬರದ ಕೊರತೆಗೆ ಕಾರಣವಾದ ಕೇಂದ್ರ ಸರ್ಕಾರವನ್ನು ಟೀಕಿಸದೆ, ರೈತರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿಕಟ್ಟಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>