<p><strong>ಮೈಸೂರು:</strong> ‘152 ಮಂದಿ ಭದ್ರತಾ ಕಾರ್ಮಿಕರು ಹಾಗೂ ಒಬ್ಬ ಮೇಲ್ವಿಚಾರಕ ಸಿಬ್ಬಂದಿ ಬದಲು 125 ಸಿಬ್ಬಂದಿಯನ್ನು ನಿಯೋಜಿಸಿ 27 ಮಂದಿಯ ಬಿಲ್ ಅನ್ನು ಬೇನಾಮಿ ಹೆಸರಿನಲ್ಲಿ ಗುತ್ತಿಗೆದಾರ ಕಂಪನಿಯೊಂದು ಪಡೆಯುತ್ತಿದೆ’ ಎಂದು ಆರೋಪಿಸಿ ಎಐಟಿಯುಸಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. </p>.<p>ನಗರದ ಕ್ರಾಫರ್ಡ್ ಭವನದ ಎದುರು ಜಮಾಯಿಸಿದ ಪ್ರತಿಭಟನಕಾರರು, ‘ಇರುವ ಸಿಬ್ಬಂದಿಗೆ ವಾರದ ರಜೆ, ವಾರ್ಷಿಕ ಭತ್ಯೆ ನೀಡದೇ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿದರು. </p>.<p>ಸಂಘಟನೆಯ ಚಂದ್ರಶೇಖರ ಮೇಟಿ ಮಾತನಾಡಿ, ‘55ರಿಂದ 60 ಬೇನಾಮಿ ಹೆಸರುಗಳನ್ನು ನೀಡಿ 7 ಬಿಲ್ ಪಡೆದು, ಶೋಷಣೆ ನಡೆಸಿದ್ದಾರೆ. ಇದರಲ್ಲಿ ಆಡಳಿತ ಮಂಡಳಿಯ ಪಾತ್ರವೂ ಇದ್ದು, ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮನವಿ ನೀಡುವ ವೇಳೆಯಲ್ಲೂ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಸಣ್ಣ ಗುತ್ತಿಗೆದಾರರು ಬೆಳೆಯಲು ಅವಕಾಶ ನೀಡಿ ಎಂದಿದ್ದಾರೆ. ವಿಶ್ವವಿದ್ಯಾಲಯದ ಅಣತಿಯಂತೆ ಎಲ್ಲವೂ ನಡೆಯುತ್ತಿದೆ’ ಎಂದು ಆರೋಪಿಸಿದರು. </p>.<p>‘ನ.3ರಂದು ನೀಡಿರುವ ಬೇಡಿಕೆಗಳನ್ನು ಈಡೇರಿಸಬೇಕು. ಭದ್ರತಾ ಸಿಬ್ಬಂದಿ ಮೇಲ್ವಿಚಾರಕರನ್ನು ಕೆಲಸದಿಂದ ವಜಾ ಮಾಡಬೇಕು. ಗುತ್ತಿಗೆದಾರರರ ಅವ್ಯವಹಾರದ ತನಿಖೆ ಮಾಡಬೇಕು. ಕಾರ್ಮಿಕರ ಕುಂದುಕೊರತೆ ಸಭೆಯನ್ನು ನಡೆಸಬೇಕು’ ಎಂದು ಆಗ್ರಹಿಸಿದರು. </p>.<p>‘ಮನವಿ ಸ್ವೀಕರಿಸಿದ ಉಪ ಕುಲಸಚಿವ ಚನ್ನಕೇಶವ ವಾರದೊಳಗೆ ಪರಿಶೀಲಿಸಿ, ಕ್ರಮವಹಿಸುವುದಾಗಿ ತಿಳಿಸಿದ್ದಾರೆ’ ಎಂದರು.</p>.<p>ಮುಖಂಡರಾದ ಪಿ.ಎಚ್.ಸಂಧ್ಯಾ, ಯಶೋಧರ, ಹರೀಶ್ ಮುದ್ದುಕೃಷ್ಣ, ಸತೀಶ್, ಸಿಂಡಿಕೇಟ್ ಸದಸ್ಯ ಶಬ್ಬೀರ್ ಮುಸ್ತಫಾ, ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘152 ಮಂದಿ ಭದ್ರತಾ ಕಾರ್ಮಿಕರು ಹಾಗೂ ಒಬ್ಬ ಮೇಲ್ವಿಚಾರಕ ಸಿಬ್ಬಂದಿ ಬದಲು 125 ಸಿಬ್ಬಂದಿಯನ್ನು ನಿಯೋಜಿಸಿ 27 ಮಂದಿಯ ಬಿಲ್ ಅನ್ನು ಬೇನಾಮಿ ಹೆಸರಿನಲ್ಲಿ ಗುತ್ತಿಗೆದಾರ ಕಂಪನಿಯೊಂದು ಪಡೆಯುತ್ತಿದೆ’ ಎಂದು ಆರೋಪಿಸಿ ಎಐಟಿಯುಸಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. </p>.<p>ನಗರದ ಕ್ರಾಫರ್ಡ್ ಭವನದ ಎದುರು ಜಮಾಯಿಸಿದ ಪ್ರತಿಭಟನಕಾರರು, ‘ಇರುವ ಸಿಬ್ಬಂದಿಗೆ ವಾರದ ರಜೆ, ವಾರ್ಷಿಕ ಭತ್ಯೆ ನೀಡದೇ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿದರು. </p>.<p>ಸಂಘಟನೆಯ ಚಂದ್ರಶೇಖರ ಮೇಟಿ ಮಾತನಾಡಿ, ‘55ರಿಂದ 60 ಬೇನಾಮಿ ಹೆಸರುಗಳನ್ನು ನೀಡಿ 7 ಬಿಲ್ ಪಡೆದು, ಶೋಷಣೆ ನಡೆಸಿದ್ದಾರೆ. ಇದರಲ್ಲಿ ಆಡಳಿತ ಮಂಡಳಿಯ ಪಾತ್ರವೂ ಇದ್ದು, ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮನವಿ ನೀಡುವ ವೇಳೆಯಲ್ಲೂ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಸಣ್ಣ ಗುತ್ತಿಗೆದಾರರು ಬೆಳೆಯಲು ಅವಕಾಶ ನೀಡಿ ಎಂದಿದ್ದಾರೆ. ವಿಶ್ವವಿದ್ಯಾಲಯದ ಅಣತಿಯಂತೆ ಎಲ್ಲವೂ ನಡೆಯುತ್ತಿದೆ’ ಎಂದು ಆರೋಪಿಸಿದರು. </p>.<p>‘ನ.3ರಂದು ನೀಡಿರುವ ಬೇಡಿಕೆಗಳನ್ನು ಈಡೇರಿಸಬೇಕು. ಭದ್ರತಾ ಸಿಬ್ಬಂದಿ ಮೇಲ್ವಿಚಾರಕರನ್ನು ಕೆಲಸದಿಂದ ವಜಾ ಮಾಡಬೇಕು. ಗುತ್ತಿಗೆದಾರರರ ಅವ್ಯವಹಾರದ ತನಿಖೆ ಮಾಡಬೇಕು. ಕಾರ್ಮಿಕರ ಕುಂದುಕೊರತೆ ಸಭೆಯನ್ನು ನಡೆಸಬೇಕು’ ಎಂದು ಆಗ್ರಹಿಸಿದರು. </p>.<p>‘ಮನವಿ ಸ್ವೀಕರಿಸಿದ ಉಪ ಕುಲಸಚಿವ ಚನ್ನಕೇಶವ ವಾರದೊಳಗೆ ಪರಿಶೀಲಿಸಿ, ಕ್ರಮವಹಿಸುವುದಾಗಿ ತಿಳಿಸಿದ್ದಾರೆ’ ಎಂದರು.</p>.<p>ಮುಖಂಡರಾದ ಪಿ.ಎಚ್.ಸಂಧ್ಯಾ, ಯಶೋಧರ, ಹರೀಶ್ ಮುದ್ದುಕೃಷ್ಣ, ಸತೀಶ್, ಸಿಂಡಿಕೇಟ್ ಸದಸ್ಯ ಶಬ್ಬೀರ್ ಮುಸ್ತಫಾ, ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>