<p><strong>ಹುಣಸೂರು</strong>: ತಾಲ್ಲೂಕಿನ ಹಮ್ಮಿಗೆ ಹಾಡಿಯಲ್ಲಿ ಅರಣ್ಯ ಮತ್ತು ಜಮೀನಿಗೆ ಹೋಗಲು ಇದ್ದ ಪಾರಂಪರಿಕೆ ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸಲು ಮನವಿ ನೀಡಿದರೂ ಕಂದಾಯ ಇಲಾಖೆ ಕ್ರಮ ಕೈಗೊಂಡಿಲ್ಲಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಆರೋಪಿಸಿದರು.</p>.<p>ಹಮ್ಮಿಗೆ ಹಾಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬುಡಕಟ್ಟು ಕೃಷಿಕರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿ, ಗ್ರಾಮದ ಕೆಲ ಮುಖಂಡರು ಗಿರಿಜನರ ಹೊಲ ಮತ್ತು ಅರಣ್ಯಕ್ಕೆ ಹೋಗಿ ಬರುವ ದಾರಿ ಒತ್ತುವರಿ ಮಾಡಿಕೊಂಡು ಸಮುದಾಯದವರಿಗೆ ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿಸಿಲ್ಲ. ಗಿರಿಜನರ ಸಮಸ್ಯೆಗೆ ಸ್ಪಂದಿಸದ ತಾಲ್ಲೂಕು ಕಂದಾಯ ಇಲಾಖೆ ವಿರುದ್ಧ ಧರಣಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.</p>.<p>ವಿದ್ಯುತ್ ಸಂಪರ್ಕ ಕಡಿತ: 30ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದ್ದು, ಈ ಸಂಬಂಧ ಈಗಾಗಲೇ ಸೆಸ್ಕ್ಗೆ ಸರ್ಕಾರ ವಿದ್ಯುತ್ ಬಿಲ್ ಭರಿಸುವ ಭರವಸೆ ನೀಡಿದ್ದರೂ ಸೆಸ್ಕ್ ಗಿರಿಜನರ ಮನೆಗೆ ವಿದ್ಯುತ್ ಕಡಿತಗೊಳಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಘೋಷಿಸಿ ಎಲ್ಲಾ ನಾಗರಿಕರಿಗೂ ಉಚಿತ ವಿದ್ಯುತ್ ಸೌಲಭ್ಯ ನೀಡಿದ್ದರೂ ಗಿರಿಜನರಿಗೆ ಆ ಭಾಗ್ಯ ಇಲ್ಲವಾಗಿದೆ. ಗಿರಿಜನ ಕಲ್ಯಾಣ ಇಲಾಖೆಗೆ ತಾಲ್ಲೂಕಿನ ಹಾಡಿಗಳ ನಿವಾಸಿಗಳ ಮನೆ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚನೆ ಇದ್ದರೂ ಈವರೆಗೂ ಕ್ರಮವಹಿಸದೆ ಕತ್ತಲಲ್ಲಿ ಬದುಕು ನಡೆಸುತ್ತಿದ್ದೇವೆ ಎಂದರು.</p>.<p>ಡೀಡ್ ಸಂಸ್ಥೆಯ ನಿರ್ದೇಸಕ ಶ್ರೀಕಾಂತ್ ಮಾತನಾಡಿ, ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಮೈಸೂರಿನ ಎನ್.ಐ.ಇ. ಕಾಲೇಜು ವತಿಯಿಂದ ಕಳೆದ ವರ್ಷ ಸೋಲಾರ್ ಮೈಕ್ರೋಗ್ರಿಡ್ ಸ್ಥಾಪಿಸಿ 70 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದೇ ರೀತಿ ಹಮ್ಮಿಗೆ ಹಾಡಿಯಲ್ಲೂ ಮೈಕ್ರೋ ಗ್ರಿಡ್ ಸ್ಥಾಪಿಸುವಂತೆ ಮನವಿ ಬಂದಿದ್ದು ಈ ಸಂಬಂಧ ಡೀಡ್ ಚಿಂತನೆ ನಡೆಸಿದೆ ಎಂದರು.</p>.<p>ಮೈಸೂರು ವಿವಿ ಒಳಗೊಳ್ಳುವಿಕೆ ಸಂಶೋಧನಾ ಕೇಂದ್ರದ ಸಹಕಾರದಿಂದ ತಾಲ್ಲೂಕಿನ ಕೊಳವಿಗೆ ಹಾಡಿಯಲ್ಲಿ ಎ.23 ರಂದು ಸರ್ಕಾರಿ ಯೋಜನೆಗಳ ಪರಿಚಯ ಹಾಗೂ ಅದೇ ದಿನ ಸಂಶೋಧನಾ ಕೇಂದ್ರದಲ್ಲಿ ಸಂಶೋಧಕರೊಂದಿಗೆ ಡಾ.ನಂಜುಂಡ ಮುಖಂಡತ್ವದಲ್ಲಿ ಆದಿವಾಸಿ ಮುಖಂಡರ ಚರ್ಚೆ ಏರ್ಪಡಿಸಲಾಗಿದೆ ಎಂದರು.</p>.<p>ಸಭೆಯಲ್ಲಿ ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಚ್ಚಿ, ಹರ್ಷ, ಶಿವಣ್ಣ, ಮುನಿರಾಮಯ್ಯ, ದೊಡ್ಡಮಾರಯ್ಯ ಗಂಗಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ತಾಲ್ಲೂಕಿನ ಹಮ್ಮಿಗೆ ಹಾಡಿಯಲ್ಲಿ ಅರಣ್ಯ ಮತ್ತು ಜಮೀನಿಗೆ ಹೋಗಲು ಇದ್ದ ಪಾರಂಪರಿಕೆ ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸಲು ಮನವಿ ನೀಡಿದರೂ ಕಂದಾಯ ಇಲಾಖೆ ಕ್ರಮ ಕೈಗೊಂಡಿಲ್ಲಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಆರೋಪಿಸಿದರು.</p>.<p>ಹಮ್ಮಿಗೆ ಹಾಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬುಡಕಟ್ಟು ಕೃಷಿಕರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿ, ಗ್ರಾಮದ ಕೆಲ ಮುಖಂಡರು ಗಿರಿಜನರ ಹೊಲ ಮತ್ತು ಅರಣ್ಯಕ್ಕೆ ಹೋಗಿ ಬರುವ ದಾರಿ ಒತ್ತುವರಿ ಮಾಡಿಕೊಂಡು ಸಮುದಾಯದವರಿಗೆ ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿಸಿಲ್ಲ. ಗಿರಿಜನರ ಸಮಸ್ಯೆಗೆ ಸ್ಪಂದಿಸದ ತಾಲ್ಲೂಕು ಕಂದಾಯ ಇಲಾಖೆ ವಿರುದ್ಧ ಧರಣಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.</p>.<p>ವಿದ್ಯುತ್ ಸಂಪರ್ಕ ಕಡಿತ: 30ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದ್ದು, ಈ ಸಂಬಂಧ ಈಗಾಗಲೇ ಸೆಸ್ಕ್ಗೆ ಸರ್ಕಾರ ವಿದ್ಯುತ್ ಬಿಲ್ ಭರಿಸುವ ಭರವಸೆ ನೀಡಿದ್ದರೂ ಸೆಸ್ಕ್ ಗಿರಿಜನರ ಮನೆಗೆ ವಿದ್ಯುತ್ ಕಡಿತಗೊಳಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಘೋಷಿಸಿ ಎಲ್ಲಾ ನಾಗರಿಕರಿಗೂ ಉಚಿತ ವಿದ್ಯುತ್ ಸೌಲಭ್ಯ ನೀಡಿದ್ದರೂ ಗಿರಿಜನರಿಗೆ ಆ ಭಾಗ್ಯ ಇಲ್ಲವಾಗಿದೆ. ಗಿರಿಜನ ಕಲ್ಯಾಣ ಇಲಾಖೆಗೆ ತಾಲ್ಲೂಕಿನ ಹಾಡಿಗಳ ನಿವಾಸಿಗಳ ಮನೆ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚನೆ ಇದ್ದರೂ ಈವರೆಗೂ ಕ್ರಮವಹಿಸದೆ ಕತ್ತಲಲ್ಲಿ ಬದುಕು ನಡೆಸುತ್ತಿದ್ದೇವೆ ಎಂದರು.</p>.<p>ಡೀಡ್ ಸಂಸ್ಥೆಯ ನಿರ್ದೇಸಕ ಶ್ರೀಕಾಂತ್ ಮಾತನಾಡಿ, ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಮೈಸೂರಿನ ಎನ್.ಐ.ಇ. ಕಾಲೇಜು ವತಿಯಿಂದ ಕಳೆದ ವರ್ಷ ಸೋಲಾರ್ ಮೈಕ್ರೋಗ್ರಿಡ್ ಸ್ಥಾಪಿಸಿ 70 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದೇ ರೀತಿ ಹಮ್ಮಿಗೆ ಹಾಡಿಯಲ್ಲೂ ಮೈಕ್ರೋ ಗ್ರಿಡ್ ಸ್ಥಾಪಿಸುವಂತೆ ಮನವಿ ಬಂದಿದ್ದು ಈ ಸಂಬಂಧ ಡೀಡ್ ಚಿಂತನೆ ನಡೆಸಿದೆ ಎಂದರು.</p>.<p>ಮೈಸೂರು ವಿವಿ ಒಳಗೊಳ್ಳುವಿಕೆ ಸಂಶೋಧನಾ ಕೇಂದ್ರದ ಸಹಕಾರದಿಂದ ತಾಲ್ಲೂಕಿನ ಕೊಳವಿಗೆ ಹಾಡಿಯಲ್ಲಿ ಎ.23 ರಂದು ಸರ್ಕಾರಿ ಯೋಜನೆಗಳ ಪರಿಚಯ ಹಾಗೂ ಅದೇ ದಿನ ಸಂಶೋಧನಾ ಕೇಂದ್ರದಲ್ಲಿ ಸಂಶೋಧಕರೊಂದಿಗೆ ಡಾ.ನಂಜುಂಡ ಮುಖಂಡತ್ವದಲ್ಲಿ ಆದಿವಾಸಿ ಮುಖಂಡರ ಚರ್ಚೆ ಏರ್ಪಡಿಸಲಾಗಿದೆ ಎಂದರು.</p>.<p>ಸಭೆಯಲ್ಲಿ ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಚ್ಚಿ, ಹರ್ಷ, ಶಿವಣ್ಣ, ಮುನಿರಾಮಯ್ಯ, ದೊಡ್ಡಮಾರಯ್ಯ ಗಂಗಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>