<p><strong>ಮೈಸೂರು</strong>: ‘ಧರ್ಮಾಧ್ಯಕ್ಷರಾಗಿದ್ದ ಕೆ.ಎಂ.ವಿಲಿಯಂ ಅವರ ಕೊಲೆಗೆ ಪಿತೂರಿ ನಡೆಸುತ್ತಿರುವ ಆಡಿಯೊ ಎಂದು ನನ್ನ ಹಾಗೂ ಇತರ ಫಾದರ್ಗಳ ಚಿತ್ರಗಳೊಂದಿಗೆ ಯೂಟ್ಯೂಬ್ನಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿಯಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಫಾದರ್ ಜ್ಞಾನಪ್ರಕಾಶ್ ತಿಳಿಸಿದರು.</p>.<p>ಮೈಸೂರು ಡಿವಿಜನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಶನ್ನಿಂದ ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಫಾದರ್ ರೋಹನ್, ಫಾದರ್ ಅಂತೋಣಿರಾಜ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.</p>.<p>‘ಜ.13ರಂದು ಪೋಪ್ ಫ್ರಾನ್ಸಿಸ್ ಅವರ ಪತ್ರದಂತೆ ಧರ್ಮಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ವಿಲಿಯಂ ಅವರು ರಾಜೀನಾಮೆ ನೀಡಿದ್ದು, ಅಂಗೀಕಾರವೂ ಆಗಿದೆ. ಆದರೆ, ರಾಜೀನಾಮೆ ಬಗ್ಗೆ ಸಮುದಾಯದಲ್ಲಿ ಅನುಕಂಪ ಗಿಟ್ಟಿಸಲು ಈ ಗೊಂದಲ ಸೃಷ್ಟಿಸಲಾಗಿದೆ. ನಾವು ಅವರ ವಿರುದ್ಧ ಸತ್ಯ ಸಂಗತಿಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೆವು. ಹಾಗಾಗಿ ನಮ್ಮ ವಿರುದ್ಧವೂ ಬಿಷಪ್ ಹೌಸ್ನಲ್ಲಿ ಗಲಾಟೆ ಮಾಡಲಾಯಿತು’ ಎಂದರು.</p>.<p>‘ನಾವಾಗಲಿ, ಧರ್ಮಪ್ರಾಂತದ ಜನರಾಗಲಿ ಬಿಷಪ್ ಅವರನ್ನು ಬದಲಾಯಿಸುವ ಅಧಿಕಾರ ಹೊಂದಿಲ್ಲ. ನಾವು ಅವರ ತಪ್ಪುಗಳನ್ನು ಮೇಲಧಿಕಾರಿಗಳಿಗೆ ತಿಳಿಸಬಹುದು. ಉಳಿದದ್ದು, ಕೂಲಂಕಷ ತನಿಖೆಯೊಂದಿಗೆ ಪೋಪ್ ಆಣತಿಯಂತೆ ನಡೆದಿದೆ’ ಎಂದು ತಿಳಿಸಿದರು.</p>.<p>ಅಸೋಸಿಯೇಶನ್ ಅಧ್ಯಕ್ಷ ಜೆ.ಸ್ಟೀಫನ್ ಸುಜಿತ್, ಸದಸ್ಯರಾದ ಜಾನ್ಸನ್ ಬೆನ್ನ, ಮರಿಯ ಫ್ರಾನ್ಸಿಸ್, ಎಲ್ವಿನ್, ಆಂಬ್ರುಸ್ ಜಾರ್ಜ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಧರ್ಮಾಧ್ಯಕ್ಷರಾಗಿದ್ದ ಕೆ.ಎಂ.ವಿಲಿಯಂ ಅವರ ಕೊಲೆಗೆ ಪಿತೂರಿ ನಡೆಸುತ್ತಿರುವ ಆಡಿಯೊ ಎಂದು ನನ್ನ ಹಾಗೂ ಇತರ ಫಾದರ್ಗಳ ಚಿತ್ರಗಳೊಂದಿಗೆ ಯೂಟ್ಯೂಬ್ನಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿಯಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಫಾದರ್ ಜ್ಞಾನಪ್ರಕಾಶ್ ತಿಳಿಸಿದರು.</p>.<p>ಮೈಸೂರು ಡಿವಿಜನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಶನ್ನಿಂದ ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಫಾದರ್ ರೋಹನ್, ಫಾದರ್ ಅಂತೋಣಿರಾಜ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.</p>.<p>‘ಜ.13ರಂದು ಪೋಪ್ ಫ್ರಾನ್ಸಿಸ್ ಅವರ ಪತ್ರದಂತೆ ಧರ್ಮಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ವಿಲಿಯಂ ಅವರು ರಾಜೀನಾಮೆ ನೀಡಿದ್ದು, ಅಂಗೀಕಾರವೂ ಆಗಿದೆ. ಆದರೆ, ರಾಜೀನಾಮೆ ಬಗ್ಗೆ ಸಮುದಾಯದಲ್ಲಿ ಅನುಕಂಪ ಗಿಟ್ಟಿಸಲು ಈ ಗೊಂದಲ ಸೃಷ್ಟಿಸಲಾಗಿದೆ. ನಾವು ಅವರ ವಿರುದ್ಧ ಸತ್ಯ ಸಂಗತಿಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೆವು. ಹಾಗಾಗಿ ನಮ್ಮ ವಿರುದ್ಧವೂ ಬಿಷಪ್ ಹೌಸ್ನಲ್ಲಿ ಗಲಾಟೆ ಮಾಡಲಾಯಿತು’ ಎಂದರು.</p>.<p>‘ನಾವಾಗಲಿ, ಧರ್ಮಪ್ರಾಂತದ ಜನರಾಗಲಿ ಬಿಷಪ್ ಅವರನ್ನು ಬದಲಾಯಿಸುವ ಅಧಿಕಾರ ಹೊಂದಿಲ್ಲ. ನಾವು ಅವರ ತಪ್ಪುಗಳನ್ನು ಮೇಲಧಿಕಾರಿಗಳಿಗೆ ತಿಳಿಸಬಹುದು. ಉಳಿದದ್ದು, ಕೂಲಂಕಷ ತನಿಖೆಯೊಂದಿಗೆ ಪೋಪ್ ಆಣತಿಯಂತೆ ನಡೆದಿದೆ’ ಎಂದು ತಿಳಿಸಿದರು.</p>.<p>ಅಸೋಸಿಯೇಶನ್ ಅಧ್ಯಕ್ಷ ಜೆ.ಸ್ಟೀಫನ್ ಸುಜಿತ್, ಸದಸ್ಯರಾದ ಜಾನ್ಸನ್ ಬೆನ್ನ, ಮರಿಯ ಫ್ರಾನ್ಸಿಸ್, ಎಲ್ವಿನ್, ಆಂಬ್ರುಸ್ ಜಾರ್ಜ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>