<p><strong>ಮೈಸೂರು</strong>: ಇಲ್ಲಿನ ‘ರಂಗಾಯಣ’ವು 2026ರ ಜ.12ರಿಂದ 18ರ ವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಆಯೋಜಿಸಿದೆ. ‘ಬಹುರೂಪಿ ಬಾಬಾ ಸಾಹೇಬ್’ ಆಶಯದಲ್ಲಿ ನಡೆಯಲಿರುವ ಉತ್ಸವಕ್ಕೆ ಅಂಬೇಡ್ಕರ್ ಬದುಕು– ಬರಹ– ಹೋರಾಟ ನೆನಪಿಸುವ ದಮನಿತ, ಶೋಷಿತ ಸಮುದಾಯಗಳ ಕಥನದ ನಾಟಕಗಳ ಪ್ರದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ. </p>.<p>ಕನ್ನಡ, ಇಂಗ್ಲಿಷ್ ಸೇರಿದಂತೆ ಇತರೆ ಭಾರತೀಯ ಭಾಷೆಗಳ ನಾಟಕಗಳು ಹಾಗೂ ‘ಮಕ್ಕಳ ಬಹುರೂಪಿ’ಗೆ ಮಕ್ಕಳ ನಾಟಕಗಳನ್ನು ರೂಪಿಸಿರುವ ತಂಡಗಳು ರಂಗಾಯಣದ ವೆಬ್ಸೈಟ್: <a href="https://rangayanamysore.karnataka.gov.in/" rel="nofollow">rangayanamysore.karnataka.gov.in</a> ನಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿ ತಂಡ, ನಾಟಕದ ವಿವರ ಹಾಗೂ ವಿಡಿಯೊದ ಪೆನ್ಡ್ರೈವ್ ಜೊತೆಗೆ ನ.25ರೊಳಗೆ ರಂಗಾಯಣಕ್ಕೆ ಅರ್ಜಿಯನ್ನು ಕಳುಹಿಸಬೇಕು. </p>.<p>ನಾಟಕದ ಯೂಟ್ಯೂಬ್ ಲಿಂಕ್ ಅನ್ನು ಇಮೇಲ್: bahuroopifestival@gmail.com ಗೆ ಕಳುಹಿಸಬಹುದು. ಉತ್ಸವಕ್ಕೆ ಆಯ್ಕೆಯಾಗುವ ನಾಟಕ ತಂಡಗಳಿಗೆ ರಂಗಾಯಣದ ನಿಯಮಾನುಸಾರ ಗೌರವ ಸಂಭಾವನೆ, ಪ್ರಯಾಣ ವೆಚ್ಚ ಪಾವತಿಸಲಾಗುವುದು. ಆತಿಥ್ಯ ವ್ಯವಸ್ಥೆ ಇರಲಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ‘ರಂಗಾಯಣ’ವು 2026ರ ಜ.12ರಿಂದ 18ರ ವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಆಯೋಜಿಸಿದೆ. ‘ಬಹುರೂಪಿ ಬಾಬಾ ಸಾಹೇಬ್’ ಆಶಯದಲ್ಲಿ ನಡೆಯಲಿರುವ ಉತ್ಸವಕ್ಕೆ ಅಂಬೇಡ್ಕರ್ ಬದುಕು– ಬರಹ– ಹೋರಾಟ ನೆನಪಿಸುವ ದಮನಿತ, ಶೋಷಿತ ಸಮುದಾಯಗಳ ಕಥನದ ನಾಟಕಗಳ ಪ್ರದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ. </p>.<p>ಕನ್ನಡ, ಇಂಗ್ಲಿಷ್ ಸೇರಿದಂತೆ ಇತರೆ ಭಾರತೀಯ ಭಾಷೆಗಳ ನಾಟಕಗಳು ಹಾಗೂ ‘ಮಕ್ಕಳ ಬಹುರೂಪಿ’ಗೆ ಮಕ್ಕಳ ನಾಟಕಗಳನ್ನು ರೂಪಿಸಿರುವ ತಂಡಗಳು ರಂಗಾಯಣದ ವೆಬ್ಸೈಟ್: <a href="https://rangayanamysore.karnataka.gov.in/" rel="nofollow">rangayanamysore.karnataka.gov.in</a> ನಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿ ತಂಡ, ನಾಟಕದ ವಿವರ ಹಾಗೂ ವಿಡಿಯೊದ ಪೆನ್ಡ್ರೈವ್ ಜೊತೆಗೆ ನ.25ರೊಳಗೆ ರಂಗಾಯಣಕ್ಕೆ ಅರ್ಜಿಯನ್ನು ಕಳುಹಿಸಬೇಕು. </p>.<p>ನಾಟಕದ ಯೂಟ್ಯೂಬ್ ಲಿಂಕ್ ಅನ್ನು ಇಮೇಲ್: bahuroopifestival@gmail.com ಗೆ ಕಳುಹಿಸಬಹುದು. ಉತ್ಸವಕ್ಕೆ ಆಯ್ಕೆಯಾಗುವ ನಾಟಕ ತಂಡಗಳಿಗೆ ರಂಗಾಯಣದ ನಿಯಮಾನುಸಾರ ಗೌರವ ಸಂಭಾವನೆ, ಪ್ರಯಾಣ ವೆಚ್ಚ ಪಾವತಿಸಲಾಗುವುದು. ಆತಿಥ್ಯ ವ್ಯವಸ್ಥೆ ಇರಲಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>