‘ಮೂರು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿದ್ದು, ತಾಯಿ ಸುಶೀಲಮ್ಮನ ಹೆಸರಿನಲ್ಲಿ ಬ್ಯಾಂಕ್, ವಿವಿಧ ಖಾಸಗಿ ಹಣಕಾಸು ಸಂಘ ಸಂಸ್ಥೆಗಳಲ್ಲಿ ಸಾಲ, ಚಿನ್ನ ಅಡವಿಟ್ಟು ₹ 15 ಲಕ್ಷ ಸಾಲ ಮಾಡಿ ಜಮೀನಿನಲ್ಲಿ ಶುಂಠಿ, ತಂಬಾಕು ಬೇಸಾಯ ಮಾಡಿದ್ದರು. ಧಾರಾಕಾರ ಮಳೆಗೆ ಬೆಳೆ ಕೊಚ್ಚಿ ಹೋಗಿತ್ತು. ಸಾಲವನ್ನು ಹೇಗೆ ಮರುಪಾವತಿ ಮಾಲಾಗದ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಚಿಕ್ಕಪ್ಪ ರವಿ ಬೆಟ್ಟದಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.