<p><strong>ಬೆಟ್ಟದಪುರ:</strong> ಚಪ್ಪರದ ಕೆಳಗೆ ಸಿಂಗಾರಗೊಂಡ ಎತ್ತುಗಳು ಮೇವು ತಿನ್ನುತ್ತಿದ್ದರೆ, ಜನ ತದೇಕಚಿತ್ತದಿಂದ ಅವುಗಳನ್ನೇ ನೋಡುತ್ತಿದ್ದರು. ದಷ್ಟಪುಷ್ಟವಾಗಿದ್ದ ರಾಸುಗಳ ಕೊಂಬುಗಳಿಗೆ ಬಣ್ಣಬಣ್ಣದ ಬಟ್ಟೆ ಕಟ್ಟಲಾಗಿತ್ತು. ಇಲ್ಲಿನ ಎತ್ತುಗಳ ಬೆಲೆ ಲಕ್ಷಾಂತರ ರೂಪಾಯಿ...!</p>.<p>ಇಲ್ಲಿನ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಿಂದ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ರಾಸುಗಳ ಮಾರಾಟ ಜೋರಾಗಿತ್ತು. ಅದರಲ್ಲೂ ಹಳ್ಳಿಕಾರ್ ತಳಿಯ ಜೋಡೆತ್ತುಗಳು ₹50 ಸಾವಿರದಿಂದ ₹3 ಲಕ್ಷದವರೆಗೂ ಮಾರಾಟವಾದವು.</p>.<p>ಮೈಸೂರು ಜಿಲ್ಲೆ ಮಾತ್ರವಲ್ಲದೆ ಹಾಸನ, ಮಂಡ್ಯ, ಕೊಡಗು ಭಾಗದಿಂದಲೂ ಹಳ್ಳಿಕಾರ್ ಜೋಡೆತ್ತುಗಳು ಬಂದಿದ್ದು, 1,500ಕ್ಕೂ ಹೆಚ್ಚು ಜೋಡಿ ರಾಸುಗಳು ಇಲ್ಲಿವೆ. ಎರಡು ದಿನದಲ್ಲಿ 300ಕ್ಕೂ ಹೆಚ್ಚು ಎತ್ತುಗಳು ಮಾರಾಟವಾಗಿವೆ ಎಂದು ರೈತರು ಹೇಳುತ್ತಾರೆ.</p>.<p>ದುಬಾರಿ ಬೆಲೆಯ ಹಳ್ಳಿಕಾರ್ ಎತ್ತುಗಳನ್ನು ವಾದ್ಯ ಮೇಳಗಳೊಂದಿಗೆ ಜಾತ್ರೆ ಮಾಳಕ್ಕೆ ಕರೆತಂದ ರೈತರು ಚಪ್ಪರಗಳಲ್ಲಿ ಆರೈಕೆ ಮಾಡುತ್ತಿದ್ದಾರೆ.</p>.<p>ಪಿರಿಯಾಪಟ್ಟಣದ ಪಿ.ವಿ. ನಾಗರಾಜ್ ಅವರು ಕರೆತಂದಿರುವ ಹಾಲು ಹಲ್ಲಿನ ಹಳ್ಳಿಕಾರ್ ರಾಸುಗಳು ಎಲ್ಲರ ಗಮನ ಸೆಳೆಯುತ್ತಿವೆ.</p>.<p>‘ಒಂದು ತಿಂಗಳ ಹಿಂದೆ ಚುಂಚನಕಟ್ಟೆಯ ಜಾನುವಾರು ಜಾತ್ರೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ ಕರುಗಳನ್ನು ₹5.5 ಲಕ್ಷಕ್ಕೆ ಖರೀದಿ ಮಾಡಿದ್ದೆ, ಈಗ ₹ 6.5 ಲಕ್ಷ ಬೆಲೆ ಬಾಳುತ್ತವೆ’ ಎಂದು ಪಿ.ವಿ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ಎತ್ತುಗಳಿಗೆ ಪ್ರತಿ ದಿನ ಎರಡು ಲೀಟರ್ ಹಾಲು, ರವೆ ಬೂಸ, ಗೋಧಿ ಬೂಸ, ಕಡಲೆಹಿಂಡಿಗಳನ್ನು ನಿಯಮಿತವಾಗಿ ನೀಡುತ್ತೇವೆ. ಪ್ರತಿ ವರ್ಷ ಘಾಟಿ ಸುಬ್ರಹ್ಮಣ್ಯ, ಚುಂಚನಕಟ್ಟೆ ಹಾಗೂ ಬೆಟ್ಟದಪುರದ ಜಾನುವಾರು ಜಾತ್ರೆಗಳಿಗೆ ಹೋಗುತ್ತೇವೆ’ ಎಂದು ಪ್ರತಿಕ್ರಿಯಿಸಿದರು.</p>.<p>ರೈತರಾದ ಮುತ್ತುರಾಜ್, ರಾಜೇಶ್, ಗಿರೀಶ್, ಹರೀಶ್, ಸ್ವಾಮಿ, ಸಂಜಯ್, ದಿನೇಶ್, ಲೋಕೇಶ್, ಹಾಗೂ ಅಣ್ಣಯ್ಯ ಹೆಚ್ಚು ಬೆಲೆಯ ರಾಸುಗಳನ್ನು ಕರೆತಂದಿದ್ದಾರೆ. ಬಳ್ಳಾರಿ, ಮಂಡ್ಯ, ಹೊಳೆನರಸೀಪುರ, ಚನ್ನರಾಯಪಟ್ಟಣದಿಂದಲೂ ರೈತರು ಬಂದು ಎತ್ತುಗಳನ್ನು ಖರೀದಿಸುತ್ತಿದ್ದಾರೆ.</p>.<p>‘ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಬಹುಮಾನ ನೀಡಿದರೆ ಮುಂಬರುವ ಜಾತ್ರೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ರೈತ <strong>ಚಿಕ್ಕಹನಸೋಗೆ</strong> ಅಭಿಲಾಷ್ ಒತ್ತಾಯಿಸುತ್ತಾರೆ.</p>.<div><blockquote>ಕಳೆದ ಬಾರಿಯ ಜಾತ್ರೆಗಿಂತ ಈ ಬಾರಿ ರಾಸುಗಳ ಬೆಲೆ ದುಪ್ಪಟ್ಟಾಗಿದ್ದು ಕಡಿಮೆ ಬೆಲೆಯ ಎತ್ತುಗಳು ದೊರೆಯದೆ ಸಮಸ್ಯೆ ಉಂಟಾಗಿದೆ</blockquote><span class="attribution"> ಮಹೇಶ್ ರೈತ ಕೆಸವಿನಕೆರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಟ್ಟದಪುರ:</strong> ಚಪ್ಪರದ ಕೆಳಗೆ ಸಿಂಗಾರಗೊಂಡ ಎತ್ತುಗಳು ಮೇವು ತಿನ್ನುತ್ತಿದ್ದರೆ, ಜನ ತದೇಕಚಿತ್ತದಿಂದ ಅವುಗಳನ್ನೇ ನೋಡುತ್ತಿದ್ದರು. ದಷ್ಟಪುಷ್ಟವಾಗಿದ್ದ ರಾಸುಗಳ ಕೊಂಬುಗಳಿಗೆ ಬಣ್ಣಬಣ್ಣದ ಬಟ್ಟೆ ಕಟ್ಟಲಾಗಿತ್ತು. ಇಲ್ಲಿನ ಎತ್ತುಗಳ ಬೆಲೆ ಲಕ್ಷಾಂತರ ರೂಪಾಯಿ...!</p>.<p>ಇಲ್ಲಿನ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಿಂದ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ರಾಸುಗಳ ಮಾರಾಟ ಜೋರಾಗಿತ್ತು. ಅದರಲ್ಲೂ ಹಳ್ಳಿಕಾರ್ ತಳಿಯ ಜೋಡೆತ್ತುಗಳು ₹50 ಸಾವಿರದಿಂದ ₹3 ಲಕ್ಷದವರೆಗೂ ಮಾರಾಟವಾದವು.</p>.<p>ಮೈಸೂರು ಜಿಲ್ಲೆ ಮಾತ್ರವಲ್ಲದೆ ಹಾಸನ, ಮಂಡ್ಯ, ಕೊಡಗು ಭಾಗದಿಂದಲೂ ಹಳ್ಳಿಕಾರ್ ಜೋಡೆತ್ತುಗಳು ಬಂದಿದ್ದು, 1,500ಕ್ಕೂ ಹೆಚ್ಚು ಜೋಡಿ ರಾಸುಗಳು ಇಲ್ಲಿವೆ. ಎರಡು ದಿನದಲ್ಲಿ 300ಕ್ಕೂ ಹೆಚ್ಚು ಎತ್ತುಗಳು ಮಾರಾಟವಾಗಿವೆ ಎಂದು ರೈತರು ಹೇಳುತ್ತಾರೆ.</p>.<p>ದುಬಾರಿ ಬೆಲೆಯ ಹಳ್ಳಿಕಾರ್ ಎತ್ತುಗಳನ್ನು ವಾದ್ಯ ಮೇಳಗಳೊಂದಿಗೆ ಜಾತ್ರೆ ಮಾಳಕ್ಕೆ ಕರೆತಂದ ರೈತರು ಚಪ್ಪರಗಳಲ್ಲಿ ಆರೈಕೆ ಮಾಡುತ್ತಿದ್ದಾರೆ.</p>.<p>ಪಿರಿಯಾಪಟ್ಟಣದ ಪಿ.ವಿ. ನಾಗರಾಜ್ ಅವರು ಕರೆತಂದಿರುವ ಹಾಲು ಹಲ್ಲಿನ ಹಳ್ಳಿಕಾರ್ ರಾಸುಗಳು ಎಲ್ಲರ ಗಮನ ಸೆಳೆಯುತ್ತಿವೆ.</p>.<p>‘ಒಂದು ತಿಂಗಳ ಹಿಂದೆ ಚುಂಚನಕಟ್ಟೆಯ ಜಾನುವಾರು ಜಾತ್ರೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ ಕರುಗಳನ್ನು ₹5.5 ಲಕ್ಷಕ್ಕೆ ಖರೀದಿ ಮಾಡಿದ್ದೆ, ಈಗ ₹ 6.5 ಲಕ್ಷ ಬೆಲೆ ಬಾಳುತ್ತವೆ’ ಎಂದು ಪಿ.ವಿ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ಎತ್ತುಗಳಿಗೆ ಪ್ರತಿ ದಿನ ಎರಡು ಲೀಟರ್ ಹಾಲು, ರವೆ ಬೂಸ, ಗೋಧಿ ಬೂಸ, ಕಡಲೆಹಿಂಡಿಗಳನ್ನು ನಿಯಮಿತವಾಗಿ ನೀಡುತ್ತೇವೆ. ಪ್ರತಿ ವರ್ಷ ಘಾಟಿ ಸುಬ್ರಹ್ಮಣ್ಯ, ಚುಂಚನಕಟ್ಟೆ ಹಾಗೂ ಬೆಟ್ಟದಪುರದ ಜಾನುವಾರು ಜಾತ್ರೆಗಳಿಗೆ ಹೋಗುತ್ತೇವೆ’ ಎಂದು ಪ್ರತಿಕ್ರಿಯಿಸಿದರು.</p>.<p>ರೈತರಾದ ಮುತ್ತುರಾಜ್, ರಾಜೇಶ್, ಗಿರೀಶ್, ಹರೀಶ್, ಸ್ವಾಮಿ, ಸಂಜಯ್, ದಿನೇಶ್, ಲೋಕೇಶ್, ಹಾಗೂ ಅಣ್ಣಯ್ಯ ಹೆಚ್ಚು ಬೆಲೆಯ ರಾಸುಗಳನ್ನು ಕರೆತಂದಿದ್ದಾರೆ. ಬಳ್ಳಾರಿ, ಮಂಡ್ಯ, ಹೊಳೆನರಸೀಪುರ, ಚನ್ನರಾಯಪಟ್ಟಣದಿಂದಲೂ ರೈತರು ಬಂದು ಎತ್ತುಗಳನ್ನು ಖರೀದಿಸುತ್ತಿದ್ದಾರೆ.</p>.<p>‘ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಬಹುಮಾನ ನೀಡಿದರೆ ಮುಂಬರುವ ಜಾತ್ರೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ರೈತ <strong>ಚಿಕ್ಕಹನಸೋಗೆ</strong> ಅಭಿಲಾಷ್ ಒತ್ತಾಯಿಸುತ್ತಾರೆ.</p>.<div><blockquote>ಕಳೆದ ಬಾರಿಯ ಜಾತ್ರೆಗಿಂತ ಈ ಬಾರಿ ರಾಸುಗಳ ಬೆಲೆ ದುಪ್ಪಟ್ಟಾಗಿದ್ದು ಕಡಿಮೆ ಬೆಲೆಯ ಎತ್ತುಗಳು ದೊರೆಯದೆ ಸಮಸ್ಯೆ ಉಂಟಾಗಿದೆ</blockquote><span class="attribution"> ಮಹೇಶ್ ರೈತ ಕೆಸವಿನಕೆರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>