ಲೇಖಕ ಕಾಸರಗೋಡು ಚಿನ್ನಾ ಮಾತನಾಡಿ, ‘ನಾನು ಕೊಂಕಣಿ ಅಕಾಡೆಮಿ ಅಧ್ಯಕ್ಷನಾದಾಗ ಬಹಳಷ್ಟು ಮಂದಿ ಸಾಹಿತ್ಯ ಗೊತ್ತಿಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿದರು ಎಂದು ಹೇಳಿದರು. ಹಾಗಾಗಿ, ನಾನು ಸಾಹಿತ್ಯ ಕೃಷಿ ಮಾಡಿದೆ’ ಎಂದು ಹೇಳುತ್ತ ಅವರು ಅನೇಕ ಹಾಸ್ಯಪ್ರಸಂಗಗಳನ್ನು ಉಲ್ಲೇಖಿಸಿ ಪ್ರೇಕ್ಷಕರಲ್ಲಿ ನಗೆಯ ಬುಗ್ಗೆ ಚಿಮ್ಮಿಸಿದರು.