ಮತಗಟ್ಟೆ ಸಂಖ್ಯೆ 242 ಮತ್ತು 245ರ ಮತಯಂತ್ರಗಳನ್ನು ಬಸ್ನಲ್ಲಿ ತರುತ್ತಿದ್ದ ವೇಳೆ ಗೌರಿಶಂಕರನಗರದ ಗವಿಮಠ ರಸ್ತೆಯಲ್ಲಿ ಬೆಂಕಿಯ ಕಿಡಿಗಳು ಕಾಣಿಸಿಕೊಂಡಿವೆ. ಚಾಲಕ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ತಕ್ಷಣ ಕೇಬಲ್ ವೈಯರ್ ಕತ್ತರಿಸಿದ್ದಾರೆ. ಇದರಿಂದ ಬೆಂಕಿ ಹರಡಿಲ್ಲ. ನಂತರ, ಸ್ಥಳಕ್ಕೆ ಬಂದ ಕೆ.ಆರ್.ಠಾಣೆಯ ಇನ್ಸ್ಪೆಕ್ಟರ್ ವಿ.ನಾರಾಯಣಸ್ವಾಮಿ ಬೇರೊಂದು ಬಸ್ ತರಿಸಿ ಅದರಲ್ಲಿ ಮತಯಂತ್ರಗಳನ್ನು ಕಳುಹಿಸಿದರು.