ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮೈಸೂರು: ನಾಲೆ ಉಳಿಸದಿದ್ದರೆ ಪ್ರವಾಹಕ್ಕಿಲ್ಲ ತಡೆ!

Published : 24 ನವೆಂಬರ್ 2023, 8:17 IST
Last Updated : 24 ನವೆಂಬರ್ 2023, 8:17 IST
ಫಾಲೋ ಮಾಡಿ
Comments
ಬೋಗಾದಿಯಲ್ಲಿ ನಿಂತ ಮಳೆ ನೀರು (ಸಂಗ್ರಹ ಚಿತ್ರ)
ಬೋಗಾದಿಯಲ್ಲಿ ನಿಂತ ಮಳೆ ನೀರು (ಸಂಗ್ರಹ ಚಿತ್ರ)
ಪೂರ್ಣಯ್ಯ ನಾಲೆಯ ಜಲಾನಯನ ಪ್ರದೇಶದ ನಕ್ಷೆ
ಪೂರ್ಣಯ್ಯ ನಾಲೆಯ ಜಲಾನಯನ ಪ್ರದೇಶದ ನಕ್ಷೆ
ಹುಯಿಲಾಳು ಕೆರೆಯಿಂದ ನಾಲೆ ಆರಂಭ 20 ಕಿ.ಮೀ ಉದ್ದದ ಪೂರ್ಣಯ್ಯ ನಾಲೆ ನಗರಾಭಿವೃದ್ಧಿಯಿಂದ ಒತ್ತುವರಿ
2018ರಲ್ಲಿ ವರದಿ ಸಲ್ಲಿಕೆ
ಎನ್‌ಐಇ ಕಾಲೇಜಿನ ಪ್ರೊ.ಎಂ.ಆರ್‌.ಯದುಪತಿ ಪುಟ್ಟಿ ಅವರು 2018ರ ನವೆಂಬರ್‌ನಲ್ಲಿಯೇ  ‘ಪೂರ್ಣಯ್ಯ ನಾಲೆಯ ಪುನರುಜ್ಜೀಕರಣ’ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ನಾಲೆಯ ಪುನರುಜ್ಜೀವನ ಮಾರ್ಗವನ್ನೂ ತೋರಿದ್ದಾರೆ. l ನಾಲೆಯನ್ನು ನಾಲ್ಕು ಭಾಗಗಳನ್ನು ವಿಂಗಡಿಸಿದ್ದು ನಾಲೆಯ ಕೊನೆಯ ಭಾಗವಾದ ಕುಕ್ಕರಹಳ್ಳಿ ಕೆರೆಯಿಂದ ಆಯಿಷ್‌ವರೆಗಿರುವ ನಾಲೆಯು ಸುಸ್ಥಿತಿಯಲ್ಲಿದ್ದು ಪುನರುಜ್ಜೀವನ ಸುಲಭವಾಗಿದೆ ಎಂದು ಹೇಳಿದ್ದಾರೆ. l ನಾಲೆಯ 2ನೇ ವಿಭಾಗವು ಎಸ್‌ಜೆಸಿಇ ಕಾಲೇಜಿನ ಪಶ್ಚಿಮ ಭಾಗದಿಂದ ಬೋಗಾದಿ ರಸ್ತೆ ಬಿಸಿಲು ಮಾರಮ್ಮನ ದೇವಸ್ಥಾನ ಆಯಿಷ್ ಸಂಸ್ಥೆವರೆಗಿದೆ. 2.5 ಕಿಮೀ ಉದ್ದವಿರುವ ಈ ಭಾಗವನ್ನು ಪುನರುಜ್ಜೀವನಗೊಳಿಸಿದರೆ ಕುಕ್ಕರಹಳ್ಳಿ ಕೆರೆಗೆ ದೊರೆಯುವ ಮಳೆಯ ನೀರಿನ ಪ್ರಮಾಣವು ಶೇ 60ರಷ್ಟು ಹೆಚ್ಚಲಿದೆ. ಕೆಲವು ಭಾಗ ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸಬೇಕು ಎಂದು ತಿಳಿಸಿದ್ದಾರೆ. l ನಾಲೆಯ 3ನೇ ಭಾಗವು ನಗರಾಭಿವೃದ್ಧಿ ಕಾರಣ ಬಹುಪಾಲು ಒತ್ತುವರಿಯಾಗಿದೆ. ನಾಲೆಯನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. l ನಾಲೆಯ 4ನೇ ಭಾಗದಲ್ಲಿ ನಗರಾಭಿವೃದ್ಧಿ ಇನ್ನೂ ಪೂರ್ಣವಾಗಿ ಆಗಿಲ್ಲ. ಹೀಗಾಗಿ ನಾಲೆಯು ನೆಲದ ಮೇಲೆ ಗೋಚರವಿದ್ದು ತಕ್ಷಣದಲ್ಲಿ ಕಾರ್ಯಪ್ರವೃತ್ತವಾದರೆ ಜಿಲ್ಲಾಡಳಿತ ಉಳಿಸಿಕೊಳ್ಳಬಹುದಾದ ಭಾಗ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT