<p><strong>ಮೈಸೂರು</strong>: ‘ಬದಲಾದ ಜೀವನಶೈಲಿಯಿಂದ ಹೊಸ ರೋಗಗಳು ಜನರನ್ನು ಭಾದಿಸುತ್ತಿವೆ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಪರಂಪರಾಗತವಾಗಿ ಬಂದ ಆಹಾರ ಪದ್ಧತಿಯನ್ನೇ ಅನುಸರಿಸಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಲಹೆ ನೀಡಿದರು.</p>.<p>ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಫಾರ್ಮಸಿ ಕಾಲೇಜು ಅಭಿವೃದ್ಧಿಪಡಿಸಿದ ‘ಶಾರದಾ ವಿಲಾಸ ಔಷಧಿ ವಾಟಿಕಾ’ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸೇವಿಸುತ್ತಿರುವ ಆಹಾರವು ರಾಸಾಯನಿಕಯುಕ್ತವಾಗಿದೆ. ಅದರಿಂದ ರೋಗಗಳು ಬರುತ್ತಿದ್ದು, ಔಷಧಗಳನ್ನು ಹೆಚ್ಚು ಬಳಸುತ್ತಿದ್ದೇವೆ. ಆರೋಗ್ಯಯುತ ಜೀವನ ನಡೆಸುವುದೇ ಕಷ್ಟವಾಗಿದೆ. ಸಾಂಪ್ರದಾಯಿಕ ಆಹಾರ ಪದ್ಧತಿ ಜೊತೆಗೆ ಚಿಕಿತ್ಸೆಗೆ ಆಯುರ್ವೇದ ವೈದ್ಯಕೀಯ ಪದ್ಧತಿಯ ಮೊರೆ ಹೋಗಬೇಕು’ ಎಂದರು. </p>.<p>‘ಎಲ್ಲ ಸಸ್ಯಗಳಿಗೂ ಔಷಧ ಗುಣವಿದೆ. ಆದರೆ, ಯಾವ ಗಿಡದಲ್ಲಿ ಯಾವ ಔಷಧ ಗುಣಧರ್ಮವಿದೆ. ನಮ್ಮಲ್ಲಿರುವ ರೋಗಗಳು ಯಾವುವು. ಯಾವ ರೋಗಕ್ಕೆ ಯಾವ ಗಿಡ ಉಪಕಾರಿ ಎಂಬುದನ್ನು ತಿಳಿಯಬೇಕು’ ಎಂದು ಹೇಳಿದರು. </p>.<p>‘ಕೃಷಿ ಪದ್ಧತಿಯು ಆರೋಗ್ಯದಾಯಕವಾಗಿತ್ತು. ಎಲ್ಲಕ್ಕೂ ರಾಸಾಯನಿಕ ಬಳಸಲಾಗುತ್ತಿದೆ. ಸಾವಯವ ಕೃಷಿ ಅನುಸರಿಸುವಂತೆಯೇ ಆಯುರ್ವೇದವನ್ನು ಪಾಲಿಸಬೇಕು. ಅದರಿಂದ ಜೀವನ ಸುಖಮಯವಾಗಿರುತ್ತದೆ’ ಎಂದರು.</p>.<p>‘ಸುಪ್ರೀಂ’ ಫಾರ್ಮಾಸ್ಯುಟಿಕಲ್ಸ್ ಕಂಪನಿ ನಿರ್ದೇಶಕ ಅಮಿತ್ ಎಸ್.ರಾವ್, ‘40ಕ್ಕೂ ಹೆಚ್ಚು ದೇಶಗಳಿಗೆ ಔಷಧ ಉತ್ಪನ್ನ ರಫ್ತು ಮಾಡಲಾಗುತ್ತಿದೆ. ಪ್ರತಿ ವರ್ಷ ಶೇ 6ರಷ್ಟು ಅಭಿವೃದ್ಧಿಯನ್ನು ದೇಶದ ಔಷಧೋದ್ಯಮ ಅಭಿವೃದ್ಧಿ ಸಾಧಿಸುತ್ತಿದೆ’ ಎಂದು ಹೇಳಿದರು.</p>.<p>ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ, ಎಸ್.ಎಲ್.ರಾಮಚಂದ್ರ ಇದ್ದರು.</p>.<p>Highlights - ಸೇವಿಸುವ ಆಹಾರ ರಾಸಾಯನಿಕಯುಕ್ತ ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಿಸಿ ಎಲ್ಲ ಕಾಯಿಲೆಗೂ ಆಯುರ್ವೇದದಲ್ಲಿದೆ ಮದ್ದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಬದಲಾದ ಜೀವನಶೈಲಿಯಿಂದ ಹೊಸ ರೋಗಗಳು ಜನರನ್ನು ಭಾದಿಸುತ್ತಿವೆ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಪರಂಪರಾಗತವಾಗಿ ಬಂದ ಆಹಾರ ಪದ್ಧತಿಯನ್ನೇ ಅನುಸರಿಸಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಲಹೆ ನೀಡಿದರು.</p>.<p>ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಫಾರ್ಮಸಿ ಕಾಲೇಜು ಅಭಿವೃದ್ಧಿಪಡಿಸಿದ ‘ಶಾರದಾ ವಿಲಾಸ ಔಷಧಿ ವಾಟಿಕಾ’ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸೇವಿಸುತ್ತಿರುವ ಆಹಾರವು ರಾಸಾಯನಿಕಯುಕ್ತವಾಗಿದೆ. ಅದರಿಂದ ರೋಗಗಳು ಬರುತ್ತಿದ್ದು, ಔಷಧಗಳನ್ನು ಹೆಚ್ಚು ಬಳಸುತ್ತಿದ್ದೇವೆ. ಆರೋಗ್ಯಯುತ ಜೀವನ ನಡೆಸುವುದೇ ಕಷ್ಟವಾಗಿದೆ. ಸಾಂಪ್ರದಾಯಿಕ ಆಹಾರ ಪದ್ಧತಿ ಜೊತೆಗೆ ಚಿಕಿತ್ಸೆಗೆ ಆಯುರ್ವೇದ ವೈದ್ಯಕೀಯ ಪದ್ಧತಿಯ ಮೊರೆ ಹೋಗಬೇಕು’ ಎಂದರು. </p>.<p>‘ಎಲ್ಲ ಸಸ್ಯಗಳಿಗೂ ಔಷಧ ಗುಣವಿದೆ. ಆದರೆ, ಯಾವ ಗಿಡದಲ್ಲಿ ಯಾವ ಔಷಧ ಗುಣಧರ್ಮವಿದೆ. ನಮ್ಮಲ್ಲಿರುವ ರೋಗಗಳು ಯಾವುವು. ಯಾವ ರೋಗಕ್ಕೆ ಯಾವ ಗಿಡ ಉಪಕಾರಿ ಎಂಬುದನ್ನು ತಿಳಿಯಬೇಕು’ ಎಂದು ಹೇಳಿದರು. </p>.<p>‘ಕೃಷಿ ಪದ್ಧತಿಯು ಆರೋಗ್ಯದಾಯಕವಾಗಿತ್ತು. ಎಲ್ಲಕ್ಕೂ ರಾಸಾಯನಿಕ ಬಳಸಲಾಗುತ್ತಿದೆ. ಸಾವಯವ ಕೃಷಿ ಅನುಸರಿಸುವಂತೆಯೇ ಆಯುರ್ವೇದವನ್ನು ಪಾಲಿಸಬೇಕು. ಅದರಿಂದ ಜೀವನ ಸುಖಮಯವಾಗಿರುತ್ತದೆ’ ಎಂದರು.</p>.<p>‘ಸುಪ್ರೀಂ’ ಫಾರ್ಮಾಸ್ಯುಟಿಕಲ್ಸ್ ಕಂಪನಿ ನಿರ್ದೇಶಕ ಅಮಿತ್ ಎಸ್.ರಾವ್, ‘40ಕ್ಕೂ ಹೆಚ್ಚು ದೇಶಗಳಿಗೆ ಔಷಧ ಉತ್ಪನ್ನ ರಫ್ತು ಮಾಡಲಾಗುತ್ತಿದೆ. ಪ್ರತಿ ವರ್ಷ ಶೇ 6ರಷ್ಟು ಅಭಿವೃದ್ಧಿಯನ್ನು ದೇಶದ ಔಷಧೋದ್ಯಮ ಅಭಿವೃದ್ಧಿ ಸಾಧಿಸುತ್ತಿದೆ’ ಎಂದು ಹೇಳಿದರು.</p>.<p>ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ, ಎಸ್.ಎಲ್.ರಾಮಚಂದ್ರ ಇದ್ದರು.</p>.<p>Highlights - ಸೇವಿಸುವ ಆಹಾರ ರಾಸಾಯನಿಕಯುಕ್ತ ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಿಸಿ ಎಲ್ಲ ಕಾಯಿಲೆಗೂ ಆಯುರ್ವೇದದಲ್ಲಿದೆ ಮದ್ದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>