<p><strong> ಸಾಲಿಗ್ರಾಮ: ‘</strong>ಪ್ರತಿಯೊಬ್ಬ ಪೋಷಕರು ಮಕ್ಕಳ ಆರೋಗ್ಯ ಕಾಪಾಡಲು ಗುಣಮಟ್ಟದ ಆಹಾರ ನೀಡಬೇಕು’ ಎಂದು ಕರ್ಪೂರವಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಹೇಳಿದರು.</p>.<p>ಶಾಲೆ ಆವರಣದಲ್ಲಿ ಸೋಮವಾರ ಹಿರಿಯ ಶಿಕ್ಷಕಿ ಸೀಮಾಬೇಗಂ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ಮಕ್ಕಳ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳು ಜಂಕ್ ಫುಡ್ನ್ನು ಸೇವನೆ ಮಾಡದೆ ಗುಣಮಟ್ಟದ ಆಹಾರವನ್ನು ನಿರಂತರವಾಗಿ ಸೇವನೆ ಮಾಡುವಂತೆ ಎಚ್ಚರಿಕೆ ವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.</p>.<p>ಆಧುನಿಕತೆ ಹೆಚ್ಚಾದಂತೆ ಮಕ್ಕಳಿಗೆ ಯಾವ ಆಹಾರ ಸೇವನೆ ಮಾಡಬೇಕು ಎಂಬ ಮಾಹಿತಿ ಕೊರತೆಯಿಂದ ಅಮಾಯಕ ಮಕ್ಕಳು ಜಂಕ್ ಫುಡ್ನ್ನು ತಿನ್ನುವ ಮೂಲಕ ಹಲವು ರೋಗಗಳಿಗೆ ತುತ್ತಾಗಿ ನರಳುವ ಸ್ಥಿತಿ ಎದುರಾಗುತ್ತಿದೆ ಆತಂಕ ವ್ಯಕ್ತಪಡಿಸಿದರು.</p>.<p>ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದು ಮಕ್ಕಳಿಗೆ ನಿರಂತರವಾಗಿ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಮುಂದಾಗಿದೆ ಎಂದರು.</p>.<p>ಮಕ್ಕಳು ತಿನ್ನುವ ಆಹಾರದ ಬಗ್ಗೆ ಪೋಷಕರು ನಿಗಾವಹಿಸದಿದ್ದರೆ ಮಕ್ಕಳು ಜೀವನ ಪರ್ಯಂತ ರೋಗಗಳಲ್ಲೇ ನರಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.</p>.<p>ಶಾಲೆಯ ವಿದ್ಯಾರ್ಥಿಗಳು ಇಡ್ಲಿ, ಪೊಂಗಲ್, ಜೋಳದ ರೊಟ್ಟಿ, ಚಕ್ಕುಲಿ, ಕಜ್ಜಾಯ, ಹಣ್ಣುಗಳು ಸೇರಿದಂತೆ ದೇಸಿಯ ಪಾನಿಯ ಮಜ್ಜಿಗೆ ಮತ್ತು ನಿಂಬೆ ರಸ ಮಾರಾಟ ಮಾಡಿದರು. ಪೋಷಕರು ಮತ್ತು ವಿದ್ಯಾರ್ಥಿಗಳು ಜೋಳದರೊಟ್ಟಿ, ಇಡ್ಲಿ, ಚಕ್ಕುಲಿ, ಕಜ್ಚಾಯ ಸವಿದು ಸಂತಸಪಟ್ಟರು.</p>.<p>ತಂದ್ರೆಕ್ಲಸ್ಟರ್ ಸಿಆರ್ಪಿ ಮಹೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ್, ಹಿರಿಯ ಶಿಕ್ಷಕಿ ಸೀಮಾಬೇಗಂ, ವೇದಾವತಿ, ಜ್ಯೋತಿಲಕ್ಷ್ಮೀ, ಪರಮೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong> ಸಾಲಿಗ್ರಾಮ: ‘</strong>ಪ್ರತಿಯೊಬ್ಬ ಪೋಷಕರು ಮಕ್ಕಳ ಆರೋಗ್ಯ ಕಾಪಾಡಲು ಗುಣಮಟ್ಟದ ಆಹಾರ ನೀಡಬೇಕು’ ಎಂದು ಕರ್ಪೂರವಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಹೇಳಿದರು.</p>.<p>ಶಾಲೆ ಆವರಣದಲ್ಲಿ ಸೋಮವಾರ ಹಿರಿಯ ಶಿಕ್ಷಕಿ ಸೀಮಾಬೇಗಂ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ಮಕ್ಕಳ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳು ಜಂಕ್ ಫುಡ್ನ್ನು ಸೇವನೆ ಮಾಡದೆ ಗುಣಮಟ್ಟದ ಆಹಾರವನ್ನು ನಿರಂತರವಾಗಿ ಸೇವನೆ ಮಾಡುವಂತೆ ಎಚ್ಚರಿಕೆ ವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.</p>.<p>ಆಧುನಿಕತೆ ಹೆಚ್ಚಾದಂತೆ ಮಕ್ಕಳಿಗೆ ಯಾವ ಆಹಾರ ಸೇವನೆ ಮಾಡಬೇಕು ಎಂಬ ಮಾಹಿತಿ ಕೊರತೆಯಿಂದ ಅಮಾಯಕ ಮಕ್ಕಳು ಜಂಕ್ ಫುಡ್ನ್ನು ತಿನ್ನುವ ಮೂಲಕ ಹಲವು ರೋಗಗಳಿಗೆ ತುತ್ತಾಗಿ ನರಳುವ ಸ್ಥಿತಿ ಎದುರಾಗುತ್ತಿದೆ ಆತಂಕ ವ್ಯಕ್ತಪಡಿಸಿದರು.</p>.<p>ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದು ಮಕ್ಕಳಿಗೆ ನಿರಂತರವಾಗಿ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಮುಂದಾಗಿದೆ ಎಂದರು.</p>.<p>ಮಕ್ಕಳು ತಿನ್ನುವ ಆಹಾರದ ಬಗ್ಗೆ ಪೋಷಕರು ನಿಗಾವಹಿಸದಿದ್ದರೆ ಮಕ್ಕಳು ಜೀವನ ಪರ್ಯಂತ ರೋಗಗಳಲ್ಲೇ ನರಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.</p>.<p>ಶಾಲೆಯ ವಿದ್ಯಾರ್ಥಿಗಳು ಇಡ್ಲಿ, ಪೊಂಗಲ್, ಜೋಳದ ರೊಟ್ಟಿ, ಚಕ್ಕುಲಿ, ಕಜ್ಜಾಯ, ಹಣ್ಣುಗಳು ಸೇರಿದಂತೆ ದೇಸಿಯ ಪಾನಿಯ ಮಜ್ಜಿಗೆ ಮತ್ತು ನಿಂಬೆ ರಸ ಮಾರಾಟ ಮಾಡಿದರು. ಪೋಷಕರು ಮತ್ತು ವಿದ್ಯಾರ್ಥಿಗಳು ಜೋಳದರೊಟ್ಟಿ, ಇಡ್ಲಿ, ಚಕ್ಕುಲಿ, ಕಜ್ಚಾಯ ಸವಿದು ಸಂತಸಪಟ್ಟರು.</p>.<p>ತಂದ್ರೆಕ್ಲಸ್ಟರ್ ಸಿಆರ್ಪಿ ಮಹೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ್, ಹಿರಿಯ ಶಿಕ್ಷಕಿ ಸೀಮಾಬೇಗಂ, ವೇದಾವತಿ, ಜ್ಯೋತಿಲಕ್ಷ್ಮೀ, ಪರಮೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>