<p><strong>ಮೈಸೂರು</strong>: ‘ಸಮಾಜ ಪರಿವರ್ತನೆಗೆ ಶ್ರಮಿಸಿದ ಅಪರೂಪದ ವ್ಯಕ್ತಿ ದೇವರಾಜ ಅರಸು’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸ್ಮರಿಸಿದರು.</p>.<p>ನಗರದ ಕೆ.ಆರ್.ವನಂನ ಶ್ರೀರಾಮ ಸೇವಾ ಅರಸು ಮಂಡಳಿಯಲ್ಲಿ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ನಿಂದ ಆಯೋಜಿಸಿದ್ದ ಬಿಇಎಲ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಮಲ್ಲರಾಜ ಅರಸ್ ರಚನೆಯ ‘ಚುಟುಕು ತಾರೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದಲ್ಲಿಯೇ ವಿಶೇಷ ಕಾರ್ಯಕ್ರಮಗಳ ಮೂಲಕ ಅಹಿಂದ ಸಮುದಾಯಕ್ಕೆ ಅನೇಕ ಅವಕಾಶ ಮಾಡಿಕೊಟ್ಟಿದ್ದರು. ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಿ, ಅಭಿವೃದ್ಧಿಯ ಹರಿಕಾರ ಎನ್ನಿಸಿಕೊಂಡರು. ಅವರಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.</p>.<p>ಕೃತಿ ಬಿಡುಗಡೆಗೊಳಿಸಿ ಎಸ್.ಷಡಕ್ಷರಿ, ‘ಚುಟುಕು ಸಾಹಿತ್ಯದ ಮಹತ್ವವನ್ನು ಯುವ ಸಾಹಿತಿಗಳು ತಿಳಿಯಬೇಕಿದೆ. ಎಂ.ಜಿ.ಆರ್.ಅರಸ್ ಅವರಿಂದ ಚುಟುಕು ಸಾಹಿತ್ಯ ಬೆಳೆಯುತ್ತಿದೆ’ ಎಂದರು.</p>.<p>ಕೃತಿ ಕುರಿತು ಸಾಹಿತಿ ನಾ.ದಿವಾಕರ ಮಾತನಾಡಿದರು.</p>.<p>ಕೆಇಬಿ ನಿವೃತ್ತ ಎಂಜಿನಿಯರ್ ಕೆ.ಆರ್.ಲಕ್ಷ್ಮಿಕಾಂತ, ಬಿಇಎಲ್ ನಿವೃತ್ತ ನಿರ್ದೇಶಕ ಎಚ್.ಎನ್.ರಾಮಕೃಷ್ಣ, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಎಂ.ಜಿ.ಆರ್.ಅರಸ್, ಮಂಡಳಿ ಅಧ್ಯಕ್ಷ ಸುಂದರರಾಜೇ ಅರಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಸಮಾಜ ಪರಿವರ್ತನೆಗೆ ಶ್ರಮಿಸಿದ ಅಪರೂಪದ ವ್ಯಕ್ತಿ ದೇವರಾಜ ಅರಸು’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸ್ಮರಿಸಿದರು.</p>.<p>ನಗರದ ಕೆ.ಆರ್.ವನಂನ ಶ್ರೀರಾಮ ಸೇವಾ ಅರಸು ಮಂಡಳಿಯಲ್ಲಿ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ನಿಂದ ಆಯೋಜಿಸಿದ್ದ ಬಿಇಎಲ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಮಲ್ಲರಾಜ ಅರಸ್ ರಚನೆಯ ‘ಚುಟುಕು ತಾರೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದಲ್ಲಿಯೇ ವಿಶೇಷ ಕಾರ್ಯಕ್ರಮಗಳ ಮೂಲಕ ಅಹಿಂದ ಸಮುದಾಯಕ್ಕೆ ಅನೇಕ ಅವಕಾಶ ಮಾಡಿಕೊಟ್ಟಿದ್ದರು. ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಿ, ಅಭಿವೃದ್ಧಿಯ ಹರಿಕಾರ ಎನ್ನಿಸಿಕೊಂಡರು. ಅವರಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.</p>.<p>ಕೃತಿ ಬಿಡುಗಡೆಗೊಳಿಸಿ ಎಸ್.ಷಡಕ್ಷರಿ, ‘ಚುಟುಕು ಸಾಹಿತ್ಯದ ಮಹತ್ವವನ್ನು ಯುವ ಸಾಹಿತಿಗಳು ತಿಳಿಯಬೇಕಿದೆ. ಎಂ.ಜಿ.ಆರ್.ಅರಸ್ ಅವರಿಂದ ಚುಟುಕು ಸಾಹಿತ್ಯ ಬೆಳೆಯುತ್ತಿದೆ’ ಎಂದರು.</p>.<p>ಕೃತಿ ಕುರಿತು ಸಾಹಿತಿ ನಾ.ದಿವಾಕರ ಮಾತನಾಡಿದರು.</p>.<p>ಕೆಇಬಿ ನಿವೃತ್ತ ಎಂಜಿನಿಯರ್ ಕೆ.ಆರ್.ಲಕ್ಷ್ಮಿಕಾಂತ, ಬಿಇಎಲ್ ನಿವೃತ್ತ ನಿರ್ದೇಶಕ ಎಚ್.ಎನ್.ರಾಮಕೃಷ್ಣ, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಎಂ.ಜಿ.ಆರ್.ಅರಸ್, ಮಂಡಳಿ ಅಧ್ಯಕ್ಷ ಸುಂದರರಾಜೇ ಅರಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>