‘ದಕ್ಷಿಣ ಭಾರತದ ಭಕ್ತಿ ಪರಂಪರೆಯು ಸಾಹಿತ್ಯ ಹಾಗೂ ಸಂಗೀತಕ್ಕೆ ಚಲನಶೀಲತೆ ತಂದುಕೊಟ್ಟು ದೇಶದಾದ್ಯಂತ ವಿಸ್ತರಿಸಿಕೊಂಡಿತು. ಭಕ್ತಿ ಸಾಹಿತ್ಯವನ್ನು ಭೌಗೋಳಿಕ ಹಿನ್ನೆಲೆ, ಕಾಯಕ, ಸಮಾಜದ ಸ್ಥರಗಳು ಪ್ರಭಾವಿಸಿವೆ. ತಮಿಳುನಾಡಿನ ಆಳ್ವಾರರು– ನಾಯನಾರರು ಕೃಷಿಕರು. ಕನ್ನಡದ ವಚನಕಾರರು, ದಾಸರು ಕುಶಲಕರ್ಮಿಗಳಾಗಿದ್ದರಿಂದ ಸಾಹಿತ್ಯ ದೇಹಕೇಂದ್ರಿತವಾಗಿದ್ದರಿಂದ ಜಂಗಮ ತತ್ವಕ್ಕೆ ಮಹತ್ವ ದೊರಕಿತ್ತು’ ಎಂದು ಮಾಹಿತಿ ನೀಡಿದರು.