<p><strong>ಹುಣಸೂರು</strong>: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ಎದುರಿಸುತ್ತಿದ್ದ ಆರೋಪಿ ಕೆಂಡನಾಯಕ ಎಂಬಾತನಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿ ಆದೇಶಿಸಿದೆ.</p>.<p>ಘಟನೆ ವಿವರ: ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ಧರ್ಮಾಪುರ ಗ್ರಾಮದ ನಿವಾಸಿ ಕೆಂಡನಾಯಕ ಅದೇ ಗ್ರಾಮದ ನಿವಾಸಿ ರಾಜನಾಯಕನಿಂದ ₹ 50 ಸಾವಿರ ಸಾಲ ಪಡೆದಿದ್ದನು. ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. 2021 ರ ಸೆಪ್ಟೆಂಬರ್ 17 ರಂದು ರಾತ್ರಿ ರಾಜನಾಯಕನ ಮನೆ ಹಿಂಭಾಗದಿಂದ ಕೆಂಡನಾಯಕ ಹೋಗುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ರಾಜನಾಯಕ, ಆರೋಪಿಯೊಂದಿಗೆ ಜಗಳ ನಡುವೆ ತಳ್ಳಾಟದಲ್ಲಿ ಕೆಂಡನಾಯಕನ ಕಾಲಿಗೆ ಗಾಯವಾಗಿತ್ತು. ಆ ದಿನವೇ ರಾತ್ರಿ 10 ಗಂಟೆಗೆ ಕೆಂಡನಾಯಕ ರಾಜನಾಯಕನ ಮನೆಗೆ ಬಂದು ಆತನನ್ನು ಹಿಗ್ಗಾಮಗ್ಗ ಥಳಿಸಿ ಮಾರಕಾಯುಧದಿಂದ ಕೊಲೆ ಮಾಡಿದ್ದನು.</p>.<p> ಬಿಳಿಕೆರೆ ಪೊಲೀಸ್ ಠಾಣೆಯ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 8 ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಗೋವಿಂದಯ್ಯ ಜೂನ್ 11 ರಂದು ಆರೋಪಿ ಕೆಂಡನಾಯಕ ತಪ್ಪಿತಸ್ಥ ಎಂದು ತೀರ್ಪು ಹೊರ ಹಾಕಿ ಜೀವಾವಧಿ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ಎದುರಿಸುತ್ತಿದ್ದ ಆರೋಪಿ ಕೆಂಡನಾಯಕ ಎಂಬಾತನಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿ ಆದೇಶಿಸಿದೆ.</p>.<p>ಘಟನೆ ವಿವರ: ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ಧರ್ಮಾಪುರ ಗ್ರಾಮದ ನಿವಾಸಿ ಕೆಂಡನಾಯಕ ಅದೇ ಗ್ರಾಮದ ನಿವಾಸಿ ರಾಜನಾಯಕನಿಂದ ₹ 50 ಸಾವಿರ ಸಾಲ ಪಡೆದಿದ್ದನು. ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. 2021 ರ ಸೆಪ್ಟೆಂಬರ್ 17 ರಂದು ರಾತ್ರಿ ರಾಜನಾಯಕನ ಮನೆ ಹಿಂಭಾಗದಿಂದ ಕೆಂಡನಾಯಕ ಹೋಗುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ರಾಜನಾಯಕ, ಆರೋಪಿಯೊಂದಿಗೆ ಜಗಳ ನಡುವೆ ತಳ್ಳಾಟದಲ್ಲಿ ಕೆಂಡನಾಯಕನ ಕಾಲಿಗೆ ಗಾಯವಾಗಿತ್ತು. ಆ ದಿನವೇ ರಾತ್ರಿ 10 ಗಂಟೆಗೆ ಕೆಂಡನಾಯಕ ರಾಜನಾಯಕನ ಮನೆಗೆ ಬಂದು ಆತನನ್ನು ಹಿಗ್ಗಾಮಗ್ಗ ಥಳಿಸಿ ಮಾರಕಾಯುಧದಿಂದ ಕೊಲೆ ಮಾಡಿದ್ದನು.</p>.<p> ಬಿಳಿಕೆರೆ ಪೊಲೀಸ್ ಠಾಣೆಯ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 8 ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಗೋವಿಂದಯ್ಯ ಜೂನ್ 11 ರಂದು ಆರೋಪಿ ಕೆಂಡನಾಯಕ ತಪ್ಪಿತಸ್ಥ ಎಂದು ತೀರ್ಪು ಹೊರ ಹಾಕಿ ಜೀವಾವಧಿ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>