ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕುಡುಗೋಲು ಕಣ ರಕ್ತಹೀನತೆ’ ರೋಗಿಗಳಿಗೆ ಗುರುತಿನ ಚೀಟಿ ವಿತರಣೆ: ಉಚಿತ ಚಿಕಿತ್ಸೆ

Published : 4 ಜುಲೈ 2024, 7:13 IST
Last Updated : 4 ಜುಲೈ 2024, 7:13 IST
ಫಾಲೋ ಮಾಡಿ
Comments
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಈ ಕಾಯಿಲೆ ದೃಢಪಟ್ಟಿರುವವರು ‘ಅದೃಶ್ಯ ಅಂಗವಿಕಲರು’ ರೋಗಿಗಳಿಗೆ ಮುಂದಿನ ಎರಡು ವರ್ಷಗಳವರೆಗೆ ಸೌಲಭ್ಯ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ದತ್ತು ಪಡೆದ ಐಐಎಸ್‌ಸಿ
ಮುಂದಿನ‌ ಎರಡು ವರ್ಷಗಳಲ್ಲಿ ಏಳು ಜಿಲ್ಲೆಗಳ ಹಾಡಿಗಳ 352187 ಜನರನ್ನು ತಪಾಸಣೆಗೆ ಒಳಪಡಿಸಲಾಗುವುದು. ಅವರಿಗೆ ನಿಯಮಿತ ಚಿಕಿತ್ಸೆ ಕೊಡಿಸಿ ಜೀವನ ಮಟ್ಟ ವೃದ್ಧಿಸಲಾಗುವುದು.
ದಿನೇಶ್‌ ಗುಂಡೂರಾವ್ ಆರೋಗ್ಯ ಸಚಿವ
ಏನೇನು ಸೌಲಭ್ಯ?
ಕಾಯಿಲೆ ಇರುವುದು ದೃಢಪಟ್ಟವರಿಗೆ ಮಾಸಿಕ ಪಿಂಚಣಿ ₹ 1600 ನೀಡಲಾಗುತ್ತದೆ. ನಿಗದಿತ ತಂತ್ರಾಂಶದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಅವರವರ ಖಾತೆಗೆ ಜಮೆಯಾಗುತ್ತದೆ. ಬಸ್‌ ಹಾಗೂ ರೈಲಿನಲ್ಲಿ ಪ್ರಯಾಣಿಸುವಾಗ ಶೇ 50ರಷ್ಟು ರಿಯಾಯಿತಿ ದೊರೆಯುತ್ತದೆ. ಅವರಿಗೆ ಆರೋಗ್ಯದ ಸಮಸ್ಯೆ ಕಂಡುಬಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಕಾಲಕಾಲಕ್ಕೆ ತಪಾಸಣೆಯನ್ನೂ ಉಚಿತವಾಗಿ ನೀಡಲಾಗುವುದು. ಬಳಕೆದಾರರ ಶುಲ್ಕವನ್ನೂ ಅವರಿಂದ ಪಡೆದುಕೊಳ್ಳುವುದಿಲ್ಲ. ರಕ್ತವನ್ನೂ ಉಚಿತವಾಗಿ ನೀಡಲಾಗುತ್ತದೆ. ಚಿಕಿತ್ಸೆಗೆ ಒದಗಿಸಲಾಗುವ ಮಾತ್ರೆಗಳನ್ನು (ಹೈಡ್ರಾಕ್ಸಿಯುರಿಯಾ ಮಾತ್ರೆ ಹಾಗೂ ಹೆಚ್ಚುವರಿ ರೋಗ ನಿರೋಧಕಗಳು) ಪ್ರತಿ ತಿಂಗಳೂ ಉಚಿತವಾಗಿ ವಿತರಿಸಲಾಗುತ್ತದೆ. ಇದೆಲ್ಲದಕ್ಕೂ ‘ಬಹುಪಯೋಗಿ’ಯಾದ ಗುರುತಿನ ಚೀಟಿ ನೆರವಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT