ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಗಣರಾಜ್ಯೋತ್ಸವ ಶಿಬಿರಕ್ಕೆ ದಿಯಾ ಆಯ್ಕೆ

Last Updated 23 ಡಿಸೆಂಬರ್ 2022, 10:10 IST
ಅಕ್ಷರ ಗಾತ್ರ

ಮೈಸೂರು: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಶಿಬಿರ–2023ಕ್ಕೆ ಮೈಸೂರಿನ ಕುಮಾರಬೀಡು ಆರ್ಕಿಡ್ಸ್ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದಿಯಾ ಗಣೇಶ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಜೂನಿಯರ್ ವಿಭಾಗದಿಂದ ಆಯ್ಕೆಯಾದ ಏಕೈಕ ಕೆಡೆಟ್ ಇವರಾಗಿದ್ದಾರೆ. ಕಳೆದ ವರ್ಷ 14–ಕರ್ನಾಟಕ ಬೆಟಾಲಿಯನ್ ಅಡಿಯಲ್ಲಿ ಆರ್ಕಿಡ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಎನ್‌ಸಿಸಿ ಪ್ರಾರಂಭವಾಯಿತು. 50 ಕೆಡೆಟ್‌ಗಳಿಗೆ ಜೂನಿಯರ್ ವಿಭಾಗ (ಜೆಡಿ) ಜೂನಿಯರ್ ವಿಂಗ್ (ಜೆಡಬ್ಲ್ಯೂ)ನಲ್ಲಿ ತರಬೇತಿ ನೀಡಲಾಗುತ್ತಿದೆ. 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಎನ್‌ಸಿಸಿಯನ್ನು ಪರಿಚಯಿಸಿದೆ.

ಸವಿ ಗಣೇಶ್–ಗಣೇಶ್ ಮಾದಪ್ಪ ದಂಪತಿಯ ಪುತ್ರಿಯಾದ ದಿಯಾ ಅಂತಿಮ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗುವ ಮುನ್ನ ಮೈಸೂರು ಮತ್ತು ಬೆಂಗಳೂರಿನಲ್ಲಿ 7 ವಿವಿಧ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಅವರನ್ನು ಆರ್ಕಿಡ್ಸ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT