<p><strong>ಮೈಸೂರು</strong>: ‘ಯೋಗವನ್ನು ರೂಪಾಂತರಿಸದೇ ಹಿರಿಯರಿಂದ ಬಳುವಳಿಯಾಗಿ ಬಂದಿರುವ ರೀತಿಯಲ್ಲಿಯೇ ಪರಂಪರೆ ಮುಂದುವರಿಸಬೇಕು’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು.</p>.<p>ಉತ್ತನಹಳ್ಳಿಯ ವಿಜಯಗಿರಿಯಲ್ಲಿ ‘ಓದುಗ ಪ್ರಕಾಶನ’, ‘ಮೈಸೂರು ಕಲ್ಚರಲ್ ಅಸೋಸಿಯೇಷನ್’, ‘ಭಾರತೀ ಯೋಗಧಾಮ’ದ ಸಹಯೋಗದಲ್ಲಿ ಶುಕ್ರವಾರ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ, ಮೈಸೂರು ಪರಂಪರೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಮುಮ್ಮಡಿ ಕೃಷ್ಣರಾಜ ಒಡೆಯರ್ 108 ಯೋಗಾಸನ ಪ್ರದರ್ಶಿಸುತ್ತಿದ್ದರು. ತಿರುಮಲೈ ಕೃಷ್ಣಮಾಚಾರ್ ಮೂರು ಸಾವಿರಕ್ಕೂ ಹೆಚ್ಚು ಆಸನ ಪರಿಚಯಿಸಿದರು. ಭಾರತೀಯರಾಗಿ ಈ ಗುರು ಪರಂಪರೆ ನೀಡಿರುವ ರೀತಿಯಲ್ಲಿಯೇ ಯೋಗ ಬೆಳೆಸಬೇಕಿದೆ’ ಎಂದರು.</p>.<p>ಭಾರತೀ ಯೋಗಧಾಮ ಸ್ಥಾಪಕ ಕೆ.ಎಲ್.ಶಂಕರನಾರಾಯಣ ಜೋಯಿಸ್, ‘ದೇಶದಲ್ಲಿ ಬಳಕೆಯಾಗುತ್ತಿರುವ ಯೋಗಾಸನಗಳು ಮಾರ್ಪಾಡಾಗಿವೆ. ಮೂಲ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕು. ಕೇವಲ ಆಸನಗಳನ್ನು ಮಾಡುವುದು ಯೋಗವಲ್ಲ. ಸಮಚಿತ್ತದಿಂದ ಅರ್ಧ ಗಂಟೆ ಕುಳಿತುಕೊಳ್ಳುವುದೂ ಆಸನಕ್ಕಿಂತ ಮಿಗಿಲಾದ ಸ್ಥಿತಿ’ ಎಂದು ಅಭಿಪ್ರಾಯಪಟ್ಟರು.</p>.<p>ಯೋಗ ಗುರು ಪಿ.ಎನ್.ಗಣೇಶ್ ಕುಮಾರ್, ಯೋಗ ತಜ್ಞ ಡಾ.ಎ.ಎಸ್.ಚಂದ್ರಶೇಖರ್ ಹಾಗೂ ಯೋಗಪಟುಗಳಾದ ಎಚ್.ಖುಷಿ, ಅಮೂಲ್ಯಾ, ಆರ್.ಅಂಕಿತಾ ಅವರಿಗೆ ಕ್ರಮವಾಗಿ ‘ಸ್ಟಾರ್ ಆಫ್ ಯೋಗ’, ‘ದಿ ರೈಸಿಂಗ್ ಸ್ಟಾರ್ಸ್ ಆಫ್ ಯೋಗ’ ಪ್ರಶಸ್ತಿ ಪ್ರದಾನ ಮಾಡಲಾಯಿತು. </p>.<p>ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್, ‘ಮೈಸೂರು ಕಲ್ಚರಲ್ ಅಸೋಸಿಯೇಷನ್’ ಅಧ್ಯಕ್ಷ ಎ.ಪಿ.ನಾಗೇಶ್, ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಯೋಗವನ್ನು ರೂಪಾಂತರಿಸದೇ ಹಿರಿಯರಿಂದ ಬಳುವಳಿಯಾಗಿ ಬಂದಿರುವ ರೀತಿಯಲ್ಲಿಯೇ ಪರಂಪರೆ ಮುಂದುವರಿಸಬೇಕು’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು.</p>.<p>ಉತ್ತನಹಳ್ಳಿಯ ವಿಜಯಗಿರಿಯಲ್ಲಿ ‘ಓದುಗ ಪ್ರಕಾಶನ’, ‘ಮೈಸೂರು ಕಲ್ಚರಲ್ ಅಸೋಸಿಯೇಷನ್’, ‘ಭಾರತೀ ಯೋಗಧಾಮ’ದ ಸಹಯೋಗದಲ್ಲಿ ಶುಕ್ರವಾರ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ, ಮೈಸೂರು ಪರಂಪರೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಮುಮ್ಮಡಿ ಕೃಷ್ಣರಾಜ ಒಡೆಯರ್ 108 ಯೋಗಾಸನ ಪ್ರದರ್ಶಿಸುತ್ತಿದ್ದರು. ತಿರುಮಲೈ ಕೃಷ್ಣಮಾಚಾರ್ ಮೂರು ಸಾವಿರಕ್ಕೂ ಹೆಚ್ಚು ಆಸನ ಪರಿಚಯಿಸಿದರು. ಭಾರತೀಯರಾಗಿ ಈ ಗುರು ಪರಂಪರೆ ನೀಡಿರುವ ರೀತಿಯಲ್ಲಿಯೇ ಯೋಗ ಬೆಳೆಸಬೇಕಿದೆ’ ಎಂದರು.</p>.<p>ಭಾರತೀ ಯೋಗಧಾಮ ಸ್ಥಾಪಕ ಕೆ.ಎಲ್.ಶಂಕರನಾರಾಯಣ ಜೋಯಿಸ್, ‘ದೇಶದಲ್ಲಿ ಬಳಕೆಯಾಗುತ್ತಿರುವ ಯೋಗಾಸನಗಳು ಮಾರ್ಪಾಡಾಗಿವೆ. ಮೂಲ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕು. ಕೇವಲ ಆಸನಗಳನ್ನು ಮಾಡುವುದು ಯೋಗವಲ್ಲ. ಸಮಚಿತ್ತದಿಂದ ಅರ್ಧ ಗಂಟೆ ಕುಳಿತುಕೊಳ್ಳುವುದೂ ಆಸನಕ್ಕಿಂತ ಮಿಗಿಲಾದ ಸ್ಥಿತಿ’ ಎಂದು ಅಭಿಪ್ರಾಯಪಟ್ಟರು.</p>.<p>ಯೋಗ ಗುರು ಪಿ.ಎನ್.ಗಣೇಶ್ ಕುಮಾರ್, ಯೋಗ ತಜ್ಞ ಡಾ.ಎ.ಎಸ್.ಚಂದ್ರಶೇಖರ್ ಹಾಗೂ ಯೋಗಪಟುಗಳಾದ ಎಚ್.ಖುಷಿ, ಅಮೂಲ್ಯಾ, ಆರ್.ಅಂಕಿತಾ ಅವರಿಗೆ ಕ್ರಮವಾಗಿ ‘ಸ್ಟಾರ್ ಆಫ್ ಯೋಗ’, ‘ದಿ ರೈಸಿಂಗ್ ಸ್ಟಾರ್ಸ್ ಆಫ್ ಯೋಗ’ ಪ್ರಶಸ್ತಿ ಪ್ರದಾನ ಮಾಡಲಾಯಿತು. </p>.<p>ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್, ‘ಮೈಸೂರು ಕಲ್ಚರಲ್ ಅಸೋಸಿಯೇಷನ್’ ಅಧ್ಯಕ್ಷ ಎ.ಪಿ.ನಾಗೇಶ್, ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>