ಹುಣಸೂರು ( ಮೈಸೂರು): ನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ ಇರುವ ಎಸ್.ಎಸ್. ಸಾಮಿಲ್ ನಲ್ಲಿ ಬುಧವಾರ ತಡರಾತ್ರಿ ಜೋಡಿ ಕೊಲೆ ನಡೆದಿದೆ.
ಸಾಮಿಲ್ ನ ಕಾವಲುಗಾರ ವೆಂಕಟೇಶ ( 65) ಹಾಗೂ ಷಣ್ಮುಗಂ (60) ಹತ್ಯೆಯಾದವರು. ಹಣದ ಆಸೆಗಾಗಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವೆಂಕಟೇಶ್ ಕಳೆದ ಐದು ವರ್ಷದಿಂದ ಇಲ್ಲಿ ಕಾವಲುಗಾರರಾಗಿದ್ದರು. ಷಣ್ಮುಗಂ ಮಾನಸಿಕ ಅಸ್ತಸ್ಥರಾಗಿದ್ದು, ರಾತ್ರಿ ಹೊತ್ತು ಸಾಮಿಲ್ ಆವರಣದಲ್ಲೇ ಉಳಿಯುದ್ದರು ಎಂದು ಸಾಮಿಲ್ ಮಾಲೀಕ ಸಮಿವುಲ್ಲಾ ಷರೀಫ್ ಪ್ರಜಾವಾಣಿಗೆ ತಿಳಿಸಿದರು.
ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ. ನಂದಿನಿ ಭೇಟಿ ನೀಡಿದ್ದರು. ಡಿವೈಎಸ್ಪಿ ಮಹೇಶ್ ನೇತೃತ್ವದಲ್ಲಿ ತನಿಖೆಗಾಗಿ ತಂಡ ರಚಿಸಿದ್ದು, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಅವರು ಮಾಹಿತಿ ನೀಡಿದರು.
ಪೊಲೀಸ್ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು.