ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಸಾಮಿಲ್‌ನಲ್ಲಿ ಜೋಡಿ ಕೊಲೆ

Published 22 ಜೂನ್ 2023, 5:03 IST
Last Updated 22 ಜೂನ್ 2023, 5:03 IST
ಅಕ್ಷರ ಗಾತ್ರ

ಹುಣಸೂರು ( ಮೈಸೂರು): ನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ ಇರುವ ಎಸ್.ಎಸ್. ಸಾಮಿಲ್ ನಲ್ಲಿ ಬುಧವಾರ ತಡರಾತ್ರಿ ಜೋಡಿ ಕೊಲೆ ನಡೆದಿದೆ.

ಸಾಮಿಲ್ ನ ಕಾವಲುಗಾರ ವೆಂಕಟೇಶ ( 65) ಹಾಗೂ ಷಣ್ಮುಗಂ (60) ಹತ್ಯೆಯಾದವರು. ಹಣದ ಆಸೆಗಾಗಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವೆಂಕಟೇಶ್ ಕಳೆದ ಐದು ವರ್ಷದಿಂದ ಇಲ್ಲಿ ಕಾವಲುಗಾರರಾಗಿದ್ದರು. ಷಣ್ಮುಗಂ ಮಾನಸಿಕ ಅಸ್ತಸ್ಥರಾಗಿದ್ದು, ರಾತ್ರಿ ಹೊತ್ತು ಸಾಮಿಲ್ ಆವರಣದಲ್ಲೇ ಉಳಿಯುದ್ದರು ಎಂದು ಸಾಮಿಲ್ ಮಾಲೀಕ ಸಮಿವುಲ್ಲಾ ಷರೀಫ್ ಪ್ರಜಾವಾಣಿಗೆ ತಿಳಿಸಿದರು.

ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ. ನಂದಿನಿ ಭೇಟಿ ನೀಡಿದ್ದರು. ಡಿವೈಎಸ್ಪಿ ಮಹೇಶ್ ನೇತೃತ್ವದಲ್ಲಿ ತನಿಖೆಗಾಗಿ ತಂಡ ರಚಿಸಿದ್ದು, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಅವರು ಮಾಹಿತಿ ನೀಡಿದರು.

ಪೊಲೀಸ್ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT