<p><strong>ಹುಣಸೂರು:</strong> ‘ಆದಿವಾಸಿ ಗಿರಿಜನರು ಸ್ವಯಂ ಕೃಷಿ ಮಾಡುವ ಹಂತಕ್ಕೆ ಬಂದಿರುವುದು ಶ್ಲಾಘನೀಯ’ ಎಂದು ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದ 1, 2, 3, 5 ಘಟಕಗಳಿಗೆ ಶನಿವಾರ ಭೇಟಿ ನೀಡಿದ್ದ ಅವರು, ರೈತ ಉತ್ಪಾದಕರ ಸಂಘ ಸ್ಥಾಪನೆಗೆ ಗಿರಿಜನ ಕೃಷಿಕರೊಂದಿಗೆ ಆಶ್ರಮ ಶಾಲೆಯಲ್ಲಿಸಭೆ ನಡೆಸಿ, ಗಿರಿಜನರ ಬೇಸಾಯಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಸಂಗ್ರಹಿಸಿದರು.</p>.<p>‘ಬೆಳೆಗಳ ದಾಸ್ತಾನಿಗೆ ಗೋದಾಮು, ಬಿತ್ತನೆ ಬೀಜ, ರಸಗೊಬ್ಬರ, ವೈಜ್ಞಾನಿಕ ತರಬೇತಿ ಮತ್ತು ಮಾರುಕಟ್ಟೆ ಸ್ಥಾಪನೆಗೆ ಗಿರಿಜನರಿಂದ ಹೆಚ್ಚಿನ ಬೇಡಿಕೆ ಇದ್ದು, ಈ ಸಂಬಂಧ ಯೋಜನೆ ಅಡಿಯಲ್ಲಿ ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ರೈತ ಉತ್ಪಾದನಾ ಸಂಘ ಸ್ಥಾಪಿಸಿ ಅದರೊಳಗೆ ಈ ಎಲ್ಲಾ ಬೇಡಿಕೆ ಈಡೇರಿಸುವ ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.</p>.<p class="Subhead">ಪ್ರವಾಸ: ‘ಆದಿವಾಸಿ ಗಿರಿಜನರಿಗೆ ಕೃಷಿ ಸಂಬಂಧ ರಾಜ್ಯದಾದ್ಯಂತ ಪ್ರಗತಿಪರ ರೈತರೊಂದಿಗೆ ಸಂವಾದ ಹಾಗೂ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವುದು. ಇದಲ್ಲದೆ ಕೃಷಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವೈಜ್ಞಾನಿಕ ಬೇಸಾಯ ಪದ್ಧತಿ ತಿಳಿಸುವ ಪ್ರಯತ್ನ ನಡೆಸಲಾಗುವುದು’ ಎಂದರು.</p>.<p>ರೈತ ಉತ್ಪಾದನೆ ಸಂಘ ಯೋಜನೆ ಕುರಿತ ಗಿರಿಜನರಿಗೆ ಮಾಹಿತಿ ನೀಡಿದ ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು, ‘ಗಿರಿಜನರು 2 ದಶಕದಿಂದ ಕೃಷಿ ಮಾಡುವ ಬಗ್ಗೆ ಹಂತ ಹಂತವಾಗಿ ಕಲಿತು ಒಂದು ಹಂತಕ್ಕೆ ಬಂದಿದ್ದಾರೆ. ಈ ಜನರಿಗೆ ವೈಜ್ಞಾನಿಕ ಬೇಸಾಯ ಪದ್ಧತಿ ತಿಳಿಹೇಳಬೇಕಾಗಿದೆ. ಆರ್ಥಿಕ ಸುಧಾರಣೆಗಾಗಿ ಕೃಷಿಯೊಂದಿಗೆ ಹೈನುಗಾರಿಕೆ ಮತ್ತು ತೋಟಗಾರಿಕೆ ಬೇಸಾಯವನ್ನು ತಿಳಿಸುವ ಕೆಲಸ ಆಗಬೇಕು’ ಎಂದರು.</p>.<p>ಸಭೆಯಲ್ಲಿ ಗಿರಿಜನ ಕೃಷಿಕರಾದ ಜೆ.ಕೆ.ತಿಮ್ಮಯ್ಯ, ಜೆ.ಕೆ.ಮಣಿ, ಜೆ.ಕೆ.ಬಸವ, ಜೆ.ಕೆ.ಹರೀಶ್ ಕೃಷಿ ಅನುಭವ ಹಂಚಿಕೊಂಡರು.</p>.<p>ಸ್ಥಳ ಪರಿಶೀಲನೆ ತಂಡದಲ್ಲಿ ರಾಜ್ಯ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಕುಮಾರ್, ಜಿಲ್ಲಾ ಪರಿಶಿಷ್ಟ ಕಲ್ಯಾಣ ಅಧಿಕಾರಿ ಪ್ರಭಾ ಅರಸು, ತಾಲ್ಲೂಕು ಎಸ್ಟಿ ಅಧಿಕಾರಿ ಬಸವರಾಜ್ ಮತ್ತು ಯೋಜನಾ ತಜ್ಞರಾದ ನಿಶ್ಚಿತ್ ಮತ್ತು ಕಿರಣ್ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ‘ಆದಿವಾಸಿ ಗಿರಿಜನರು ಸ್ವಯಂ ಕೃಷಿ ಮಾಡುವ ಹಂತಕ್ಕೆ ಬಂದಿರುವುದು ಶ್ಲಾಘನೀಯ’ ಎಂದು ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದ 1, 2, 3, 5 ಘಟಕಗಳಿಗೆ ಶನಿವಾರ ಭೇಟಿ ನೀಡಿದ್ದ ಅವರು, ರೈತ ಉತ್ಪಾದಕರ ಸಂಘ ಸ್ಥಾಪನೆಗೆ ಗಿರಿಜನ ಕೃಷಿಕರೊಂದಿಗೆ ಆಶ್ರಮ ಶಾಲೆಯಲ್ಲಿಸಭೆ ನಡೆಸಿ, ಗಿರಿಜನರ ಬೇಸಾಯಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಸಂಗ್ರಹಿಸಿದರು.</p>.<p>‘ಬೆಳೆಗಳ ದಾಸ್ತಾನಿಗೆ ಗೋದಾಮು, ಬಿತ್ತನೆ ಬೀಜ, ರಸಗೊಬ್ಬರ, ವೈಜ್ಞಾನಿಕ ತರಬೇತಿ ಮತ್ತು ಮಾರುಕಟ್ಟೆ ಸ್ಥಾಪನೆಗೆ ಗಿರಿಜನರಿಂದ ಹೆಚ್ಚಿನ ಬೇಡಿಕೆ ಇದ್ದು, ಈ ಸಂಬಂಧ ಯೋಜನೆ ಅಡಿಯಲ್ಲಿ ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ರೈತ ಉತ್ಪಾದನಾ ಸಂಘ ಸ್ಥಾಪಿಸಿ ಅದರೊಳಗೆ ಈ ಎಲ್ಲಾ ಬೇಡಿಕೆ ಈಡೇರಿಸುವ ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.</p>.<p class="Subhead">ಪ್ರವಾಸ: ‘ಆದಿವಾಸಿ ಗಿರಿಜನರಿಗೆ ಕೃಷಿ ಸಂಬಂಧ ರಾಜ್ಯದಾದ್ಯಂತ ಪ್ರಗತಿಪರ ರೈತರೊಂದಿಗೆ ಸಂವಾದ ಹಾಗೂ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವುದು. ಇದಲ್ಲದೆ ಕೃಷಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವೈಜ್ಞಾನಿಕ ಬೇಸಾಯ ಪದ್ಧತಿ ತಿಳಿಸುವ ಪ್ರಯತ್ನ ನಡೆಸಲಾಗುವುದು’ ಎಂದರು.</p>.<p>ರೈತ ಉತ್ಪಾದನೆ ಸಂಘ ಯೋಜನೆ ಕುರಿತ ಗಿರಿಜನರಿಗೆ ಮಾಹಿತಿ ನೀಡಿದ ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು, ‘ಗಿರಿಜನರು 2 ದಶಕದಿಂದ ಕೃಷಿ ಮಾಡುವ ಬಗ್ಗೆ ಹಂತ ಹಂತವಾಗಿ ಕಲಿತು ಒಂದು ಹಂತಕ್ಕೆ ಬಂದಿದ್ದಾರೆ. ಈ ಜನರಿಗೆ ವೈಜ್ಞಾನಿಕ ಬೇಸಾಯ ಪದ್ಧತಿ ತಿಳಿಹೇಳಬೇಕಾಗಿದೆ. ಆರ್ಥಿಕ ಸುಧಾರಣೆಗಾಗಿ ಕೃಷಿಯೊಂದಿಗೆ ಹೈನುಗಾರಿಕೆ ಮತ್ತು ತೋಟಗಾರಿಕೆ ಬೇಸಾಯವನ್ನು ತಿಳಿಸುವ ಕೆಲಸ ಆಗಬೇಕು’ ಎಂದರು.</p>.<p>ಸಭೆಯಲ್ಲಿ ಗಿರಿಜನ ಕೃಷಿಕರಾದ ಜೆ.ಕೆ.ತಿಮ್ಮಯ್ಯ, ಜೆ.ಕೆ.ಮಣಿ, ಜೆ.ಕೆ.ಬಸವ, ಜೆ.ಕೆ.ಹರೀಶ್ ಕೃಷಿ ಅನುಭವ ಹಂಚಿಕೊಂಡರು.</p>.<p>ಸ್ಥಳ ಪರಿಶೀಲನೆ ತಂಡದಲ್ಲಿ ರಾಜ್ಯ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಕುಮಾರ್, ಜಿಲ್ಲಾ ಪರಿಶಿಷ್ಟ ಕಲ್ಯಾಣ ಅಧಿಕಾರಿ ಪ್ರಭಾ ಅರಸು, ತಾಲ್ಲೂಕು ಎಸ್ಟಿ ಅಧಿಕಾರಿ ಬಸವರಾಜ್ ಮತ್ತು ಯೋಜನಾ ತಜ್ಞರಾದ ನಿಶ್ಚಿತ್ ಮತ್ತು ಕಿರಣ್ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>