<p>ಹುಣಸೂರು/ಹನಗೋಡು: ತಾಲ್ಲೂಕಿನ ಅಸ್ವಾಳು, ಹನಗೋಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಬಾಳೆ ತೋಟ ಮತ್ತು ಬಿದಿರು ಹಿಂಡಲು ಸೇರಿದಂತೆ ತೆಂಗಿನ ತೋಟ ಬೆಂಕಿ ಕೆನ್ನಾಲಿಗೆಗೆ ಸುಟ್ಟ ಘಟನೆ ಭಾನುವಾರ ಸಂಭವಿಸಿದೆ.</p>.<p>ಬಿಳಿಕೆರೆ ಹೋಬಳಿ ದೈತ್ಯನಕೆರೆ ಕಾವಲಿನ ಪ್ರಗತಿಪರ ರೈತ ಶಿವಕುಮಾರ್ ಅವರಿಗೆ ಸೇರಿದ 2 ಎಕರೆ ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿದೆ. ಇವರ ತೋಟಕ್ಕೆ ಹೊಂದಿಕೊಂಡಿದ್ದ 1 ಎಕರೆ ಬಾಳೆ ತೋಟಕ್ಕೂ ಬೆಂಕಿ ತಗುಲಿದ್ದು, ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಸಂಪೂರ್ಣ ಸುಟ್ಟು ಹೋಗಲಾಗಿ ರೈತ ಶಿವಕುಮಾರ್ ಬೆಳೆದಿದ್ದ ₹ 6 ಲಕ್ಷ ಮೌಲ್ಯದ ಬಾಳೆ ನಷ್ಟವಾಗಿದೆ.</p>.<p>‘ಹನಗೋಡು ಗ್ರಾಮದ ಲಕ್ಷ್ಮಣತೀರ್ಥ ನದಿ ಅಂಚಿನ ಹೊಲದ ರೈತರು ಬೆಳೆಸಿದ್ದ ಬಿದಿರು ಹಿಂಡಲು ಅಥವಾ ಮೆಳೆಗೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು ₹ 2 ಲಕ್ಷ ನಷ್ಟವಾಗಿದೆ. ಗ್ರಾಮಸ್ಥರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದಾಗ ಇಲಾಖೆಯ ಒಂದು ವಾಹನ ಕೆಟ್ಟಿದ್ದು, ಮತ್ತೊಂದು ದೈತ್ಯನ ಕೆರೆ ಕಾವಲಿನ ಬಾಳೆ ತೋಟಕ್ಕೆ ಹೋಗಿದೆ ಎಂದು ಸಿಬ್ಬಂದಿ ತಿಳಿಸಿದರು’ ಎಂದು ರೈತರಾದ ರಾಜಣ್ಣ, ಸತೀಶ್ ಮತ್ತು ಮಹೇಂದ್ರ ಆರೋಪಿಸಿದರು.</p>.<p>ಬೆಂಕಿ ಹತೋಟಿಗೆ ತರಲು ಸ್ಥಳಿಯ ರೈತರು ನೆರೆಯವರ ಪಂಪ್ ಸೆಟ್ ನೀರು ಬಳಸಿದರು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು/ಹನಗೋಡು: ತಾಲ್ಲೂಕಿನ ಅಸ್ವಾಳು, ಹನಗೋಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಬಾಳೆ ತೋಟ ಮತ್ತು ಬಿದಿರು ಹಿಂಡಲು ಸೇರಿದಂತೆ ತೆಂಗಿನ ತೋಟ ಬೆಂಕಿ ಕೆನ್ನಾಲಿಗೆಗೆ ಸುಟ್ಟ ಘಟನೆ ಭಾನುವಾರ ಸಂಭವಿಸಿದೆ.</p>.<p>ಬಿಳಿಕೆರೆ ಹೋಬಳಿ ದೈತ್ಯನಕೆರೆ ಕಾವಲಿನ ಪ್ರಗತಿಪರ ರೈತ ಶಿವಕುಮಾರ್ ಅವರಿಗೆ ಸೇರಿದ 2 ಎಕರೆ ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿದೆ. ಇವರ ತೋಟಕ್ಕೆ ಹೊಂದಿಕೊಂಡಿದ್ದ 1 ಎಕರೆ ಬಾಳೆ ತೋಟಕ್ಕೂ ಬೆಂಕಿ ತಗುಲಿದ್ದು, ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಸಂಪೂರ್ಣ ಸುಟ್ಟು ಹೋಗಲಾಗಿ ರೈತ ಶಿವಕುಮಾರ್ ಬೆಳೆದಿದ್ದ ₹ 6 ಲಕ್ಷ ಮೌಲ್ಯದ ಬಾಳೆ ನಷ್ಟವಾಗಿದೆ.</p>.<p>‘ಹನಗೋಡು ಗ್ರಾಮದ ಲಕ್ಷ್ಮಣತೀರ್ಥ ನದಿ ಅಂಚಿನ ಹೊಲದ ರೈತರು ಬೆಳೆಸಿದ್ದ ಬಿದಿರು ಹಿಂಡಲು ಅಥವಾ ಮೆಳೆಗೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು ₹ 2 ಲಕ್ಷ ನಷ್ಟವಾಗಿದೆ. ಗ್ರಾಮಸ್ಥರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದಾಗ ಇಲಾಖೆಯ ಒಂದು ವಾಹನ ಕೆಟ್ಟಿದ್ದು, ಮತ್ತೊಂದು ದೈತ್ಯನ ಕೆರೆ ಕಾವಲಿನ ಬಾಳೆ ತೋಟಕ್ಕೆ ಹೋಗಿದೆ ಎಂದು ಸಿಬ್ಬಂದಿ ತಿಳಿಸಿದರು’ ಎಂದು ರೈತರಾದ ರಾಜಣ್ಣ, ಸತೀಶ್ ಮತ್ತು ಮಹೇಂದ್ರ ಆರೋಪಿಸಿದರು.</p>.<p>ಬೆಂಕಿ ಹತೋಟಿಗೆ ತರಲು ಸ್ಥಳಿಯ ರೈತರು ನೆರೆಯವರ ಪಂಪ್ ಸೆಟ್ ನೀರು ಬಳಸಿದರು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>