‘ಹನಗೋಡು ಗ್ರಾಮದ ಲಕ್ಷ್ಮಣತೀರ್ಥ ನದಿ ಅಂಚಿನ ಹೊಲದ ರೈತರು ಬೆಳೆಸಿದ್ದ ಬಿದಿರು ಹಿಂಡಲು ಅಥವಾ ಮೆಳೆಗೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು ₹ 2 ಲಕ್ಷ ನಷ್ಟವಾಗಿದೆ. ಗ್ರಾಮಸ್ಥರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದಾಗ ಇಲಾಖೆಯ ಒಂದು ವಾಹನ ಕೆಟ್ಟಿದ್ದು, ಮತ್ತೊಂದು ದೈತ್ಯನ ಕೆರೆ ಕಾವಲಿನ ಬಾಳೆ ತೋಟಕ್ಕೆ ಹೋಗಿದೆ ಎಂದು ಸಿಬ್ಬಂದಿ ತಿಳಿಸಿದರು’ ಎಂದು ರೈತರಾದ ರಾಜಣ್ಣ, ಸತೀಶ್ ಮತ್ತು ಮಹೇಂದ್ರ ಆರೋಪಿಸಿದರು.