<p><strong>ಮೈಸೂರು:</strong> ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ತಾಲೀಮು ಆರಂಭವಾಗಿದೆ.</p>.<p>ಅಂಬಾರಿ ಕಟ್ಟುವ ಜಾಗದಿಂದ ಗಾಂಭೀರ್ಯವಾಗಿ ಹೆಜ್ಜೆ ಇಟ್ಟು ಬಂದ ಕ್ಯಾಪ್ಟನ್ ಅಭಿಮನ್ಯು ಆನೆಗೆ ಅರಮನೆ ಮುಂಭಾಗದಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಅಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸುವ ತಾಲೀಮು ನಡೆಸಿದರು.ಬಳಿಕ ಗೌರವ ವಂದನೆ ಸಲ್ಲಿಸಿದರು.</p>.<p>ವಿಕ್ರಂ ಹಾಗೂ ಗೋಪಿ ಆನೆಯನ್ನು ರಾಜವಂಶಸ್ಥರು ನಡೆಸುತ್ತಿರುವ ಪೂಜಾ ಕಾರ್ಯಕ್ರಮಕ್ಕೆ ಕರೆದೊಯ್ದ ಕಾರಣ ಕಾವೇರಿ, ವಿಜಯಾ ಹಾಗೂ ಅಭಿಮನ್ಯು ಮಾತ್ರ ಭಾಗವಹಿಸಿದ್ದವು. ಜೊತೆಗೆ ಕರ್ನಾಟಕ ವಾದ್ಯ ತಂಡ ಹಾಗೂ ಅಶ್ವಾರೋಹಿ ಪಡೆಇದ್ದವು.</p>.<p>ಈ ಬಾರಿ ದಸರಾ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಂಡಿದ್ದು, ಗಜಪಡೆ ಹಾಗೂ ಅಶ್ವಾರೋಹಿ ಪಡೆ ಅಭ್ಯಾಸ ನಡೆಸುತ್ತಿವೆ. ಇನ್ನೂ ಎರಡು ದಿನ ಬೆಳಿಗ್ಗೆ 8 ಗಂಟೆಗೆ ತಾಲೀಮು ಆರಂಭವಾಗಲಿದ್ದು, 30 ಕುದುರೆಗಳು ಹಾಗೂ 5 ಆನೆಗಳು ಪಾಲ್ಗೊಳ್ಳಲಿವೆ. ಮೈಸೂರು ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಕುಶಾಲತೋಪು ಸಿಡಿಸುವ ಅಂತಿಮ ಸುತ್ತಿನ ತಾಲೀಮು ಕೂಡ ನಡೆಯಲಿದೆ.</p>.<p>‘ಪ್ರತಿಬಾರಿ ಎರಡು ದಿನ ಮಾತ್ರ ತಾಲೀಮು ನಡೆಸುತ್ತಿದ್ದರು. ಈ ಬಾರಿ ಮೂರು ಬಾರಿ ನಡೆಸಲಾಗುತ್ತಿದೆ. ಶುಕ್ರವಾರ ನಡೆಯಲಿರುವ ಪುಷ್ಪಾರ್ಚನೆ ತಾಲೀಮಿನಲ್ಲಿ ಮೇಯರ್, ಪೊಲೀಸ್ ಕಮಿಷನರ್ ಕೂಡ ಪಾಲ್ಗೊಳ್ಳಲಿದ್ದಾರೆ’ ಎಂದು ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು ತಿಳಿಸಿದರು.</p>.<p>ಈಗಾಗಲೇ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲಾಗಿದೆ. ಅಲ್ಲದೇ, ಗೋಪಿಗೂ ಮೊದಲ ಬಾರಿ ಮರದ ಅಂಬಾರಿ ಹೊರಿಸಲಾಗಿದೆ.</p>.<p>ಮೊದಲ ದಿನ ಪುಷ್ಪಾರ್ಚನೆ ತಾಲೀ ಮಿನಲ್ಲಿ ಡಾ.ನಾಗರಾಜು, ಅರಮನೆ ಭದ್ರತಾ ಎಸಿಪಿ ಚಂದ್ರಶೇಖರ್, ಶೈಲೇಂದ್ರ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.</p>.<p class="Subhead"><strong>ಅರಮನೆಯಲ್ಲೂ ಪೂಜೆ</strong></p>.<p class="Subhead">ಶರನ್ನವರಾತ್ರಿ ಅಂಗವಾಗಿ ರಾಜವಂಶಸ್ಥರು ಅರಮನೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯ ಮುಂದುವರಿಸಿದ್ದಾರೆ.</p>.<p>ಗುರುವಾರ ಆರನೇ ದಿನದ ಖಾಸಗಿ ದರ್ಬಾರ್ ಕೊನೆಗೊಂಡಿದೆ. ಪಟ್ಟದಾನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಪೂಜೆಗೆಂದು ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಪಟ್ಟದ ಕುದುರೆ ಗಾಬರಿಗೊಂಡಿತು.</p>.<p><strong>ನಾಗರಾಜು ನೇತೃತ್ವ</strong></p>.<p>ದಸರಾ ಮೆರವಣಿಗೆಯಲ್ಲಿ ಈ ಬಾರಿ ಅಶ್ವಾರೋಹಿ ಪಡೆಯನ್ನು ಕೆಎಆರ್ಪಿ ಮೌಂಟೆಂಡ್ ಕಮಾಂಡೆಂಟ್ ಎಂ.ಜಿ.ನಾಗರಾಜು ಮುನ್ನಡೆಸಲಿದ್ದಾರೆ.</p>.<p>ಈಗಾಗಲೇ ತಾಲೀಮು ಆರಂಭವಾಗಿದ್ದು, ಸೋಮವಾರ ನಡೆಯಲಿರುವ ಮೆರವಣಿಗೆಯಲ್ಲಿ ಅವರು 30 ಕುದುರೆಗಳನ್ನು ಮುನ್ನಡೆಸಲಿದ್ದಾರೆ.</p>.<p>‘ಹಿಂದೆ ನಾನು ಸ್ವಾತಂತ್ರ್ಯೋತ್ಸವ ದಿನದ ಪರೇಡ್ನಲ್ಲಿ ಮುಂದಾಳತ್ವ ವಹಿಸಿದ್ದೆ. ಈಗ ದಸರೆಯಲ್ಲಿ ಅಶ್ವಾರೋಹಿ ನೇತೃತ್ವ ವಹಿಸಲು ಅವಕಾಶ ಲಭಿಸಿದೆ’ ಎಂದರು.</p>.<p>‘ಈ ಬಾರಿ ಕೆಲ ಕುದುರೆಗಳು ಮೊದಲ ಬಾರಿ ಪಾಲ್ಗೊಳ್ಳುತ್ತಿದ್ದು, ತರಬೇತಿ ನೀಡಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ತಾಲೀಮು ಆರಂಭವಾಗಿದೆ.</p>.<p>ಅಂಬಾರಿ ಕಟ್ಟುವ ಜಾಗದಿಂದ ಗಾಂಭೀರ್ಯವಾಗಿ ಹೆಜ್ಜೆ ಇಟ್ಟು ಬಂದ ಕ್ಯಾಪ್ಟನ್ ಅಭಿಮನ್ಯು ಆನೆಗೆ ಅರಮನೆ ಮುಂಭಾಗದಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಅಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸುವ ತಾಲೀಮು ನಡೆಸಿದರು.ಬಳಿಕ ಗೌರವ ವಂದನೆ ಸಲ್ಲಿಸಿದರು.</p>.<p>ವಿಕ್ರಂ ಹಾಗೂ ಗೋಪಿ ಆನೆಯನ್ನು ರಾಜವಂಶಸ್ಥರು ನಡೆಸುತ್ತಿರುವ ಪೂಜಾ ಕಾರ್ಯಕ್ರಮಕ್ಕೆ ಕರೆದೊಯ್ದ ಕಾರಣ ಕಾವೇರಿ, ವಿಜಯಾ ಹಾಗೂ ಅಭಿಮನ್ಯು ಮಾತ್ರ ಭಾಗವಹಿಸಿದ್ದವು. ಜೊತೆಗೆ ಕರ್ನಾಟಕ ವಾದ್ಯ ತಂಡ ಹಾಗೂ ಅಶ್ವಾರೋಹಿ ಪಡೆಇದ್ದವು.</p>.<p>ಈ ಬಾರಿ ದಸರಾ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಂಡಿದ್ದು, ಗಜಪಡೆ ಹಾಗೂ ಅಶ್ವಾರೋಹಿ ಪಡೆ ಅಭ್ಯಾಸ ನಡೆಸುತ್ತಿವೆ. ಇನ್ನೂ ಎರಡು ದಿನ ಬೆಳಿಗ್ಗೆ 8 ಗಂಟೆಗೆ ತಾಲೀಮು ಆರಂಭವಾಗಲಿದ್ದು, 30 ಕುದುರೆಗಳು ಹಾಗೂ 5 ಆನೆಗಳು ಪಾಲ್ಗೊಳ್ಳಲಿವೆ. ಮೈಸೂರು ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಕುಶಾಲತೋಪು ಸಿಡಿಸುವ ಅಂತಿಮ ಸುತ್ತಿನ ತಾಲೀಮು ಕೂಡ ನಡೆಯಲಿದೆ.</p>.<p>‘ಪ್ರತಿಬಾರಿ ಎರಡು ದಿನ ಮಾತ್ರ ತಾಲೀಮು ನಡೆಸುತ್ತಿದ್ದರು. ಈ ಬಾರಿ ಮೂರು ಬಾರಿ ನಡೆಸಲಾಗುತ್ತಿದೆ. ಶುಕ್ರವಾರ ನಡೆಯಲಿರುವ ಪುಷ್ಪಾರ್ಚನೆ ತಾಲೀಮಿನಲ್ಲಿ ಮೇಯರ್, ಪೊಲೀಸ್ ಕಮಿಷನರ್ ಕೂಡ ಪಾಲ್ಗೊಳ್ಳಲಿದ್ದಾರೆ’ ಎಂದು ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು ತಿಳಿಸಿದರು.</p>.<p>ಈಗಾಗಲೇ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲಾಗಿದೆ. ಅಲ್ಲದೇ, ಗೋಪಿಗೂ ಮೊದಲ ಬಾರಿ ಮರದ ಅಂಬಾರಿ ಹೊರಿಸಲಾಗಿದೆ.</p>.<p>ಮೊದಲ ದಿನ ಪುಷ್ಪಾರ್ಚನೆ ತಾಲೀ ಮಿನಲ್ಲಿ ಡಾ.ನಾಗರಾಜು, ಅರಮನೆ ಭದ್ರತಾ ಎಸಿಪಿ ಚಂದ್ರಶೇಖರ್, ಶೈಲೇಂದ್ರ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.</p>.<p class="Subhead"><strong>ಅರಮನೆಯಲ್ಲೂ ಪೂಜೆ</strong></p>.<p class="Subhead">ಶರನ್ನವರಾತ್ರಿ ಅಂಗವಾಗಿ ರಾಜವಂಶಸ್ಥರು ಅರಮನೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯ ಮುಂದುವರಿಸಿದ್ದಾರೆ.</p>.<p>ಗುರುವಾರ ಆರನೇ ದಿನದ ಖಾಸಗಿ ದರ್ಬಾರ್ ಕೊನೆಗೊಂಡಿದೆ. ಪಟ್ಟದಾನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಪೂಜೆಗೆಂದು ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಪಟ್ಟದ ಕುದುರೆ ಗಾಬರಿಗೊಂಡಿತು.</p>.<p><strong>ನಾಗರಾಜು ನೇತೃತ್ವ</strong></p>.<p>ದಸರಾ ಮೆರವಣಿಗೆಯಲ್ಲಿ ಈ ಬಾರಿ ಅಶ್ವಾರೋಹಿ ಪಡೆಯನ್ನು ಕೆಎಆರ್ಪಿ ಮೌಂಟೆಂಡ್ ಕಮಾಂಡೆಂಟ್ ಎಂ.ಜಿ.ನಾಗರಾಜು ಮುನ್ನಡೆಸಲಿದ್ದಾರೆ.</p>.<p>ಈಗಾಗಲೇ ತಾಲೀಮು ಆರಂಭವಾಗಿದ್ದು, ಸೋಮವಾರ ನಡೆಯಲಿರುವ ಮೆರವಣಿಗೆಯಲ್ಲಿ ಅವರು 30 ಕುದುರೆಗಳನ್ನು ಮುನ್ನಡೆಸಲಿದ್ದಾರೆ.</p>.<p>‘ಹಿಂದೆ ನಾನು ಸ್ವಾತಂತ್ರ್ಯೋತ್ಸವ ದಿನದ ಪರೇಡ್ನಲ್ಲಿ ಮುಂದಾಳತ್ವ ವಹಿಸಿದ್ದೆ. ಈಗ ದಸರೆಯಲ್ಲಿ ಅಶ್ವಾರೋಹಿ ನೇತೃತ್ವ ವಹಿಸಲು ಅವಕಾಶ ಲಭಿಸಿದೆ’ ಎಂದರು.</p>.<p>‘ಈ ಬಾರಿ ಕೆಲ ಕುದುರೆಗಳು ಮೊದಲ ಬಾರಿ ಪಾಲ್ಗೊಳ್ಳುತ್ತಿದ್ದು, ತರಬೇತಿ ನೀಡಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>