<p>ಮೈಸೂರು: ಕಳೆದುಕೊಂಡಿದ್ದ ವಾಹನ, ಆಭರಣ, ನಗದು ಮತ್ತೆ ಕೈಸೇರಿದ ಸಂತಸ ನಗರದ ವಾರಸುದಾರರಲ್ಲಿ ಮನೆಮಾಡಿತ್ತು. ಪ್ರಕರಣಗಳನ್ನು ಭೇದಿಸಿದ ಕರ್ತವ್ಯ ನಿಷ್ಠೆ ಮೆರೆದ ಪೊಲೀಸರಿಗೂ ಪ್ರಶಂಸೆ ವ್ಯಕ್ತವಾಯಿತು.</p>.<p>–ನಗರದ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಶನಿವಾರ ಕಂಡುಬಂದ ದೃಶ್ಯವಿದು. ಕಳುವಾಗಿದ್ದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳಲು ಆಗಮಿಸಿದ್ದವರು, ಪೊಲೀಸರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಲ್ಲದೇ ತಮ್ಮ ವಸ್ತುಗಳನ್ನು ನೋಡುತ್ತಿದ್ದಂತೆ ಭಾವುಕರಾದರು. ನಿಟ್ಟುಸಿರು ಬಿಟ್ಟರು.</p>.<p>ನಗರದ ಪೊಲೀಸ್ ಘಟಕವು ನಗರದಲ್ಲಿ 2022ನೇ ಸಾಲಿನಲ್ಲಿ 320 ಕಳವು ಪ್ರಕರಣಗಳನ್ನು ಭೇದಿಸಿದ್ದು, 4.6 ಕೆ.ಜಿ ಚಿನ್ನ ಸೇರಿದಂತೆ ₹ 3.55 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದುರುಗಿಸಿತು. ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಸಿಬ್ಬಂದಿಯನ್ನು ಶ್ಲಾಘಿಸಿದರು.</p>.<p>ನಂತರ ಮಾತನಾಡಿದ ಅವರು, ‘ಪ್ರಸಕ್ತ ವರ್ಷ 752 ಪ್ರಕರಣ ದಾಖಲಾಗಿದ್ದು, ₹ 6.34 ಕೋಟಿ ಮೌಲ್ಯದ ವಸ್ತು ಕಳವಾಗಿದ್ದವು. 320 ಪ್ರಕರಣಗಳಲ್ಲಿ 346 ಆರೋಪಿಗಳನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ರೌಡಿ ಶೀಟರ್ಗಳ ಮನೆ ಮೇಲೆ ಅನಿರೀಕ್ಷಿತ ದಾಳಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.</p>.<p>‘ನಗರವನ್ನು ಮಾದಕ ವಸ್ತು ಮುಕ್ತ ನಗರ ಮಾಡಲು ಕಾರ್ಯಾಚರಣೆ ನಿರಂತರ ನಡೆಸಲಾಗಿದೆ. ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಮೇಲೆ ನಿಗಾ ಇಡಲಾಗಿದೆ. 33 ಪ್ರಕರಣ ದಾಖಲಾಗಿದ್ದು, 61 ಆರೋಪಿಗಳನ್ನು ಬಂಧಿಸಲಾಗಿದೆ. ₹22.30 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು. </p>.<p>‘ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗಿದೆ. ನಿಯಮ ಉಲ್ಲಂಘಿಸಿದ 593 ಚಾಲನಾ ಪರವಾನಗಿ ರದ್ದಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.</p>.<p>‘ಸೈಬರ್ ಅಪರಾಧ ಪ್ರಕರಣಗಳ ಭೇದಿಸಿದರುವ ನಜರಾಬಾದ್ನ ಸೆನ್ ಠಾಣೆ ಪೊಲೀಸರು ₹ 1 ಕೋಟಿ ನಗದನ್ನು ವಾರಸುದಾರರಿಗೆ ವಾಪಸ್ ಮಾಡಿದ್ದಾರೆ. ಹಣ ಕಳೆದುಕೊಂಡಾಗ ಪೊಲೀಸ್ ಕಂಟ್ರೋಲ್ ರೂಂ 1930, 112ಗೆ ಕರೆ ಮಾಡಬೇಕು’ ಎಂದು ತಿಳಿಸಿದರು.</p>.<p>ಧೈರ್ಯಕ್ಕೆ ಮೆಚ್ಚುಗೆ: ವಿದ್ಯಾರಣ್ಯಪುರಂನಲ್ಲಿರುವ ಎಂಎಸ್ಸಿ ವಿದ್ಯಾರ್ಥಿನಿ ಸೌಮ್ಯಾ ಐವರು ಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಾಹಸವನ್ನು ಪ್ರಶಂಸಿಸಲಾಯಿತು. ಜ.9ರಂದು ಸರಗಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲು ನೆರವಾಗಿದ್ದರು. </p>.<p>ಡಿಸಿಪಿಗಳಾದ ಎಂ.ಮುತ್ತುರಾಜು, ಎಂ.ಎಸ್.ಗೀತಾ, ಶಿವರಾಜು, ಎಸಿಪಿಗಳಾದ ಶಶಿಧರ, ಗಂಗಾಧರಸ್ವಾಮಿ, ಪರಶುರಾಮಪ್ಪ, ಶಿವಶಂಕರ್, ಅಶ್ವತ್ಥನಾರಾಯಣ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಕಳೆದುಕೊಂಡಿದ್ದ ವಾಹನ, ಆಭರಣ, ನಗದು ಮತ್ತೆ ಕೈಸೇರಿದ ಸಂತಸ ನಗರದ ವಾರಸುದಾರರಲ್ಲಿ ಮನೆಮಾಡಿತ್ತು. ಪ್ರಕರಣಗಳನ್ನು ಭೇದಿಸಿದ ಕರ್ತವ್ಯ ನಿಷ್ಠೆ ಮೆರೆದ ಪೊಲೀಸರಿಗೂ ಪ್ರಶಂಸೆ ವ್ಯಕ್ತವಾಯಿತು.</p>.<p>–ನಗರದ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಶನಿವಾರ ಕಂಡುಬಂದ ದೃಶ್ಯವಿದು. ಕಳುವಾಗಿದ್ದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳಲು ಆಗಮಿಸಿದ್ದವರು, ಪೊಲೀಸರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಲ್ಲದೇ ತಮ್ಮ ವಸ್ತುಗಳನ್ನು ನೋಡುತ್ತಿದ್ದಂತೆ ಭಾವುಕರಾದರು. ನಿಟ್ಟುಸಿರು ಬಿಟ್ಟರು.</p>.<p>ನಗರದ ಪೊಲೀಸ್ ಘಟಕವು ನಗರದಲ್ಲಿ 2022ನೇ ಸಾಲಿನಲ್ಲಿ 320 ಕಳವು ಪ್ರಕರಣಗಳನ್ನು ಭೇದಿಸಿದ್ದು, 4.6 ಕೆ.ಜಿ ಚಿನ್ನ ಸೇರಿದಂತೆ ₹ 3.55 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದುರುಗಿಸಿತು. ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಸಿಬ್ಬಂದಿಯನ್ನು ಶ್ಲಾಘಿಸಿದರು.</p>.<p>ನಂತರ ಮಾತನಾಡಿದ ಅವರು, ‘ಪ್ರಸಕ್ತ ವರ್ಷ 752 ಪ್ರಕರಣ ದಾಖಲಾಗಿದ್ದು, ₹ 6.34 ಕೋಟಿ ಮೌಲ್ಯದ ವಸ್ತು ಕಳವಾಗಿದ್ದವು. 320 ಪ್ರಕರಣಗಳಲ್ಲಿ 346 ಆರೋಪಿಗಳನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ರೌಡಿ ಶೀಟರ್ಗಳ ಮನೆ ಮೇಲೆ ಅನಿರೀಕ್ಷಿತ ದಾಳಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.</p>.<p>‘ನಗರವನ್ನು ಮಾದಕ ವಸ್ತು ಮುಕ್ತ ನಗರ ಮಾಡಲು ಕಾರ್ಯಾಚರಣೆ ನಿರಂತರ ನಡೆಸಲಾಗಿದೆ. ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಮೇಲೆ ನಿಗಾ ಇಡಲಾಗಿದೆ. 33 ಪ್ರಕರಣ ದಾಖಲಾಗಿದ್ದು, 61 ಆರೋಪಿಗಳನ್ನು ಬಂಧಿಸಲಾಗಿದೆ. ₹22.30 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು. </p>.<p>‘ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗಿದೆ. ನಿಯಮ ಉಲ್ಲಂಘಿಸಿದ 593 ಚಾಲನಾ ಪರವಾನಗಿ ರದ್ದಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.</p>.<p>‘ಸೈಬರ್ ಅಪರಾಧ ಪ್ರಕರಣಗಳ ಭೇದಿಸಿದರುವ ನಜರಾಬಾದ್ನ ಸೆನ್ ಠಾಣೆ ಪೊಲೀಸರು ₹ 1 ಕೋಟಿ ನಗದನ್ನು ವಾರಸುದಾರರಿಗೆ ವಾಪಸ್ ಮಾಡಿದ್ದಾರೆ. ಹಣ ಕಳೆದುಕೊಂಡಾಗ ಪೊಲೀಸ್ ಕಂಟ್ರೋಲ್ ರೂಂ 1930, 112ಗೆ ಕರೆ ಮಾಡಬೇಕು’ ಎಂದು ತಿಳಿಸಿದರು.</p>.<p>ಧೈರ್ಯಕ್ಕೆ ಮೆಚ್ಚುಗೆ: ವಿದ್ಯಾರಣ್ಯಪುರಂನಲ್ಲಿರುವ ಎಂಎಸ್ಸಿ ವಿದ್ಯಾರ್ಥಿನಿ ಸೌಮ್ಯಾ ಐವರು ಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಾಹಸವನ್ನು ಪ್ರಶಂಸಿಸಲಾಯಿತು. ಜ.9ರಂದು ಸರಗಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲು ನೆರವಾಗಿದ್ದರು. </p>.<p>ಡಿಸಿಪಿಗಳಾದ ಎಂ.ಮುತ್ತುರಾಜು, ಎಂ.ಎಸ್.ಗೀತಾ, ಶಿವರಾಜು, ಎಸಿಪಿಗಳಾದ ಶಶಿಧರ, ಗಂಗಾಧರಸ್ವಾಮಿ, ಪರಶುರಾಮಪ್ಪ, ಶಿವಶಂಕರ್, ಅಶ್ವತ್ಥನಾರಾಯಣ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>