‘ಕಾಂಗ್ರೆಸ್ ಮುಖಂಡ ಕೆ.ಮಾರುತಿ ಅವರ ಮಗ ಪುನೀತ್ ಹಾಗೂ ಅವನ ಸಹಚರರಾದ ಪ್ರಕಾಶ, ಸುರೇಶ್, ಮಹೇಶ್, ಸುದೀಪ್, ದರ್ಶನ್, ಚೇತನ್ ಸೇರಿದಂತೆ ಏಳು ಜನರ ಗುಂಪು ಬಿಜೆಪಿ ಬೆಂಬಲಿಗರಾದ ಸಿದ್ದೇಗೌಡ, ಬಸವರಾಜು, ಗುರುಮಲ್ಲೇಶ್, ಕೆ.ಸಿ.ಬಸವರಾಜು ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡವರನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಯ ಕುರಿತಂತೆ ಪೊಲೀಸರಿಗೆ ದೂರು ನೀಡಿದರೂ, ಆರೋಪಿಗಳ ವಿರುದ್ದ ಕ್ರಮವಹಿಸಿಲ್ಲ’ ಎಂದು ದೂರಿದರು.