<p><strong>ಮೈಸೂರು:</strong> ತಂಬಾಕು ಮಂಡಳಿಯು ಸೋಮವಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲಿಫ್ಟ್ ಕೆಟ್ಟು ನಿಂತ ಕಾರಣಕ್ಕೆ ಮೆಟ್ಟಿಲು ಏರುತ್ತಲೇ ಎರಡನೇ ಮಹಡಿಯಲ್ಲಿದ್ದ ಸಭಾಂಗಣ ತಲುಪಿದರು.</p>.<p>ಅತ್ಯಂತ ಕಿರಿದಾದ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಹೀಗಾಗಿ ಸಚಿವರು–ಶಾಸಕರು, ಅವರೊಂದಿಗಿನ ಹಿಂಬಾಲಕರು ಬರುತ್ತಲೇ ಕೊಠಡಿ ಭರ್ತಿಯಾಯಿತು. ಭದ್ರತಾ ಸಿಬ್ಬಂದಿಗೂ ಜಾಗ ಇಲ್ಲದಾಯಿತು.</p>.<p>ಯದುವೀರ್ ಸಿಟ್ಟು: ‘ರೈತರಿಗೆ ಅನ್ಯಾಯವಾಗಲು ಕೇಂದ್ರ ಸರ್ಕಾರವೂ ಕಾರಣ. ಅವರು ರೈತಪರವಾಗಿ ನಿಲ್ಲುತ್ತಿಲ್ಲ. ತೆರಿಗೆ ಹೊರೆ ಹೆಚ್ಚಿದ್ದು, ಅದನ್ನು ಕಾರ್ಖಾನೆಗಳು ಬೆಳೆಗಾರರ ಮೇಲೆ ಹೇರಹೊರಟಿವೆ’ ಎಂದು ಸಚಿವ ಕೆ. ವೆಂಕಟೇಶ್ ದೂರಿದರು.</p>.<p>ಇದಕ್ಕೆ ಸಿಟ್ಟಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ‘ಇಲ್ಲಿ ರಾಜ್ಯ– ಕೇಂದ್ರ ಎಂದು ದೂರುವುದು ಸರಿಯಲ್ಲ. ಪ್ರತಿ ವರ್ಷ ಕೇಂದ್ರವು ನಡೆಸುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳು ಪಾಲ್ಗೊಳ್ಳಬೇಕು. ಅಲ್ಲಿ ತಮ್ಮ ವಾದ ಮಂಡಿಸಬೇಕು’ಎಂದರು.</p>.<p>‘ತಂಬಾಕಿಗೆ ಶೇ 72ರವರೆಗೆ ತೆರಿಗೆ ವಿಧಿಸಲಾಗುತ್ತಿದ್ದು, ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು’ ಎಂದು ಯದುವೀರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ತಂಬಾಕು ಮಂಡಳಿಯು ಸೋಮವಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲಿಫ್ಟ್ ಕೆಟ್ಟು ನಿಂತ ಕಾರಣಕ್ಕೆ ಮೆಟ್ಟಿಲು ಏರುತ್ತಲೇ ಎರಡನೇ ಮಹಡಿಯಲ್ಲಿದ್ದ ಸಭಾಂಗಣ ತಲುಪಿದರು.</p>.<p>ಅತ್ಯಂತ ಕಿರಿದಾದ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಹೀಗಾಗಿ ಸಚಿವರು–ಶಾಸಕರು, ಅವರೊಂದಿಗಿನ ಹಿಂಬಾಲಕರು ಬರುತ್ತಲೇ ಕೊಠಡಿ ಭರ್ತಿಯಾಯಿತು. ಭದ್ರತಾ ಸಿಬ್ಬಂದಿಗೂ ಜಾಗ ಇಲ್ಲದಾಯಿತು.</p>.<p>ಯದುವೀರ್ ಸಿಟ್ಟು: ‘ರೈತರಿಗೆ ಅನ್ಯಾಯವಾಗಲು ಕೇಂದ್ರ ಸರ್ಕಾರವೂ ಕಾರಣ. ಅವರು ರೈತಪರವಾಗಿ ನಿಲ್ಲುತ್ತಿಲ್ಲ. ತೆರಿಗೆ ಹೊರೆ ಹೆಚ್ಚಿದ್ದು, ಅದನ್ನು ಕಾರ್ಖಾನೆಗಳು ಬೆಳೆಗಾರರ ಮೇಲೆ ಹೇರಹೊರಟಿವೆ’ ಎಂದು ಸಚಿವ ಕೆ. ವೆಂಕಟೇಶ್ ದೂರಿದರು.</p>.<p>ಇದಕ್ಕೆ ಸಿಟ್ಟಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ‘ಇಲ್ಲಿ ರಾಜ್ಯ– ಕೇಂದ್ರ ಎಂದು ದೂರುವುದು ಸರಿಯಲ್ಲ. ಪ್ರತಿ ವರ್ಷ ಕೇಂದ್ರವು ನಡೆಸುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳು ಪಾಲ್ಗೊಳ್ಳಬೇಕು. ಅಲ್ಲಿ ತಮ್ಮ ವಾದ ಮಂಡಿಸಬೇಕು’ಎಂದರು.</p>.<p>‘ತಂಬಾಕಿಗೆ ಶೇ 72ರವರೆಗೆ ತೆರಿಗೆ ವಿಧಿಸಲಾಗುತ್ತಿದ್ದು, ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು’ ಎಂದು ಯದುವೀರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>