ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

488 ರೂಪಾಯಿಗೆ ಜೋಡಿ ಕೊಲೆ: ಆರೋಪಿ ಬಂಧನ

Published 24 ಜೂನ್ 2023, 6:55 IST
Last Updated 24 ಜೂನ್ 2023, 6:55 IST
ಅಕ್ಷರ ಗಾತ್ರ

ಹುಣಸೂರು: ಇಲ್ಲಿನ ಎಸ್.ಎಸ್. ಸಾಮಿಲ್ ನಲ್ಲಿ ಜೂ. 22ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಅಭಿಷೇಕ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆದಿದೆ.

ಹುಣಸೂರಿನ ಸರಸ್ವತಿಪುರಂ ಬಡಾವಣೆಯ ನಿವಾಸಿಯಾದ ಅಭಿಷೇಕ್ ಮತ್ತು ಸಹಚರರು ಸಾಮಿಲ್ ನ ಕಾವಲುಗಾರ ವೆಂಕಟೇಶ (65) ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂ (60) ಎಂಬುವರನ್ನು ಹಣಕ್ಕಾಗಿ ಹತ್ಯೆ ಮಾಡಿದ್ದರು. ಈ ವೇಳೆ ಹಂತಕರಿಗೆ ಕೇವಲ 488 ರೂಪಾಯಿ ಹಣ ಮಾತ್ರ ಸಿಕ್ಕಿತ್ತು.

ಈ ಹಣದೊಂದಿಗೆ ಆರೋಪಿಯನ್ನು ಹುಣಸೂರು ಸರ್ಕಲ್ ಇನ್ ಸ್ಪೆಕ್ಟರ್ ದೇವೇಂದ್ರ ನೇತೃತ್ವದ ತಂಡವು ಹತ್ಯೆ ನಡೆದ 36 ಗಂಟೆಗಳ ಒಳಗೆ ಬಂಧಿಸಿದೆ.

ಆರೋಪಿ ಅಭಿಷೇಕ್ ಈ ಹಿಂದೆ ಹುಣಸೂರು ಠಾಣೆ ವ್ಯಾಪ್ತಿಯಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT