ಇದಾದ ಬಳಿಕ ಮೈಸೂರಿನ ತಹಶೀಲ್ದಾರ್ ಆರ್ಟಿಸಿ ಸಲ್ಲಿಸಿದ್ದು, ಸರ್ವೆ ನಂ.41ರಲ್ಲಿ 125 ಎಕರೆ ವಿಸ್ತೀರ್ಣವನ್ನು ‘ಅರಮನೆ ಕಾವಲು ಸ್ವಾಧೀನ’ದಲ್ಲಿ ಇರುತ್ತದೆ ಎಂದು ತೋರಿಸಿದ್ದಾರೆ. ಆದರೆ, ಇದು ಮಹಾರಾಜರ ಖಾಸಗಿ ಸ್ವತ್ತು ಎಂದು ಹೈಕೋರ್ಟ್ ತೀರ್ಪಿನ ಅನ್ವಯ, ಅರಮನೆ ಕಾವಲು ತೆಗೆದುಹಾಕುವಂತೆ ಪ್ರಮೋದಾ ದೇವಿ ಅವರು ಮನವಿ ಸಲ್ಲಿಸಿದ್ದರು. 2022ರ ಜೂನ್ 13ರಂದು ಈ ವಿಚಾರವಾಗಿ ಅರ್ಜಿ ಸಲ್ಲಿಸಿರುವ ಅವರು, ತಮ್ಮ ಹೆಸರು, ಸರ್ವೆ, ಪೋಡಿ ಹಾಗೂ ದುರಸ್ತಿ ಮಾಡಲು ಕೋರಿರುತ್ತಾರೆ. ಈ ಮಧ್ಯದಲ್ಲಿ ಈ ಸ್ವತ್ತಿನಲ್ಲಿ 55 ಗುಂಟೆ ಜಾಗದಲ್ಲಿ ಎನ್.ಸೂರ್ಯ ನಾರಾಯಣ್ ಮತ್ತು ಸಹಚರರು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ ವೇಳೆ, ಬೆದರಿಕೆ ಒಡ್ಡಿದ್ದು, ಕೆಲಸ ಮುಂದುವರಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.