ಜಲಾಶಯದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಕೇರಳ ಭಾಗದ ಪ್ರಮುಖ ಅಣೆಕಟ್ಟೆಗಳಾದ ಬಾಣಸುರ ಮತ್ತು ಇತರೆ ಅಣೆಕಟ್ಟೆಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಣೆಕಟ್ಟೆಗಳ ಭರ್ತಿಯಾಗುವ ಮುನ್ಸೂಚನೆ ಬಗ್ಗೆ ಹಾಗೂ ಹೆಚ್ಚಿನ ಮಳೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ದಿಢೀರ್ ಹೆಚ್ಚು ಮಳೆಯಾದರೆ ಕಬಿನಿ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆ ಬರುತ್ತದೆ ಎಂದು ಜಲಾಶಯದ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಜನಾರ್ದನ್ ಪ್ರಜಾವಾಣಿಗೆ ತಿಳಿಸಿದ್ದಾರೆ.