<p><strong>ಮೈಸೂರು:</strong> ‘ಈಶ್ವರಪ್ಪಗೆ ಸಂಸ್ಕೃತಿ. ಸಂಸ್ಕಾರ ಇಲ್ಲ. ಆದ್ದರಿಂದಲೇ ಮಾತನಾಡುವಾಗ ಹೊಲಸು ಪದಗಳನ್ನು ಬಳಸುವರು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.</p>.<p>‘ಮೊದಲಿನಿಂದಲೂ ಅದೇ ರೀತಿಯ ಭಾಷೆ ಬಳಸುತ್ತಾ ಬಂದಿದ್ದಾರೆ. ಅವರು ಬಂದಿರುವ ದಾರಿಯೇ ಅಂತಹದ್ದು. ಒಳ್ಳೆಯ ಮಾತುಗಳನ್ನು ನಿರೀಕ್ಷಿಸುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಟೀಕೆ, ಹೊಗಳಿಕೆ, ತೆಗಳಿಕೆ ಸಾಮಾನ್ಯ. ಅಧಿಕಾರದಲ್ಲಿ ಇರುವವರು ಅದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ’ ಎಂದು ಮಂಗಳವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/india-news/karnataka-politics-ks-eshwarappa-bk-hariprasad-congress-bjp-856487.html" target="_blank">ಈಶ್ವರಪ್ಪ ಹೆಸರನ್ನು ‘ಮೇರಾ ನಾಮ್ ಜೋಕರ್’ ಎಂದು ಬದಲಾಯಿಸಿಕೊಳ್ಳಲಿ: ಹರಿಪ್ರಸಾದ್</a></strong></p>.<p>‘ಕೆಟ್ಟ ಪದಗಳನ್ನು ಯಾರು ಬೇಕಾದರೂ ಬಳಸಬಹುದು. ಆದರೆ ಸಭ್ಯ ವ್ಯಕ್ತಿಗಳು ಬಳಸಲ್ಲ. ಸಂಸ್ಕೃತಿ ಇಲ್ಲದವರು ಮಾತ್ರ ಬಳಸುವರು. ಮಂತ್ರಿಯಾಗಿದ್ದೇನೆ ಎಂಬ ಜವಾಬ್ದಾರಿಯೂ ಇಲ್ಲದೆ, ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.</p>.<p><strong>ಅವನ ಸರ್ಟಿಫಿಕೇಟ್ ಬೇಕಾ?: </strong>‘ಸಿದ್ದರಾಮಯ್ಯ ಕಾಂಗ್ರೆಸ್ನ ಇಲಿ’ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಇಲಿಯೋ, ಹುಲಿನೋ ಅಥವಾ ಮನುಷ್ಯನೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಅವನ್ಯಾವನ್ರೀ ಹೇಳೋಕೆ. ಅವನ ಸರ್ಟಿಫಿಕೇಟ್ ಬೇಕಾ’ ಎಂದು ತಿರುಗೇಟು ನೀಡಿದರು.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/indira-canteen-name-change-in-karnataka-politics-congress-bjp-856492.html" target="_blank">ರಸ್ತೆ, ಸೇತುವೆಗಳಿಗಿರುವ ಬಿಜೆಪಿ ನಾಯಕರ ಹೆಸರು ಬದಲಿಸಬೇಕಾಗುತ್ತದೆ: ಕಾಂಗ್ರೆಸ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಈಶ್ವರಪ್ಪಗೆ ಸಂಸ್ಕೃತಿ. ಸಂಸ್ಕಾರ ಇಲ್ಲ. ಆದ್ದರಿಂದಲೇ ಮಾತನಾಡುವಾಗ ಹೊಲಸು ಪದಗಳನ್ನು ಬಳಸುವರು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.</p>.<p>‘ಮೊದಲಿನಿಂದಲೂ ಅದೇ ರೀತಿಯ ಭಾಷೆ ಬಳಸುತ್ತಾ ಬಂದಿದ್ದಾರೆ. ಅವರು ಬಂದಿರುವ ದಾರಿಯೇ ಅಂತಹದ್ದು. ಒಳ್ಳೆಯ ಮಾತುಗಳನ್ನು ನಿರೀಕ್ಷಿಸುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಟೀಕೆ, ಹೊಗಳಿಕೆ, ತೆಗಳಿಕೆ ಸಾಮಾನ್ಯ. ಅಧಿಕಾರದಲ್ಲಿ ಇರುವವರು ಅದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ’ ಎಂದು ಮಂಗಳವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/india-news/karnataka-politics-ks-eshwarappa-bk-hariprasad-congress-bjp-856487.html" target="_blank">ಈಶ್ವರಪ್ಪ ಹೆಸರನ್ನು ‘ಮೇರಾ ನಾಮ್ ಜೋಕರ್’ ಎಂದು ಬದಲಾಯಿಸಿಕೊಳ್ಳಲಿ: ಹರಿಪ್ರಸಾದ್</a></strong></p>.<p>‘ಕೆಟ್ಟ ಪದಗಳನ್ನು ಯಾರು ಬೇಕಾದರೂ ಬಳಸಬಹುದು. ಆದರೆ ಸಭ್ಯ ವ್ಯಕ್ತಿಗಳು ಬಳಸಲ್ಲ. ಸಂಸ್ಕೃತಿ ಇಲ್ಲದವರು ಮಾತ್ರ ಬಳಸುವರು. ಮಂತ್ರಿಯಾಗಿದ್ದೇನೆ ಎಂಬ ಜವಾಬ್ದಾರಿಯೂ ಇಲ್ಲದೆ, ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.</p>.<p><strong>ಅವನ ಸರ್ಟಿಫಿಕೇಟ್ ಬೇಕಾ?: </strong>‘ಸಿದ್ದರಾಮಯ್ಯ ಕಾಂಗ್ರೆಸ್ನ ಇಲಿ’ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಇಲಿಯೋ, ಹುಲಿನೋ ಅಥವಾ ಮನುಷ್ಯನೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಅವನ್ಯಾವನ್ರೀ ಹೇಳೋಕೆ. ಅವನ ಸರ್ಟಿಫಿಕೇಟ್ ಬೇಕಾ’ ಎಂದು ತಿರುಗೇಟು ನೀಡಿದರು.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/indira-canteen-name-change-in-karnataka-politics-congress-bjp-856492.html" target="_blank">ರಸ್ತೆ, ಸೇತುವೆಗಳಿಗಿರುವ ಬಿಜೆಪಿ ನಾಯಕರ ಹೆಸರು ಬದಲಿಸಬೇಕಾಗುತ್ತದೆ: ಕಾಂಗ್ರೆಸ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>