ಕಲಾವಿದರಾದ ವಿಜಯಪುರದ ವಿಜಯ ಸಿಂಧೂರ, ಮಂಗಳೂರಿನ ಕಂದನ್ಜಿ, ಮೈಸೂರಿನ ರಘುಪತಿ ಭಟ್ಟ ಅವರಿಗೆ ತಲಾ ₹ 2 ಲಕ್ಷ ಮೊತ್ತದ ಗೌರವ ಫೆಲೋಶಿಪ್ ಪ್ರದಾನ ಮಾಡಲಾಯಿತು. ಬೆಂಗಳೂರಿನ ಡಿಂಪಲ್ ಬಿ ಶಹ, ಮಂಜುನಾಥ ವಿ ಕಲ್ಲೇದೇವರು, ಮೈಸೂರಿನ ಕೆ.ಸುರೇಶ್, ವಿಜಯಪುರದ ನಿಂಗನಗೌಡ ಸಿ.ಪಾಟೀಲ, ಕಲಬುರ್ಗಿಯ ಜಗನ್ನಾಥ ಬೆಲ್ಲದ ಅವರಿಗೆ ಶಿಷ್ಯವೇತನ ವಿತರಿಸಲಾಯಿತು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ ಇದ್ದರು.