ಶ್ರವಣ ಸಾಧನಗಳ ವಿತರಣೆ ಶಸ್ತ್ರಚಿಕಿತ್ಸೆ ಕಿಟ್ ನೀಡಿಕೆ ಶ್ರವಣದೋಷ ಮುಕ್ತ ಕರ್ನಾಟಕದ ಗುರಿ
‘ನೆರವಾದ ಆಯಿಷ್’
‘ಐದು ವರ್ಷದ ಹಿಂದೆ ಧ್ವನಿ ಕಳೆದುಕೊಳ್ಳುವ ಸಂದರ್ಭ ಎದುರಾದಾಗ ಆಯಿಷ್ ನನಗೆ ನೆರವಾಗಿ ಚಿಕಿತ್ಸೆ ಆರೈಕೆ ನೀಡಿದೆ’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು. ‘ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ಮೂಲಕ ಸರ್ಕಾರವು ಶ್ರವಣದೋಷವುಳ್ಳ ಮಕ್ಕಳ ಪೋಷಕರಿಗೆ ಸಹಾಯಹಸ್ತ ಚಾಚಿದೆ. ಯೋಜನೆ ಪ್ರಯೋಜನ ಪಡೆಯಬೇಕು’ ಎಂದು ಕೋರಿದರು. ‘ಹೊಸ ಆಸ್ಪತ್ರೆಗಳನ್ನು ಕಟ್ಟಿಸುವುದಕ್ಕಿಂತ ಹಳೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವಲ್ಲಿ ಆರೋಗ್ಯ ಇಲಾಖೆ ಕ್ರಮವಹಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ’ ಎಂದೂ ಶ್ಲಾಘಿಸಿದರು.