<p>ತಿ.ನರಸೀಪುರ (ಮೈಸೂರು ಜಿಲ್ಲೆ): ತಾಲ್ಲೂಕಿನ ಸೋಸಲೆ ಹೋಬಳಿಯ ಹೊರಳಹಳ್ಳಿ ಗ್ರಾಮ ಮತ್ತು ನೆರಗ್ಯಾತನಹಳ್ಳಿ ನಡುವಿನ ತೋಟದ ಸಮೀಪ ಅರಣ್ಯ ಇಲಾಖೆಯಿಂದ ಇಟ್ಟಿದ್ದ ಬೋನಿಗೆ (ತುಮಕೂರು ಕೇಜ್) ಚಿರತೆ ಗುರುವಾರ ಬಿದ್ದಿದೆ.</p>.<p>ಚಿರತೆ ಸೆರೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ಬಂದಿದ್ದರು. ಇದರಿಂದ ತೋಟದ ಬಳಿ ಜನಜಂಗುಳಿ ಕಂಡುಬಂತು. ಚಿರತೆಯನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಿದಾಗ ಗ್ರಾಮಸ್ಥರು ತಡೆದರು. ಆ ಪ್ರಾಣಿಯನ್ನು ಸ್ಥಳದಲ್ಲೇ ಕೊಲ್ಲುವಂತೆ ಪಟ್ಟು ಹಿಡಿದರು. ಚಿರತೆ ಇದ್ದ ವಾಹನವನ್ನು ಸುತ್ತುವರಿದು ಪ್ರತಿಭಟಿಸಿದರು. ಕೆಲವರು ವಾಹನಕ್ಕೆ ಅಡ್ಡಲಾಗಿ ಮಲಗಿ ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು–ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.</p>.<p><strong>ಮನವೊಲಿಕೆಗೆ ಯತ್ನ:</strong></p>.<p>‘ಬೋನಿಗೆ ಬಿದ್ದಿರುವ ಚಿರತೆಯನ್ನು ಕೊಲ್ಲಲು ನಿಯಮದಲ್ಲಿ ಅವಕಾಶವಿಲ್ಲ. ಅದನ್ನು ಬೇರೆಡೆಗೆ ಸಾಗಿಸಲು ಅವಕಾಶ ಕೊಡಿ’ ಎಂದು ಉಪ ವಿಭಾಗಾಧಿಕಾರಿ ಕಮಲಾ ಬಾಯಿ, ಎಎಸ್ಪಿ ಡಾ.ನಂದಿನಿ ಜನರನ್ನು ಕೋರಿದರು. ‘ಬೇಕಿದ್ದರೆ ಚಿರತೆಯನ್ನು ಸಾಗಿಸುವ ಸ್ಥಳದವರೆಗೆ ನೀವೂ ಬನ್ನಿ’ ಎಂದೂ ಅಧಿಕಾರಿಗಳು ಆಹ್ವಾನ ನೀಡಿದರು.</p>.<p>‘ಪರಿಸ್ಥಿತಿಯನ್ನು ಅರಿತು ಚಿರತೆ ಸಾಗಣೆಗೆ ಅನುವು ಮಾಡಿಕೊಡಿ’ ಎಂಬ ಅಧಿಕಾರಿಗಳ ಕೋರಿಕೆಗೆ ಜನರು ಸಮ್ಮತಿ ಸೂಚಿಸಿದರು. ನಂತರ ಚಿರತೆಯನ್ನು ಇಲ್ಲಿಂದ ವಾಹನದಲ್ಲಿ ಸಾಗಿಸಲಾಯಿತು. ಕಾರ್ಯಪಡೆ ಅಧಿಕಾರಿಗಳು ಮತ್ತೊಂದು ಬೋನಿಗೆ ಸ್ಥಳಾಂತರಿಸಿ ವಾಹನದಲ್ಲಿ ಸಾಗಿಸಿದರು. ಸೆರೆಯಾಗಿರುವ ಚಿರತೆಯು 6 ವರ್ಷ ವಯಸ್ಸಿನ ಗಂಡು ಚಿರತೆ ಎಂದು ತಿಳಿದುಬಂದಿದೆ. ಅದನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.</p>.<p>ಡಿಸಿಎಫ್ ಬಸವರಾಜು, ಮಹೇಶ್ ಕುಮಾರ್, ಎಸಿಎಫ್ ಲಕ್ಷೀಕಾಂತ್, ಡಿವೈಎಸ್ಪಿ ಗೋವಿಂದರಾಜು, ಸಿಪಿಐ ಆನಂದ್, ಲೋಲಾಕ್ಷಿ, ಪಿಎಸ್ಐಗಳಾದ ತಿರುಮಲ್ಲೇಶ್, ಪಚ್ಚೇಗೌಡ, ವಲಯ ಅರಣ್ಯಾಧಿಕಾರಿ ಸೈಯದ್ ನದೀಮ್, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಇದ್ದರು.</p>.<p>ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ಬಾಲಕನನ್ನು ಕೊಂದ ಘಟನೆ ನಡೆದಿತ್ತು. ಇದರಿಂದ, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈಗ ಸೆರೆ ಸಿಕ್ಕಿರುವುದು ಬಾಲಕನನ್ನು ಕೊಂದ ಚಿರತೆಯೇ ಎನ್ನುವುದು ಖಚಿತವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿ.ನರಸೀಪುರ (ಮೈಸೂರು ಜಿಲ್ಲೆ): ತಾಲ್ಲೂಕಿನ ಸೋಸಲೆ ಹೋಬಳಿಯ ಹೊರಳಹಳ್ಳಿ ಗ್ರಾಮ ಮತ್ತು ನೆರಗ್ಯಾತನಹಳ್ಳಿ ನಡುವಿನ ತೋಟದ ಸಮೀಪ ಅರಣ್ಯ ಇಲಾಖೆಯಿಂದ ಇಟ್ಟಿದ್ದ ಬೋನಿಗೆ (ತುಮಕೂರು ಕೇಜ್) ಚಿರತೆ ಗುರುವಾರ ಬಿದ್ದಿದೆ.</p>.<p>ಚಿರತೆ ಸೆರೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ಬಂದಿದ್ದರು. ಇದರಿಂದ ತೋಟದ ಬಳಿ ಜನಜಂಗುಳಿ ಕಂಡುಬಂತು. ಚಿರತೆಯನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಿದಾಗ ಗ್ರಾಮಸ್ಥರು ತಡೆದರು. ಆ ಪ್ರಾಣಿಯನ್ನು ಸ್ಥಳದಲ್ಲೇ ಕೊಲ್ಲುವಂತೆ ಪಟ್ಟು ಹಿಡಿದರು. ಚಿರತೆ ಇದ್ದ ವಾಹನವನ್ನು ಸುತ್ತುವರಿದು ಪ್ರತಿಭಟಿಸಿದರು. ಕೆಲವರು ವಾಹನಕ್ಕೆ ಅಡ್ಡಲಾಗಿ ಮಲಗಿ ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು–ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.</p>.<p><strong>ಮನವೊಲಿಕೆಗೆ ಯತ್ನ:</strong></p>.<p>‘ಬೋನಿಗೆ ಬಿದ್ದಿರುವ ಚಿರತೆಯನ್ನು ಕೊಲ್ಲಲು ನಿಯಮದಲ್ಲಿ ಅವಕಾಶವಿಲ್ಲ. ಅದನ್ನು ಬೇರೆಡೆಗೆ ಸಾಗಿಸಲು ಅವಕಾಶ ಕೊಡಿ’ ಎಂದು ಉಪ ವಿಭಾಗಾಧಿಕಾರಿ ಕಮಲಾ ಬಾಯಿ, ಎಎಸ್ಪಿ ಡಾ.ನಂದಿನಿ ಜನರನ್ನು ಕೋರಿದರು. ‘ಬೇಕಿದ್ದರೆ ಚಿರತೆಯನ್ನು ಸಾಗಿಸುವ ಸ್ಥಳದವರೆಗೆ ನೀವೂ ಬನ್ನಿ’ ಎಂದೂ ಅಧಿಕಾರಿಗಳು ಆಹ್ವಾನ ನೀಡಿದರು.</p>.<p>‘ಪರಿಸ್ಥಿತಿಯನ್ನು ಅರಿತು ಚಿರತೆ ಸಾಗಣೆಗೆ ಅನುವು ಮಾಡಿಕೊಡಿ’ ಎಂಬ ಅಧಿಕಾರಿಗಳ ಕೋರಿಕೆಗೆ ಜನರು ಸಮ್ಮತಿ ಸೂಚಿಸಿದರು. ನಂತರ ಚಿರತೆಯನ್ನು ಇಲ್ಲಿಂದ ವಾಹನದಲ್ಲಿ ಸಾಗಿಸಲಾಯಿತು. ಕಾರ್ಯಪಡೆ ಅಧಿಕಾರಿಗಳು ಮತ್ತೊಂದು ಬೋನಿಗೆ ಸ್ಥಳಾಂತರಿಸಿ ವಾಹನದಲ್ಲಿ ಸಾಗಿಸಿದರು. ಸೆರೆಯಾಗಿರುವ ಚಿರತೆಯು 6 ವರ್ಷ ವಯಸ್ಸಿನ ಗಂಡು ಚಿರತೆ ಎಂದು ತಿಳಿದುಬಂದಿದೆ. ಅದನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.</p>.<p>ಡಿಸಿಎಫ್ ಬಸವರಾಜು, ಮಹೇಶ್ ಕುಮಾರ್, ಎಸಿಎಫ್ ಲಕ್ಷೀಕಾಂತ್, ಡಿವೈಎಸ್ಪಿ ಗೋವಿಂದರಾಜು, ಸಿಪಿಐ ಆನಂದ್, ಲೋಲಾಕ್ಷಿ, ಪಿಎಸ್ಐಗಳಾದ ತಿರುಮಲ್ಲೇಶ್, ಪಚ್ಚೇಗೌಡ, ವಲಯ ಅರಣ್ಯಾಧಿಕಾರಿ ಸೈಯದ್ ನದೀಮ್, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಇದ್ದರು.</p>.<p>ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ಬಾಲಕನನ್ನು ಕೊಂದ ಘಟನೆ ನಡೆದಿತ್ತು. ಇದರಿಂದ, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈಗ ಸೆರೆ ಸಿಕ್ಕಿರುವುದು ಬಾಲಕನನ್ನು ಕೊಂದ ಚಿರತೆಯೇ ಎನ್ನುವುದು ಖಚಿತವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>