‘ಸಂತ್ರಸ್ತೆಯರು ಎಂದು ವಿಚಾರಣೆಗೆ ಕರೆದೊಯ್ದವರನ್ನು ಇಲ್ಲಿಯವರೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸದೆ, ಮಹಜರು ನಡೆಸದೆ, ಸೆಕ್ಷನ್ 164 ವಿಧಿಸಿಲ್ಲ ಯಾಕೆ? ಇವು ಅಧಿಕಾರಿಗಳ ಬಗೆಗಿನ ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ನಮ್ಮ ಪ್ರಾದೇಶಿಕ ಪಕ್ಷವನ್ನು ಪೊಲೀಸರ ಮೂಲಕ ಮುಗಿಸುವ ಹುನ್ನಾರವನ್ನು ಕಾಂಗ್ರೆಸ್ನ ಕೆಲ ನಾಯಕರು ಮಾಡುತ್ತಿದ್ದಾರೆ. ಈ ಸಂಚಿನ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.