ಕೃಷಿ ವಲಯದ ವಿಶೇಷ ತಾಂತ್ರಿಕ ಅಧಿಕಾರಿ ಶುಭಾ ಪುಟ್ಟಸ್ವಾಮಿ ಮಾತನಾಡಿ, ‘ಕೃಷಿಯಲ್ಲಿ ತೊಡಗಿಕೊಂಡ ಮಹಿಳೆಯರಲ್ಲಿ ಕ್ಷಮತೆ, ಚಾತುರ್ಯವನ್ನು ಬೆಳೆಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಅವರಿಗೆ ಸರ್ಕಾರದ ಯೋಜನೆಗಳನ್ನು ಪರಿಚಯಿಸುವ ಕೆಲಸವಾಗಬೇಕು. ಆ ಮೂಲಕ ಮಹಿಳೆಯರು ಅವಕಾಶಗಳನ್ನು ಪಡೆದುಕೊಂಡು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಆಗಬೇಕು’ ಎಂದು ಆಶಿಸಿದರು.