<p><strong>ಮೈಸೂರು:</strong> ‘ರಾಜ್ಕುಮಾರ್ ಸಿನಿಮಾಗಳು ಜನರಿಗೆ ಇತಿಹಾಸ, ಪುರಾಣ, ವಾಸ್ತವದ ವಿಚಾರಗಳನ್ನು ತಿಳಿಸಿದವು. ಆದರೆ ಸರ್ಕಾರ, ವಿಶ್ವವಿದ್ಯಾಲಯಗಳು ಅವರನ್ನು ಜನರ ಬಳಿ ತಲುಪಿಸುವ ಕಾರ್ಯ ಮಾಡಲಿಲ್ಲ’ ಎಂದು ನಟ ಮಂಡ್ಯ ರಮೇಶ್ ತಿಳಿಸಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಡಾ.ರಾಜಕುಮಾರ್ ಅಧ್ಯಯನ ಪೀಠವು ಶೇಷಾದ್ರಿಪುರಂ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಕುಮಾರ್ ಕುರಿತ ಸಾಕ್ಷ್ಯಚಿತ್ರ ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಸರ್ಕಾರ ಆರಂಭಿಸುವ ಅಕಾಡೆಮಿಗಳ ಆಶಯ ಯುವ ಸಮೂಹವನ್ನು ತಲುಪಬೇಕು. ಪ್ರಸ್ತುತ ಯುವ ಜನತೆ ರಾಜ್ಕುಮಾರ್ ಅವರನ್ನು ಪುನೀತ್ ರಾಜ್ಕುಮಾರ್ ಅವರ ಅಪ್ಪ ಎಂದು ಗುರುತಿಸುತ್ತಾರೆ. ಅಂದರೆ ರಾಜ್ಕುಮಾರ್ ಹಿರಿಮೆಯನ್ನು ಮಕ್ಕಳಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ’ ಎಂದು ವಿವರಿಸಿದರು.</p>.<p>‘ರಾಜ್ಕುಮಾರ್ ಅವರನ್ನು ಪಠ್ಯವಾಗಿ ಗಮನಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇನೆ. ಅವರ ಆಂಗಿಕ, ಭಾವ ಪೂರ್ಣ ಆಂತರ್ಯದ ಭಾಷೆಗಳು ನಮ್ಮ ಹೃದಯ ಮುಟ್ಟುತ್ತದೆ. ಹುಬ್ಬಿನ ಚಲನೆ, ಸ್ವರದ ಏರಿಳಿತಗಳು ಕಥೆಯ ನಡುವೆ ಹೇಳಲು ಸಾಧ್ಯವಾಗದ ವಿಚಾರಗಳನ್ನು ಪ್ರೇಕ್ಷಕನಿಗೆ ಮುಟ್ಟಿಸುತ್ತವೆ’ ಎಂದು ತಿಳಿಸಿದರು.</p>.<p>‘ಇಂದಿನ ಕೆಲವು ಕಲಾವಿದರು ಮುಖವನ್ನು ಕೂದಲಿನಿಂದ ಮುಚ್ಚಿಟ್ಟುಕೊಂಡು ಅಭಿನಯಿಸುತ್ತಾರೆ. ವಾಕ್ಯ ದೋಷಗಳು ಎದ್ದು ಕಾಣುತ್ತವೆ. ಹೀಗಾಗಿ ನಟನೆಗೆ ಬರುವವರು ರಾಜ್ಕುಮಾರ್ ಅವರ ಕುರಿತು ಓದಿಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿದರು.</p>.<p>ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಡಿ.ವಿ.ಪರಶಿವಮೂರ್ತಿ ಮಾತನಾಡಿ, ‘ರಾಜ್ಕುಮಾರ್ ನಡವಳಿಕೆ ಹಾಗೂ ಸಿನಿಮಾಗಳಿಂದ ಸಂಸ್ಕೃತಿ ನಿರ್ಮಾಣವಾಗಿದೆ. ಇಂದಿನ ಸಿನಿಮಾಗಳನ್ನು ತುಲನೆ ಮಾಡಿದಾಗ ರಾಜ್ ಸಿನಿಮಾದ ಮಹತ್ವ ಮತ್ತು ಸಂದೇಶದ ಅರಿವಾಗುತ್ತದೆ’ ಎಂದರು.</p>.<p>‘ಯುವ ಸಮೂಹವು ರಾಜ್ಕುಮಾರ್ ಸಿನಿಮಾ ಹಾಗೂ ಹಾಡುಗಳು ಹಳೆಯ ಕಾಲದವು ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದೆ. ಆದರೆ ಅವುಗಳಲ್ಲಿ ಮನಸ್ಸು ವಿಕಾಸವಾಗುವ ಹಾಗೂ ನಮ್ಮನ್ನು ತಿದ್ದುವ ವಿಚಾರಗಳಿವೆ. ಜೀವನ ಮೌಲ್ಯ ಕಲಿಯಲು ಅವರ ಸಿನಿಮಾ ನೋಡಬೇಕು’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ಪ್ರೊ.ಜಿ.ಪ್ರಶಾಂತ್ ನಾಯಕ್ ಬರೆದ ‘ಡಾ.ರಾಜಕುಮಾರ್ ಬಹುತ್ವದ ಪ್ರಜ್ಞೆ’, ಪ್ರೊ.ಡಿ.ಸತೀಶ್ಚಂದ್ರ ಬರೆದ ‘ಡಾ.ರಾಜ್ ಚಿತ್ರಗೀತೆಗಳಲ್ಲಿ ಬಾಂಧವ್ಯದ ನೆಲೆಗಳು’, ಬಿ.ಎಂ.ಗಿರಿರಾಜ್ ನಿರ್ದೇಶಿಸಿದ ‘ಡಾ.ರಾಜಕುಮಾರ್: ಒಂದು ಕಿರು ಅವಲೋಕನ’ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿತು.</p>.<p>ಶೇಷಾದ್ರಿಪುರಂ ಪದವಿ ಕಾಲೇಜಿನ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬಂಡ, ರಾಜಕುಮಾರ್ ಅಧ್ಯಯನ ಪೀಠದ ಸಂಚಾಲಕ ಎ.ಎಸ್.ಪ್ರಭಾಕರ, ಚಿಂತಕ ಎಂ.ಕೃಷ್ಣೇಗೌಡ, ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಈರಪ್ಪ, ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಮೆಹು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ರಾಜ್ಕುಮಾರ್ ಸಿನಿಮಾಗಳು ಜನರಿಗೆ ಇತಿಹಾಸ, ಪುರಾಣ, ವಾಸ್ತವದ ವಿಚಾರಗಳನ್ನು ತಿಳಿಸಿದವು. ಆದರೆ ಸರ್ಕಾರ, ವಿಶ್ವವಿದ್ಯಾಲಯಗಳು ಅವರನ್ನು ಜನರ ಬಳಿ ತಲುಪಿಸುವ ಕಾರ್ಯ ಮಾಡಲಿಲ್ಲ’ ಎಂದು ನಟ ಮಂಡ್ಯ ರಮೇಶ್ ತಿಳಿಸಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಡಾ.ರಾಜಕುಮಾರ್ ಅಧ್ಯಯನ ಪೀಠವು ಶೇಷಾದ್ರಿಪುರಂ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಕುಮಾರ್ ಕುರಿತ ಸಾಕ್ಷ್ಯಚಿತ್ರ ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಸರ್ಕಾರ ಆರಂಭಿಸುವ ಅಕಾಡೆಮಿಗಳ ಆಶಯ ಯುವ ಸಮೂಹವನ್ನು ತಲುಪಬೇಕು. ಪ್ರಸ್ತುತ ಯುವ ಜನತೆ ರಾಜ್ಕುಮಾರ್ ಅವರನ್ನು ಪುನೀತ್ ರಾಜ್ಕುಮಾರ್ ಅವರ ಅಪ್ಪ ಎಂದು ಗುರುತಿಸುತ್ತಾರೆ. ಅಂದರೆ ರಾಜ್ಕುಮಾರ್ ಹಿರಿಮೆಯನ್ನು ಮಕ್ಕಳಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ’ ಎಂದು ವಿವರಿಸಿದರು.</p>.<p>‘ರಾಜ್ಕುಮಾರ್ ಅವರನ್ನು ಪಠ್ಯವಾಗಿ ಗಮನಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇನೆ. ಅವರ ಆಂಗಿಕ, ಭಾವ ಪೂರ್ಣ ಆಂತರ್ಯದ ಭಾಷೆಗಳು ನಮ್ಮ ಹೃದಯ ಮುಟ್ಟುತ್ತದೆ. ಹುಬ್ಬಿನ ಚಲನೆ, ಸ್ವರದ ಏರಿಳಿತಗಳು ಕಥೆಯ ನಡುವೆ ಹೇಳಲು ಸಾಧ್ಯವಾಗದ ವಿಚಾರಗಳನ್ನು ಪ್ರೇಕ್ಷಕನಿಗೆ ಮುಟ್ಟಿಸುತ್ತವೆ’ ಎಂದು ತಿಳಿಸಿದರು.</p>.<p>‘ಇಂದಿನ ಕೆಲವು ಕಲಾವಿದರು ಮುಖವನ್ನು ಕೂದಲಿನಿಂದ ಮುಚ್ಚಿಟ್ಟುಕೊಂಡು ಅಭಿನಯಿಸುತ್ತಾರೆ. ವಾಕ್ಯ ದೋಷಗಳು ಎದ್ದು ಕಾಣುತ್ತವೆ. ಹೀಗಾಗಿ ನಟನೆಗೆ ಬರುವವರು ರಾಜ್ಕುಮಾರ್ ಅವರ ಕುರಿತು ಓದಿಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿದರು.</p>.<p>ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಡಿ.ವಿ.ಪರಶಿವಮೂರ್ತಿ ಮಾತನಾಡಿ, ‘ರಾಜ್ಕುಮಾರ್ ನಡವಳಿಕೆ ಹಾಗೂ ಸಿನಿಮಾಗಳಿಂದ ಸಂಸ್ಕೃತಿ ನಿರ್ಮಾಣವಾಗಿದೆ. ಇಂದಿನ ಸಿನಿಮಾಗಳನ್ನು ತುಲನೆ ಮಾಡಿದಾಗ ರಾಜ್ ಸಿನಿಮಾದ ಮಹತ್ವ ಮತ್ತು ಸಂದೇಶದ ಅರಿವಾಗುತ್ತದೆ’ ಎಂದರು.</p>.<p>‘ಯುವ ಸಮೂಹವು ರಾಜ್ಕುಮಾರ್ ಸಿನಿಮಾ ಹಾಗೂ ಹಾಡುಗಳು ಹಳೆಯ ಕಾಲದವು ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದೆ. ಆದರೆ ಅವುಗಳಲ್ಲಿ ಮನಸ್ಸು ವಿಕಾಸವಾಗುವ ಹಾಗೂ ನಮ್ಮನ್ನು ತಿದ್ದುವ ವಿಚಾರಗಳಿವೆ. ಜೀವನ ಮೌಲ್ಯ ಕಲಿಯಲು ಅವರ ಸಿನಿಮಾ ನೋಡಬೇಕು’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ಪ್ರೊ.ಜಿ.ಪ್ರಶಾಂತ್ ನಾಯಕ್ ಬರೆದ ‘ಡಾ.ರಾಜಕುಮಾರ್ ಬಹುತ್ವದ ಪ್ರಜ್ಞೆ’, ಪ್ರೊ.ಡಿ.ಸತೀಶ್ಚಂದ್ರ ಬರೆದ ‘ಡಾ.ರಾಜ್ ಚಿತ್ರಗೀತೆಗಳಲ್ಲಿ ಬಾಂಧವ್ಯದ ನೆಲೆಗಳು’, ಬಿ.ಎಂ.ಗಿರಿರಾಜ್ ನಿರ್ದೇಶಿಸಿದ ‘ಡಾ.ರಾಜಕುಮಾರ್: ಒಂದು ಕಿರು ಅವಲೋಕನ’ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿತು.</p>.<p>ಶೇಷಾದ್ರಿಪುರಂ ಪದವಿ ಕಾಲೇಜಿನ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬಂಡ, ರಾಜಕುಮಾರ್ ಅಧ್ಯಯನ ಪೀಠದ ಸಂಚಾಲಕ ಎ.ಎಸ್.ಪ್ರಭಾಕರ, ಚಿಂತಕ ಎಂ.ಕೃಷ್ಣೇಗೌಡ, ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಈರಪ್ಪ, ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಮೆಹು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>