ಕಾವೇರಿ ನದಿ ತೀರದ ಮರಡಿ ಗುಡ್ಡದಲ್ಲಿ ನೆಲೆಸಿರುವ ಮುರುಡೇಶ್ವರ ಕ್ಷೇತ್ರವು ಪ್ರಸಿದ್ಧವಾಗಿದೆ. ಪ್ರತಿ ವರ್ಷ ಮಾರ್ಚ್– ಏಪ್ರಿಲ್ನಲ್ಲಿ ಮರುಡೇಶ್ವರ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಅರ್ಚಕರ ಸಮೂಹದಿಂದ ಮುಂಜಾನೆಯಿಂದಲೇ ದೇವರಿಗೆ ವಿಶೇಷ, ಪೂಜೆ, ಅಲಂಕಾರ, ಅಭಿಷೇಕಗಳು ನಡೆದವು. ಬಳಿಕ, ತಹಶೀಲ್ದಾರ್ ಸುರೇಶ್ ಆಚಾರ್ ಉಪಸ್ಥಿತಿಯಲ್ಲಿ ವಿಘ್ನೇಶ್ವರ, ಸುಬ್ರಹ್ಮಣ್ಯೇಶ್ವರ ಹಾಗೂ ಮರುಡೇಶ್ವರ ಬ್ರಹ್ಮ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಮಧ್ಯಾಹ್ನ 1.45ಕ್ಕೆ ಚಾಲನೆ ನೀಡಲಾಯಿತು.