<p><strong>ಮೈಸೂರು:</strong> ‘ಸುವರ್ಣ ಕರ್ನಾಟಕ ಸಂಭ್ರಮ ನಾಡಿನ ಚಾರಿತ್ರಿಕ ಸನ್ನಿವೇಶವಾಗಿದೆ. ಇದು ಕೇವಲ ಸರ್ಕಾರಿ ಉತ್ಸವವಾಗದೇ ಜನರ ಉತ್ಸವ ಆಗಬೇಕು’ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಆಶಿಸಿದರು.</p>.<p>ನಗರದ ಕಲಾಂದಿಕಾ ಭವನದಲ್ಲಿ ಗುರುವಾರ ಕನ್ನಡ ಬೆಳಕು ‘ಸುವರ್ಣ ಕರ್ನಾಟಕ ಸಂಭ್ರಮ-50’ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರು ದಸರಾವನ್ನು ನಾಡಹಬ್ಬವೆಂದು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ನಮ್ಮ ಪರಂಪರೆಯ ಜತೆ ಕೊಂಡಿಯನ್ನು ಬೆಸೆದಿದೆ. ಇದೇ ರೀತಿ ನಮ್ಮ ಕನ್ನಡ ಏಕೀಕರಣದ ಆಚರಣೆಯೂ ಆಗಬೇಕು ಎಂದರು.</p>.<p>‘ಪ್ರಸ್ತುತ ದಿನದಲ್ಲಿ ಹೋರಾಟಗಳಿಗೆ ಕಾಲವಲ್ಲ. ಯಾರು ಹೋರಾಟ ಮಾಡುತ್ತಾರೋ ಅವರ ಮನೆಯ ಮುಂದೆ ಜೆಸಿಬಿಗಳು, ಬುಲ್ಡೋಜರ್ಗಳು ಬಂದು ನಿಂತಿರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾದ-ವಾಗ್ವಾದ, ಸಂವಾದಗಳು, ಆರೋಗ್ಯಕರ ಚರ್ಚೆಗಳು ನಡೆಯಲು ಮುಕ್ತವಾದ ವಾತಾವರಣವಿರಬೇಕು. ಸ್ವಾತಂತ್ರ ನಾಡನ್ನು ಕಟ್ಟಲು ಸುರಿದ ಬೆವರಿನ ಮೌಲ್ಯವನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ’ ಎಂದರು.</p>.<p>ಕಾರ್ಯಕ್ರಮವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು. ಕನ್ನಡ ನಾಡು-ನುಡಿಯಂತಹ ಕಾರ್ಯಕ್ರಮಗಳಿಗೆ ಜನರು ಹೆಚ್ಚು-ಹೆಚ್ಚಾಗಿ ಭಾಗವಹಿಸಬೇಕು ಎಂದರು.</p>.<p>ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಹರೀಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಪ್ರೊ. ಎಸ್. ಶಿವರಾಜಪ್ಪ, ನಿವೃತ್ತ ಐಎಫ್ಎಸ್ ಅಧಿಕಾರಿ ಡಾ. ಆರ್.ರಾಜು, ಜೆಎಸ್ಎಸ್-ಎಎಚ್ಇಆರ್ ಕುಲಪತಿ ಡಾ. ಬಸವನಗೌಡಪ್ಪ, ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ವೈ.ಡಿ. ರಾಜಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಸುವರ್ಣ ಕರ್ನಾಟಕ ಸಂಭ್ರಮ ನಾಡಿನ ಚಾರಿತ್ರಿಕ ಸನ್ನಿವೇಶವಾಗಿದೆ. ಇದು ಕೇವಲ ಸರ್ಕಾರಿ ಉತ್ಸವವಾಗದೇ ಜನರ ಉತ್ಸವ ಆಗಬೇಕು’ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಆಶಿಸಿದರು.</p>.<p>ನಗರದ ಕಲಾಂದಿಕಾ ಭವನದಲ್ಲಿ ಗುರುವಾರ ಕನ್ನಡ ಬೆಳಕು ‘ಸುವರ್ಣ ಕರ್ನಾಟಕ ಸಂಭ್ರಮ-50’ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರು ದಸರಾವನ್ನು ನಾಡಹಬ್ಬವೆಂದು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ನಮ್ಮ ಪರಂಪರೆಯ ಜತೆ ಕೊಂಡಿಯನ್ನು ಬೆಸೆದಿದೆ. ಇದೇ ರೀತಿ ನಮ್ಮ ಕನ್ನಡ ಏಕೀಕರಣದ ಆಚರಣೆಯೂ ಆಗಬೇಕು ಎಂದರು.</p>.<p>‘ಪ್ರಸ್ತುತ ದಿನದಲ್ಲಿ ಹೋರಾಟಗಳಿಗೆ ಕಾಲವಲ್ಲ. ಯಾರು ಹೋರಾಟ ಮಾಡುತ್ತಾರೋ ಅವರ ಮನೆಯ ಮುಂದೆ ಜೆಸಿಬಿಗಳು, ಬುಲ್ಡೋಜರ್ಗಳು ಬಂದು ನಿಂತಿರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾದ-ವಾಗ್ವಾದ, ಸಂವಾದಗಳು, ಆರೋಗ್ಯಕರ ಚರ್ಚೆಗಳು ನಡೆಯಲು ಮುಕ್ತವಾದ ವಾತಾವರಣವಿರಬೇಕು. ಸ್ವಾತಂತ್ರ ನಾಡನ್ನು ಕಟ್ಟಲು ಸುರಿದ ಬೆವರಿನ ಮೌಲ್ಯವನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ’ ಎಂದರು.</p>.<p>ಕಾರ್ಯಕ್ರಮವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು. ಕನ್ನಡ ನಾಡು-ನುಡಿಯಂತಹ ಕಾರ್ಯಕ್ರಮಗಳಿಗೆ ಜನರು ಹೆಚ್ಚು-ಹೆಚ್ಚಾಗಿ ಭಾಗವಹಿಸಬೇಕು ಎಂದರು.</p>.<p>ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಹರೀಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಪ್ರೊ. ಎಸ್. ಶಿವರಾಜಪ್ಪ, ನಿವೃತ್ತ ಐಎಫ್ಎಸ್ ಅಧಿಕಾರಿ ಡಾ. ಆರ್.ರಾಜು, ಜೆಎಸ್ಎಸ್-ಎಎಚ್ಇಆರ್ ಕುಲಪತಿ ಡಾ. ಬಸವನಗೌಡಪ್ಪ, ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ವೈ.ಡಿ. ರಾಜಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>