<p><strong>ಮೈಸೂರು: </strong>ಸಂಜೆ ವೇಳೆ ಬೆಂಗಳೂರು– ಮೈಸೂರು ನಡುವಿನ ರೈಲಿನ ಕೊರತೆ ನೀಗಿಸುವ ಸಲುವಾಗಿ ನೈರುತ್ಯ ರೈಲ್ವೆಯು ಕೇಂದ್ರೀಯ ರೈಲ್ವೆ ಮಂಡಳಿಗೆ ವಾರದಲ್ಲಿ ನಾಲ್ಕು ದಿನ ವಿಶೇಷ ವಿದ್ಯುತ್ ರೈಲು (ಮೆಮು) ನೀಡುವಂತೆ ಪ್ರಸ್ತಾವ ಸಲ್ಲಿಸಿದೆ.</p>.<p>ಮೈಸೂರಿನ ಮುಖಾಂತರ ಬೆಂಗಳೂರು– ಕಾರವಾರ ರೈಲು ವಾರದ ಮೂರು ದಿನಗಳು ಮಾತ್ರ ಸಂಚರಿಸುತ್ತಿದೆ. ಹಾಗಾಗಿ, ಬಾಕಿ ನಾಲ್ಕು ದಿನಗಳು ರಾತ್ರಿ 8ರ ನಂತರ ಮೈಸೂರಿಗೆ ರೈಲು ಇಲ್ಲದಂತೆ ಆಗಿದೆ. ಇದರಿಂದ ರೈಲಿನಲ್ಲಿ ಮೈಸೂರಿಗೆ ಬರುತ್ತಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಬಸ್ಸಿನಲ್ಲಿ ಬರುವಂತೆ ಆಗಿದೆ. ಈ ಕುರಿತು ಪ್ರಯಾಣಿಕರುನಿರಂತರವಾಗಿ ನೈರುತ್ಯ ರೈಲ್ವೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಪತ್ರ ಬರೆದಿದೆ.</p>.<p>ಈಗ ಪ್ರತಿದಿನ ರಾತ್ರಿ 8ಕ್ಕೆ ಬೆಂಗಳೂರಿನಿಂದ ರಾಮನಗರಕ್ಕೆ ಸಂಚರಿಸುತ್ತಿರುವ ‘ಮೆಮು’ ರೈಲನ್ನು ಮೈಸೂರಿಗೆ ವಿಸ್ತರಿಸುವಂತೆ ಕೋರಿದೆ. ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಮೈಸೂರಿನವರೆಗೆ ಈ ರೈಲನ್ನು ನೀಡುವಂತೆ ಮನವಿ ಮಾಡಿದೆ. ಇದು ತಾತ್ಕಾಲಿಕ ರೈಲಾಗಿದ್ದು, 2019ರಫೆಬ್ರವರಿವರೆಗೆ ಮಾತ್ರ ಈ ರೈಲು ಸಂಚರಿಸಲಿದೆ. ಬಳಿಕ, ಮತ್ತೆ ಮನವಿ ಸಲ್ಲಿಸಿ ಈ ವಿಶೇಷ ರೈಲನ್ನು ಮರು ಪಡೆಯಬೇಕಾಗುತ್ತದೆ.</p>.<p><strong>ಪ್ರತಾಪ ಸಿಂಹ ಮನವಿ</strong></p>.<p>ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ ಸಿಂಹ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ್ದು, ಈ ವಿಶೇಷ ರೈಲನ್ನು ನೀಡುವಂತೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಸಂಜೆ ವೇಳೆ ಬೆಂಗಳೂರು– ಮೈಸೂರು ನಡುವಿನ ರೈಲಿನ ಕೊರತೆ ನೀಗಿಸುವ ಸಲುವಾಗಿ ನೈರುತ್ಯ ರೈಲ್ವೆಯು ಕೇಂದ್ರೀಯ ರೈಲ್ವೆ ಮಂಡಳಿಗೆ ವಾರದಲ್ಲಿ ನಾಲ್ಕು ದಿನ ವಿಶೇಷ ವಿದ್ಯುತ್ ರೈಲು (ಮೆಮು) ನೀಡುವಂತೆ ಪ್ರಸ್ತಾವ ಸಲ್ಲಿಸಿದೆ.</p>.<p>ಮೈಸೂರಿನ ಮುಖಾಂತರ ಬೆಂಗಳೂರು– ಕಾರವಾರ ರೈಲು ವಾರದ ಮೂರು ದಿನಗಳು ಮಾತ್ರ ಸಂಚರಿಸುತ್ತಿದೆ. ಹಾಗಾಗಿ, ಬಾಕಿ ನಾಲ್ಕು ದಿನಗಳು ರಾತ್ರಿ 8ರ ನಂತರ ಮೈಸೂರಿಗೆ ರೈಲು ಇಲ್ಲದಂತೆ ಆಗಿದೆ. ಇದರಿಂದ ರೈಲಿನಲ್ಲಿ ಮೈಸೂರಿಗೆ ಬರುತ್ತಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಬಸ್ಸಿನಲ್ಲಿ ಬರುವಂತೆ ಆಗಿದೆ. ಈ ಕುರಿತು ಪ್ರಯಾಣಿಕರುನಿರಂತರವಾಗಿ ನೈರುತ್ಯ ರೈಲ್ವೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಪತ್ರ ಬರೆದಿದೆ.</p>.<p>ಈಗ ಪ್ರತಿದಿನ ರಾತ್ರಿ 8ಕ್ಕೆ ಬೆಂಗಳೂರಿನಿಂದ ರಾಮನಗರಕ್ಕೆ ಸಂಚರಿಸುತ್ತಿರುವ ‘ಮೆಮು’ ರೈಲನ್ನು ಮೈಸೂರಿಗೆ ವಿಸ್ತರಿಸುವಂತೆ ಕೋರಿದೆ. ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಮೈಸೂರಿನವರೆಗೆ ಈ ರೈಲನ್ನು ನೀಡುವಂತೆ ಮನವಿ ಮಾಡಿದೆ. ಇದು ತಾತ್ಕಾಲಿಕ ರೈಲಾಗಿದ್ದು, 2019ರಫೆಬ್ರವರಿವರೆಗೆ ಮಾತ್ರ ಈ ರೈಲು ಸಂಚರಿಸಲಿದೆ. ಬಳಿಕ, ಮತ್ತೆ ಮನವಿ ಸಲ್ಲಿಸಿ ಈ ವಿಶೇಷ ರೈಲನ್ನು ಮರು ಪಡೆಯಬೇಕಾಗುತ್ತದೆ.</p>.<p><strong>ಪ್ರತಾಪ ಸಿಂಹ ಮನವಿ</strong></p>.<p>ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ ಸಿಂಹ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ್ದು, ಈ ವಿಶೇಷ ರೈಲನ್ನು ನೀಡುವಂತೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>