<p><strong>ಹುಣಸೂರು:</strong> ಜೋಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣದಲ್ಲಿ ಮೊಬೈಲ್ ಕರೆ ಆಧರಿಸಿ ಬಂಧಿಸಲಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಪೂವಯ್ಯ ತಿಳಿಸಿದರು.</p>.<p>ಘಟನೆ ವಿವರ: ಆ.28 ರಂದು ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಸರ್ವೆ ನಂ 25ರ ದೇವೇಂದ್ರ ಎಂಬುವವರ ಹೊಲದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅವಷೇಶ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡು ವಿಚಾರಣೆ ಹಂತದಲ್ಲಿ ಸತ್ತ ವ್ಯಕ್ತಿಯೂ ಮಾನವ ಮಾನವ ಅಲಿಯಾಸ್ ರಾಜಪ್ಪ (38) ಎಂದು ತಿಳಿದುಬಂದಿತ್ತು.</p>.<p>ಈ ಘಟನೆಯಲ್ಲಿ ಮುನಿಯಪ್ಪ ಮತ್ತು ರಾಜು ಎಂಬ ಸಹೋದರರು ಮುಖ್ಯ ಆರೋಪಿಯಾಗಿದ್ದು, ಇವರು ದೇವಸ್ಥಾನಗಳಲ್ಲಿ ಹುಂಡಿ ಒಡೆದು ಹಣ ಕಳ್ಳತನ ಮಾಡುವುದು ವೃತ್ತಿಯಾಗಿತ್ತು. ಗೌಡನಕಟ್ಟೆ ಘಟನೆಯಲ್ಲಿ ಮನಸ್ತಾಪ ಎದುರಾದ ಬಳಿಕ ಮಾನವನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದರು.</p>.<p>ಮತ್ತೊಂದು ಕೊಲೆ: ಆರೋಪಿ ಸಹೋದರರಾದ ಮುನಿಯಪ್ಪ ಮತ್ತು ರಾಜು ಇಬ್ಬರು ಕಾಲ್ನಡಿಗೆಯಲ್ಲಿ ವಿವಿಧ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿ ಸ್ವಂತ ಮೊಬೈಲ್ ಇಲ್ಲದ ಕಾರಣ, ತನ್ನ ಸಂಬಂಧಿಕರಿಗೆ ದಾರಿಹೋಕರ ಫೋನ್ ಮೂಲಕ ಕರೆ ಮಾಡುತ್ತಿದ್ದ. ಈ ಮಧ್ಯೆ ಆರೋಪಿ ಮುನಿಯಪ್ಪ ತನ್ನ ಚಿಕ್ಕಪ್ಪನ ಮಗಳು ಪೂಜಾಳಿಗೆ ದೂರವಾಣಿ ಕರೆ ಮಾಡಿದ ಖಚಿತ ಮಾಹಿತಿ ಆಧರಿಸಿ, ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.</p>.<p>ಕಾರ್ಯಾಚರಣೆಯಲ್ಲಿ ಪ್ರಭಾಕರ್, ಬೀರೇಗೌಡ, ಗಣೇಶ್, ಮಂಜುನಾಥ್, ಮಜಾಜ್, ಶಿವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ಜೋಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣದಲ್ಲಿ ಮೊಬೈಲ್ ಕರೆ ಆಧರಿಸಿ ಬಂಧಿಸಲಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಪೂವಯ್ಯ ತಿಳಿಸಿದರು.</p>.<p>ಘಟನೆ ವಿವರ: ಆ.28 ರಂದು ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಸರ್ವೆ ನಂ 25ರ ದೇವೇಂದ್ರ ಎಂಬುವವರ ಹೊಲದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅವಷೇಶ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡು ವಿಚಾರಣೆ ಹಂತದಲ್ಲಿ ಸತ್ತ ವ್ಯಕ್ತಿಯೂ ಮಾನವ ಮಾನವ ಅಲಿಯಾಸ್ ರಾಜಪ್ಪ (38) ಎಂದು ತಿಳಿದುಬಂದಿತ್ತು.</p>.<p>ಈ ಘಟನೆಯಲ್ಲಿ ಮುನಿಯಪ್ಪ ಮತ್ತು ರಾಜು ಎಂಬ ಸಹೋದರರು ಮುಖ್ಯ ಆರೋಪಿಯಾಗಿದ್ದು, ಇವರು ದೇವಸ್ಥಾನಗಳಲ್ಲಿ ಹುಂಡಿ ಒಡೆದು ಹಣ ಕಳ್ಳತನ ಮಾಡುವುದು ವೃತ್ತಿಯಾಗಿತ್ತು. ಗೌಡನಕಟ್ಟೆ ಘಟನೆಯಲ್ಲಿ ಮನಸ್ತಾಪ ಎದುರಾದ ಬಳಿಕ ಮಾನವನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದರು.</p>.<p>ಮತ್ತೊಂದು ಕೊಲೆ: ಆರೋಪಿ ಸಹೋದರರಾದ ಮುನಿಯಪ್ಪ ಮತ್ತು ರಾಜು ಇಬ್ಬರು ಕಾಲ್ನಡಿಗೆಯಲ್ಲಿ ವಿವಿಧ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿ ಸ್ವಂತ ಮೊಬೈಲ್ ಇಲ್ಲದ ಕಾರಣ, ತನ್ನ ಸಂಬಂಧಿಕರಿಗೆ ದಾರಿಹೋಕರ ಫೋನ್ ಮೂಲಕ ಕರೆ ಮಾಡುತ್ತಿದ್ದ. ಈ ಮಧ್ಯೆ ಆರೋಪಿ ಮುನಿಯಪ್ಪ ತನ್ನ ಚಿಕ್ಕಪ್ಪನ ಮಗಳು ಪೂಜಾಳಿಗೆ ದೂರವಾಣಿ ಕರೆ ಮಾಡಿದ ಖಚಿತ ಮಾಹಿತಿ ಆಧರಿಸಿ, ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.</p>.<p>ಕಾರ್ಯಾಚರಣೆಯಲ್ಲಿ ಪ್ರಭಾಕರ್, ಬೀರೇಗೌಡ, ಗಣೇಶ್, ಮಂಜುನಾಥ್, ಮಜಾಜ್, ಶಿವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>