ನಂತರ ಚನ್ನಕೇಶಸ್ವಾಮಿಗೆ ರಥೋತ್ಸವದ ವೇಳೆ ಆರ್.ಕೆ.ಪದ್ಮನಾಭ್, ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು, ಸಂಗೀತ ಪ್ರಿಯರು ಮತ್ತು ಸ್ಥಳೀಯರು ದೇವರನಾಮ ಸಂಕೀರ್ತನೆ ಹೇಳುತ್ತಾ ರಥದ ಮುಂದೆ ಕುಣಿದು ಕುಪ್ಪಳಿಸುತ್ತಾ ಸಾಗಿದ್ದು ವಿಶೇಷವಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾನ್ ಮೈಸೂರು ಎಂ.ನಾಗರಾಜು ಮತ್ತು ಮೈಸೂರು ಎಂ.ಮಂಜುನಾಥ್ ಯುಗಳ ಪಿಟೀಲುವಾದನ ಸಭಿಕರನ್ನು ಸಂಗೀತಲೋಕಕ್ಕೆ ಕರೆದೊಯ್ಯಿತು.