ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಪಕ್ಷಕ್ಕೆ ಲೀಡ್ ದೊರೆಯುವಂತೆ ನೋಡಿಕೊಳ್ಳುವಲ್ಲಿ ತಮ್ಮ ತಂಡದೊಂದಿಗೆ ಶ್ರಮಿಸಿದ್ದಾರೆ. ಅಂತೆಯೇ, ಜೆಡಿಎಸ್ ಶಾಸಕರಿರುವ ಚಾಮುಂಡೇಶ್ವರಿ (ಜಿ.ಟಿ.ದೇವೇಗೌಡ) ಹಾಗೂ ಹುಣಸೂರು (ಜಿ.ಡಿ. ಹರೀಶ್ ಗೌಡ) ಕ್ಷೇತ್ರಗಳಲ್ಲೂ ಯದುವೀರ್ ಲೀಡ್ ಪಡೆದಿದ್ದಾರೆ. ಬಿಜೆಪಿಯ ಸಂಘಟನೆಯು ಅಷ್ಟೊಂದು ಬಲವಾಗಿಯೇನೂ ಇರಲಿಲ್ಲ; ಆದರೆ, ಅದಕ್ಕೆ ಕೈಜೋಡಿಸಿದ ಜೆಡಿಎಸ್ ಹೆಚ್ಚಿನ ಶಕ್ತಿ ತುಂಬಿದೆ. ಸಿದ್ದರಾಮಯ್ಯ ವಿರೋಧಿ ಬಣವು ‘ಗುಪ್ತಗಾಮಿನಿ’ಯಂತೆ ಹರಿದು ಕೆಲಸ ಮಾಡಿದೆ!