<p><strong>ಮೈಸೂರು</strong>: ಕೊಳ್ಳೇಗಾಲದ ಲೇಖಕಿ ಪಿ.ಕಾತ್ಯಾಯಿನಿ ವಿರಚಿತ ‘ಬಿಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿಗಳನ್ನು ಇಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.</p><p>ಹೊಯ್ಸಳ ಕನ್ನಡ ಸಂಘ, ‘ಸವಿಗನ್ನಡ’ ಬಳಗದಿಂದ ಕಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಜಯನಗರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕೃತಿಗಳನ್ನು ಬಿಡುಗಡೆ ಮಾಡಿದರು.</p><p>ಉದ್ಘಾಟಿಸಿದ ಹೈದರಾಬಾದ್ನ ಸಾಹಿತಿ ಡಿ.ಬಿ. ರಾಘವೇಂದ್ರರಾವ್, ‘ಗಜಲ್ಗಳದು ಉತ್ತಮ ಲೋಕ. ನಿರಂತರವಾಗಿ ಬರೆಯುತ್ತಿದ್ದರೆ, ಭಾವನೆಗಳನ್ನೇ ವಸ್ತುವಾಗಿ ಇಟ್ಟುಕೊಂಡು ರಚನೆ ಸಿದ್ಧಿಸುತ್ತದೆ. ಗಜಲ್ಗಳಿಗೆ ಭಾವನೆಗಳು ಮುಖ್ಯ’ ಎಂದು ಹೇಳಿದರು.</p><p>‘ಬಚ್ಚಿಟ್ಟ ಭಾವಗಳು’ ಗಜಲ್ ಸಂಕಲನವನ್ನು ಪುತ್ತೂರಿನ ಪತ್ರಕರ್ತ ಗಣೇಶ್ಪ್ರಸಾದ್ ಪಾಂಡೇಲು ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ನ್ಯಾನೊ ಕಥಾಸಂಕಲನವನ್ನು ಹೊಯ್ಸಳ ಕನ್ನಡ ಸಂಘದ ಕಾರ್ಯದರ್ಶಿ ರಂಗನಾಥ್ ಮೈಸೂರು ಪರಿಚಯಿಸಿದರು.</p><p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕೊಳ್ಳೇಗಾಲ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಬಾಳಗುಣಸೆ ಮಂಜುನಾಥ್, ಸಿರಿಗನ್ನಡ ವೇದಿಕೆ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕಾ ಜೋಯ್ಸ್, ಲೇಖಕಿ ಬಿ.ಕೆ. ಮೀನಾಕ್ಷಿ, ಕೊ.ಸು. ನರಸಿಂಹಮೂರ್ತಿ ಮಾತನಾಡಿದರು.</p><p>ಮನಿಷಾ, ಪರಮೇಶ್ ಕೆ. ಉತ್ತನಹಳ್ಳಿ ಪ್ರೊ.ಆರ್.ಎ. ಕುಮಾರ್, ಆದಿಲ್ ಪಾಷ ಹಾಡಿದರು. ಕಾತ್ಯಾಯಿನಿ ಸ್ವಾಗತಿಸಿದರು. ಪ್ರಿಯಾ ಕಾರ್ತಿಕೇಯನ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕೊಳ್ಳೇಗಾಲದ ಲೇಖಕಿ ಪಿ.ಕಾತ್ಯಾಯಿನಿ ವಿರಚಿತ ‘ಬಿಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿಗಳನ್ನು ಇಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.</p><p>ಹೊಯ್ಸಳ ಕನ್ನಡ ಸಂಘ, ‘ಸವಿಗನ್ನಡ’ ಬಳಗದಿಂದ ಕಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಜಯನಗರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕೃತಿಗಳನ್ನು ಬಿಡುಗಡೆ ಮಾಡಿದರು.</p><p>ಉದ್ಘಾಟಿಸಿದ ಹೈದರಾಬಾದ್ನ ಸಾಹಿತಿ ಡಿ.ಬಿ. ರಾಘವೇಂದ್ರರಾವ್, ‘ಗಜಲ್ಗಳದು ಉತ್ತಮ ಲೋಕ. ನಿರಂತರವಾಗಿ ಬರೆಯುತ್ತಿದ್ದರೆ, ಭಾವನೆಗಳನ್ನೇ ವಸ್ತುವಾಗಿ ಇಟ್ಟುಕೊಂಡು ರಚನೆ ಸಿದ್ಧಿಸುತ್ತದೆ. ಗಜಲ್ಗಳಿಗೆ ಭಾವನೆಗಳು ಮುಖ್ಯ’ ಎಂದು ಹೇಳಿದರು.</p><p>‘ಬಚ್ಚಿಟ್ಟ ಭಾವಗಳು’ ಗಜಲ್ ಸಂಕಲನವನ್ನು ಪುತ್ತೂರಿನ ಪತ್ರಕರ್ತ ಗಣೇಶ್ಪ್ರಸಾದ್ ಪಾಂಡೇಲು ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ನ್ಯಾನೊ ಕಥಾಸಂಕಲನವನ್ನು ಹೊಯ್ಸಳ ಕನ್ನಡ ಸಂಘದ ಕಾರ್ಯದರ್ಶಿ ರಂಗನಾಥ್ ಮೈಸೂರು ಪರಿಚಯಿಸಿದರು.</p><p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕೊಳ್ಳೇಗಾಲ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಬಾಳಗುಣಸೆ ಮಂಜುನಾಥ್, ಸಿರಿಗನ್ನಡ ವೇದಿಕೆ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕಾ ಜೋಯ್ಸ್, ಲೇಖಕಿ ಬಿ.ಕೆ. ಮೀನಾಕ್ಷಿ, ಕೊ.ಸು. ನರಸಿಂಹಮೂರ್ತಿ ಮಾತನಾಡಿದರು.</p><p>ಮನಿಷಾ, ಪರಮೇಶ್ ಕೆ. ಉತ್ತನಹಳ್ಳಿ ಪ್ರೊ.ಆರ್.ಎ. ಕುಮಾರ್, ಆದಿಲ್ ಪಾಷ ಹಾಡಿದರು. ಕಾತ್ಯಾಯಿನಿ ಸ್ವಾಗತಿಸಿದರು. ಪ್ರಿಯಾ ಕಾರ್ತಿಕೇಯನ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>